Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉಡುಪಿಯಲ್ಲಿ ಮೋದಿ ಭೇಟಿ ವೇಳೆ ಪ್ರಮೋದ್...

ಉಡುಪಿಯಲ್ಲಿ ಮೋದಿ ಭೇಟಿ ವೇಳೆ ಪ್ರಮೋದ್ ಮಧ್ವರಾಜ್ ಕಡೆಗಣನೆಗೆ 'ಬಿರುವೆರ್ ಕುಡ್ಲ' ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ1 Dec 2025 10:55 AM IST
share
ಉಡುಪಿಯಲ್ಲಿ ಮೋದಿ ಭೇಟಿ ವೇಳೆ ಪ್ರಮೋದ್ ಮಧ್ವರಾಜ್ ಕಡೆಗಣನೆಗೆ ಬಿರುವೆರ್ ಕುಡ್ಲ ಆಕ್ರೋಶ
"ದುಡಿಮೆಗೆ ಬಿಲ್ಲವರು, ಮೊಗವೀರರು ಬೇಕು, ಗುರುತಿಸುವಿಕೆಗೆ ನಾವು ಬೇಡ?"

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉಡುಪಿ ಭೇಟಿ ನೀಡಿ ಲಕ್ಷಕಂಠ ಭಗವದ್ಗೀತಾ ಶ್ಲೋಕ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಕೃಷ್ಣಮಠಕ್ಕೆ ತೆರಳಿದ ಅವರು, ಕನಕನ ಕಿಂಡಿಗೆ ಸ್ವರ್ಣಲೇಪನವನ್ನು ಅನಾವರಣ ಮಾಡಿದರು.

ಉಡುಪಿಯ ಕೃಷ್ಣಮಠದಲ್ಲಿನ ಕನಕನ ಕಿಂಡಿಗೆ ಸ್ವರ್ಣಲೇಪನ ಕಾರ್ಯಕ್ಕಾಗಿ ಪ್ರಮುಖ ಕೊಡುಗೆ ನೀಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ರವಿವಾರ 'ಬಿರುವೆರ್‌ ಕುಡ್ಲʼ ಎಂಬ ಫೇಸ್‌ ಬುಕ್‌ ಪೇಜ್‌ ನಲ್ಲಿ ನಾನೊಬ್ಬ ಬಿಜೆಪಿ ಕಾರ್ಯಕರ್ತ, ಸ್ಥಳೀಯ ನಾಯಕರನ್ನು ಪ್ರಶ್ನಿಸುವ ಹಕ್ಕು ನನಗಿದೆ ಎಂದು ಪೋಸ್ಟರ್‌ ಹಂಚಿಕೊಳ್ಳಲಾಗಿದೆ. ಅಂದು “ನಾರಾಯಣ ಗುರು" ವೃತ್ತದೆಡೆ ಪ್ರಧಾನಿಗಳಾದ ಮೋದಿಯವರು ಆಗಮಿಸಿದಾಗ “ವೃತ್ತ ನಿರ್ಮಾಣಕ್ಕೆ ಶ್ರಮಿಸಿದ "ಉದಯ ಪೂಜಾರಿ”ಯವರನ್ನು ಕಡೆಗಣಿಸಿದಿರಿ. ಇಂದು “ಕನಕನ ಕಿಂಡಿ” ಉದ್ಘಾಟನೆಗೆ ಮೋದಿಯವರು ಆಗಮಿಸಿದಾಗ “ಸ್ವರ್ಣ ಲೇಪಿತ ಕನಕನ ಕಿಂಡಿ”ಯನ್ನೇ ಅರ್ಪಿಸಿದ “ಪ್ರಮೋದ್ ಮಧ್ವರಾಜ್' ರನ್ನು ಕಡೆಗಣಿಸಿದಿರಿ.

“ದುಡಿಮೆಗೆ ಬಿಲ್ಲವರು, ಮೊಗವೀರರು ಬೇಕು, ಗುರುತಿಸುವಿಕೆಗೆ ನಾವು ಬೇಡ?!?" ಚೆನ್ನಾಗಿದೆ ಎಂದು ಪೋಸ್ಟ್‌ ನಲ್ಲಿ ಬರೆಯಲಾಗಿದೆ.

ಈ ಪೋಸ್ಟ್ ಅನ್ನು ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. ಸುಮಾರು ೨೫೦ ಮಂದಿ ಕಮೆಂಟ್‌ ಮಾಡಿದ್ದಾರೆ. ೧೮೭ ಮಂದಿ ಶೇರ್‌ ಮಾಡಿದ್ದಾರೆ.

ಬಿರುವೆರ್ ಕುಡ್ಲ ಎಂಬುದು ಉದಯ್ ಪೂಜಾರಿ ಅವರ ನೇತೃತ್ವದ ಮಂಗಳೂರಿನ ಒಂದು ಪ್ರಮುಖ ಸಂಘಟನೆ. ತುಳು ಸಂಸ್ಕೃತಿ ಹಾಗು ಪರಂಪರೆ ಉಳಿಸಿ ಬೆಳೆಸುವುದಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಘೋಷಿಸಿಕೊಂಡಿರುವ ಈ ಸಂಘಟನೆಯ ನಾಯಕರು, ಕಾರ್ಯಕರ್ತರು ಬಿಜೆಪಿ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ.

ಈ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ Modified India ಎಂಬ ಬಳಕೆದಾರರು, ಯಶಪಾಲ್ ಯಾರು, ಶ್ರೀನಿವಾಸ ಪೂಜಾರಿ ಯಾರು , ಸುನಿಲ್ ಕುಮಾರ್ ಯಾರು , ನೀವು ಯಾವ ಟೈಪ್ ಹುಚ್ಚರು ಮಾರ್ರೆ, ಎಲ್ಲದಕ್ಕೂ ಜಾತಿ ಜಾತಿ ಅಂತ ಸಾಯ್ತೀರಿ ಎಂದು ಕಮೆಂಟ್‌ ಮಾಡಿದ್ದಾರೆ.

Uday Raikar ಎಂಬವರು, ಸಾಕು ನಿನ್ನ, ಕಾಂಗ್ರೆಸ್‌ ಥರ ಲೆಕ್ಚರ್‌. ಹುಳಿಯನ್ನು ಹಿಂಡ ಬೇಡ. ಸ್ವಾರ್ಥಕ್ಕೆ ಜಾತಿ ಮಾತಾಡಬೇಡ. ನಾವೆಲ್ಲರೂ ಹಿಂದು ಅಂಥ ಅರ್ಥ ಮಾಡಿಕೋ ಎಂದು ಹೇಳಿದ್ದಾರೆ.

Harish Acharya ಬಿಜೆಪಿಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಪದೇ ಪದೇ ಇದೇ ತಪ್ಪು ಮಾಡಿ ಮೋದಿಯ ಹೆಸರಿಗೆ ಕಪ್ಪು ಚುಕ್ಕೆ ತರುತ್ತಾ ಇದ್ದೀರಿ ಎಂದು ತಿಳಿಸಿದ್ದಾರೆ.

Sachin Acharya ಎಂಬವರು, ಇದೊಂದ್ ಬಾಕಿ ಇತ್ತು. ಪ್ರಮೋದ್ ಸರ್ ಇಲ್ಲಾ ಉದಯ ಪೂಜಾರ್ ಅಳ್ತಾ ಇದ್ರಾ. ನಮ್ಮ ಬಿಜೆಪಿಯಲ್ಲಿ ಹಿಂದುತ್ವವಾದಿ ಗಳು ಎಲ್ಲೂ ಪ್ರಚಾರ ಬಯಸಲ್ಲ. ಕೊಡೊ ಗೌರವಕ್ಕೆ ಅಷ್ಟೇ ಮರ್ಯಾದೆ ಕೊಡುತ್ತಾರೆ. ಕೇಳಿ ಮಾಡಿಸಿಕೊಳ್ಳುವುದಿಲ್ಲ. ಹೋದ ಸಲ ಒಂದಿಷ್ಟು ಜನಕ್ಕೆ ಅವಕಾಶ ಸಿಕ್ಕಿತ್ತು. ಈ ವರ್ಷ ಒಂದಿಷ್ಟು ಜನಕ್ಕೆ ಅವಕಾಶ ಸಿಕ್ಕಿದೆ ಅಷ್ಟೇ. ಏನು ತೊಂದರೆ ಆಗದೆ ಕಾರ್ಯಕ್ರಮ ಚೆನ್ನಾಗಿ ಆಯಿತಲ್ವಾ. ಖುಷಿ ಪಡೋಣ ಎಂದು ಕಮೆಂಟ್‌ ಮಾಡಿದ್ದಾರೆ.

ಬಿಜೆಪಿಯಲ್ಲಿ ಕರಾವಳಿಯ ಬಿಲ್ಲವರು, ಮೊಗವೀರರು ಕಾರ್ಯಕರ್ತರಾಗಿ , ಕಟ್ಟಾ ಬೆಂಬಲಿಗರಾಗಿ ದುಡಿಯುತ್ತಿದ್ದರೂ ನಿರ್ಣಾಯಕ ಸಂದರ್ಭಗಳಲ್ಲಿ, ನಾಯಕತ್ವ ನೀಡುವ ವಿಷಯದಲ್ಲಿ ಅವರನ್ನು ಕಡೆಗಣಿಸಲಾಗುತ್ತದೆ ಎಂದು ದೂರುತ್ತಲೇ ಬರಲಾಗಿದೆ. ಆದರೆ ಈಗ ಈ ಚರ್ಚೆ ಹೊಸ ರೂಪ ಪಡೆದುಕೊಂಡಿದೆ.

ಬಿಜೆಪಿಯ ಕಟ್ಟಾ ಬೆಂಬಲಿಗರೇ ಈಗ ಈ ಪ್ರಶ್ನೆ ಎತ್ತಿದ್ದಾರೆ. ನಾವು ಬಿಜೆಪಿಯ ಕಾರ್ಯಕರ್ತರು, ಇದು ಸರಿಯಲ್ಲ, ನಮ್ಮನ್ನು ಬಳಸಿಕೊಂಡು ಬಿಟ್ಟು ಬಿಡಲಾಗುತ್ತಿದೆ, ಇದನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲೇ ಪೋಸ್ಟ್ ಹಾಕುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X