Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಧರ್ಮಸ್ಥಳ ದೂರು| ಗ್ರಾ.ಪಂ.ಉಪಾಧ್ಯಕ್ಷ...

ಧರ್ಮಸ್ಥಳ ದೂರು| ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ್ ರಾವ್‌ರನ್ನು ತಕ್ಷಣ ಬಂಧಿಸಿ: ಎಸ್‌ಐಟಿ ಅಧಿಕಾರಿಗಳಿಗೆ ಸುಜಾತ ಭಟ್ ಪರ ವಕೀಲರ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ31 July 2025 6:58 PM IST
share
ಧರ್ಮಸ್ಥಳ ದೂರು| ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ್ ರಾವ್‌ರನ್ನು ತಕ್ಷಣ ಬಂಧಿಸಿ: ಎಸ್‌ಐಟಿ ಅಧಿಕಾರಿಗಳಿಗೆ ಸುಜಾತ ಭಟ್ ಪರ ವಕೀಲರ ಆಗ್ರಹ

ಮಂಗಳೂರು : ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾದವರ ಮೃತದೇಹವನ್ನು ಹೂತು ಹಾಕಿರುವ ಆರೋಪದ ಬಗ್ಗೆ ದೂರುದಾರನು ಹೇಳಿದ ಸ್ಥಳದಲ್ಲಿ ಗುರುವಾರ ಕಳೇಬರಗಳು ಪತ್ತೆಯಾಗಿದೆ. ಆದ್ದರಿಂದ ಈ ತನಿಖೆಯ ದಿಕ್ಕು ತಪ್ಪಿಸಲು ಸಾರ್ವಜನಿಕವಾಗಿ ಸುಳ್ಳು ಮಾಹಿತಿಯನ್ನು ಹರಡಿದ್ದ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್‌ ರನ್ನು ಎಸ್ ಐ ಟಿ ಅಧಿಕಾರಿಗಳು ತಕ್ಷಣ ಬಂಧಿಸಬೇಕು ಎಂದು, ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್ ಪರ ವಕೀಲ ಮಂಜುನಾಥ್ ಎನ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ವಕೀಲ ಮಂಜುನಾಥ್, ಜುಲೈ 3ರಂದು ದೂರುದಾರ ಸಾಕ್ಷಿಯು, ಧರ್ಮಸ್ಥಳದಲ್ಲಿ 1995 ರಿಂದ 2014ರ ಅವಧಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿರುವುದಾಗಿ ಹೇಳಿದ್ದರು. ಆ ಸಂದರ್ಭ ಕೆಲವರು ನನಗೆ ಜೀವ ಬೆದರಿಕೆಯೊಡ್ಡಿ, ಕೊಲೆಯಾದ ಪುರುಷ ಮತ್ತು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿಯರು ಮತ್ತು ಮಹಿಳೆಯರ ಮೃತದೇಹವನ್ನು ಹೂತು ಹಾಕಿಸಿದ್ದಾರೆ ಎಂದು ದೂರು ನೀಡಿದ್ದಾನೆ. ಮೃತದೇಹಗಳನ್ನು ಹೂತುಹಾಕಿರುವ ಬಗ್ಗೆ ಆತ ದೂರು ನೀಡಿದ ಬೆನ್ನಲ್ಲೇ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಎನ್ನುವ ವ್ಯಕ್ತಿಯು ಇತರೆ ಸಮಿತಿ ಸದಸ್ಯರ ಜೊತೆ ಸೇರಿ ಧರ್ಮಸ್ಥಳದಲ್ಲಿ ಯಾವುದೇ ಮೃತ ದೇಹಗಳನ್ನು ರಹಸ್ಯವಾಗಿ ಹೂತು ಹಾಕಲಾಗಿಲ್ಲ. ಪಂಚಾಯತ್ ವತಿಯಿಂದಲೇ ಸತ್ತ ವ್ಯಕ್ತಿಗಳನ್ನು ಹೂತು ಹಾಕಿದೆ ಎಂದು ಪತ್ರಿಕಾ ಪ್ರಕಟನೆಯನ್ನು ನೀಡುತ್ತಾ, ದೂರುದಾರನನ್ನು ಹುಚ್ಚನೆಂದು ಕರೆದಿದ್ದಾರೆ ಎಂದು ಸುಜಾತ ಭಟ್ ಪರ ವಕೀಲ ಮಂಜುನಾಥ್ ಆರೋಪಿಸಿದ್ದಾರೆ.

ಜುಲೈ 28ರಂದು ದೂರುದಾರನು ನೇತ್ರಾವತಿ ಸ್ನಾನಘಟ್ಟದಿಂದ ಸ್ವಲ್ಪ ದೂರಿನಲ್ಲಿರುವ ದುರ್ಗಮ ಕಾಡಿನಲ್ಲಿ ಕೆಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಎಸ್ಐಟಿ ಅವರಿಗೆ ತಿಳಿಸಿದ್ದಾರೆ. ಆ ಎಲ್ಲಾ ಸ್ಥಳಗಳನ್ನು ಎಸ್ಐಟಿ ಅಧಿಕಾರಿಗಳು ಗೊತ್ತುಪಡಿಸಿ ಅಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ. ದೂರುದಾರನು ಎಸ್ಐಟಿ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ತೋರಿಸಿರುವ ಸ್ಥಳಗಳನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿ ಸಾರ್ವಜನಿಕರು ದಿಗ್ಭ್ರಮೆಯನ್ನು ವ್ಯಕ್ತಪಡಿಸಿರುತ್ತಾರೆ. ಅಪಾಯಕಾರಿ ಸ್ಥಳಗಳು ಮತ್ತು ಸಾಗುವುದಕ್ಕೆ ಅತ್ಯಂತ ದುರ್ಗಮವಾದ ಸ್ಥಳಗಳನ್ನೇ ಹುಡುಕಿಕೊಂಡು ಹೋಗಿ ಮೃತದೇಹವನ್ನು ಹೂತು ಹಾಕುವ ಪರಿಪಾಠವನ್ನು ದೇಶದಲ್ಲಿನ ಯಾವುದೇ ಸರಕಾರ ಅಥವಾ ಪಂಚಾಯತ್‌ ಗಳು ಮಾಡುವುದಿಲ್ಲ. ಮೃತನ ಸಂಬಂಧಿಕರು ಹೂತು ಹಾಕಿರುವ ಸ್ಥಳವನ್ನು ಭೇಟಿ ನೀಡಬೇಕೆಂದು ಕೋರಿದರೆ, ಅವರನ್ನು ಕರೆದುಕೊಂಡು ಹೋಗಬಹುದಾದ ಸುಲಭ ಮಾರ್ಗದ, ಸಾಹಸ ಪಡದೆ ತಲುಪಬಹುದಾದ ಸಾರ್ವಜನಿಕ ಸ್ಥಳಗಳನ್ನಷ್ಟೇ ಸರಕಾರ ಇಲ್ಲವೇ ಪಂಚಾಯತ್‌ ನವರು ಹೆಣಗಳನ್ನು ಹೂಳುವ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮೃತನ ಸಂಬಂಧಿ ಕರನ್ನು ಇಂತಹ ಸಾಹಸಕರ ಮತ್ತು ದುರ್ಗಮ ಸ್ಥಳಗಳಿಗೆ ಕರೆತರಲೆಂದು ಎಂತಹವರೂ ನಿರೀಕ್ಷಿಸುವುದಿಲ್ಲ. ಈ ದಿನ ತೋರಿಸಲಾದ ಸ್ಥಳಗಳು, ಅಪಾಯಕಾರಿಯಾಗಿದೆ. ಯಾರಿಗೂ ಕಾಣಿಸದಂತೆ ದೇಹ ಗಳನ್ನು ರಹಸ್ಯವಾಗಿ ಹೂತು ಹಾಕುವ ಕೆಲಸಗಳಿಗೆ ಹೇಳಿ ಮಾಡಿಸಿದಂತಹ ಸ್ಥಳಗಳಂತೆ ಕಂಡು ಬರುತ್ತಿದೆ ಎಂದು ಮಂಜುನಾಥ್ ಹೇಳಿದ್ದಾರೆ.

ದೂರುದಾರ ದೂರು ನೀಡಿದ ಕೂಡಲೇ ತನಿಖೆಯ ದಿಕ್ಕು ತಪ್ಪಿಸಲು ಕ್ರಿಮಿನಲ್ ಹುನ್ನಾರದಿಂದಲೇ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮತ್ತು ಉಳಿದ ಸಮಿತಿ ಸದಸ್ಯರು ಸಾರ್ವಜನಿಕವಾಗಿ ಬೇಕೆಂದೇ ಸುಳ್ಳು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ. ದೂರುದಾರನು ತೋರಿಸಿ ರುವ ದುರ್ಗಮ ಸ್ಥಳಗಳಲ್ಲಿ ಹೂತು ಹಾಕಿರುವ ಕಳೇಬರಗಳು ಸಿಕ್ಕಿದ ತಕ್ಷಣವೇ ಈ ತನಿಖೆಗೆ ಅಡ್ಡಿಪಡಿಸಲು ಕ್ರಿಮಿನಲ್ ಹುನ್ನಾರ ಮಾಡಿದ್ದ ಕಾರಣಕ್ಕಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ರನ್ನು ಕೂಡಲೇ ಬಂಧಿಸಬೇಕು. ಶ್ರೀನಿವಾಸ ರಾವ್ ತನಿಖೆಯ ದಿಕ್ಕು ತಪ್ಪಿಸಿ ನಿಜವಾದ ಆರೋಪಿಗಳನ್ನು ರಕ್ಷಿಸಲೆಂದು ಸಾರ್ವಜನಿಕವಾಗಿ ಈಗಾಗಲೇ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಈ ವ್ಯಕ್ತಿಯು ಸಾಕ್ಷ್ಯ ನಾಶಪಡಿಸುವ ಅಥವಾ ತಿದ್ದುವ ಕ್ರಿಮಿನಲ್ ಸಂಚು ರೂಪಿಸುವ ಸಾಧ್ಯತೆಯಿರುವುದರಿಂದ ಶ್ರೀನಿವಾಸ ರಾವ್ ನನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡುತ್ತೇವೆ ಎಂದು ವಕೀಲ ಮಂಜುನಾಥ್ ಎನ್ ಆಗ್ರಹಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X