ಮಂಗಳೂರು: ʼಗಲ್ಫ್ ರಿಟಾಯರೀಸ್ ಅಸೋಸಿಯೇಷನ್ʼ ಮಾಸಿಕ ಸಭೆ
![ಮಂಗಳೂರು: ʼಗಲ್ಫ್ ರಿಟಾಯರೀಸ್ ಅಸೋಸಿಯೇಷನ್ʼ ಮಾಸಿಕ ಸಭೆ ಮಂಗಳೂರು: ʼಗಲ್ಫ್ ರಿಟಾಯರೀಸ್ ಅಸೋಸಿಯೇಷನ್ʼ ಮಾಸಿಕ ಸಭೆ](https://www.varthabharati.in/h-upload/2024/02/13/1243488-whatsapp-image-2024-02-13-at-63609-pm.webp)
ಮಂಗಳೂರು: ಗಲ್ಫ್ ರಿಟಾಯರೀಸ್ ಅಸೋಸಿಯೇಷನ್ ಮಂಗಳೂರು ಇದರ ಸರ್ವ ಸದಸ್ಯರ ಮಾಸಿಕ ಸಭೆಯು ಫೆ.13ರಂದು ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಮೊಹಮ್ಮದ್ ಬಂಡಾಡಿ ಅವರು ಕಿರಾಅತ್ ಪಠಿಸಿ, ಜೊತೆ ಕಾರ್ಯದರ್ಶಿ ಯೂಸುಫ್ ಆಲಡ್ಕ ಸ್ವಾಗತಿಸಿದರು. ಅಧ್ಯಕ್ಷರಾದ ಹಂಝ ಮಿತ್ತೂರು ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಜಮಾಲುದ್ದೀನ್ ವರದಿ ವಾಚನ ಮಾಡಿ, ಜನವರಿ 2024ರ ಅಂತ್ಯದ ವರೆಗಿನ ಲೆಕ್ಕ ಪತ್ರಗಳನ್ನು ಮಂಡಿಸಿದ ನಂತರ ಅನುಮೋದಿಸಲಾಯಿತು. ಪ್ರಧಾನ ಸಲಹೆಗಾರರಾದ ಮೊಹಮ್ಮದ್ ಬೊಳ್ಳಾಯಿ ACF ಅವರು GRA ವಾಟ್ಸಾಪ್ ಗ್ರೂಪಿನಲ್ಲಿ ಮದುವೆ ಸಂಬಂಧಗಳ ಮ್ಯಾಟ್ರಿಮೋನಿಯಲ್ ವಿವರಗಳನ್ನು ಪ್ರಕಟಿಸುವ ಬಗ್ಗೆ ವಿವರ ನೀಡಿದರು. ಇದನ್ನು ಮುಂದುವರಿಸಲು ತೀರ್ಮಾನಿಸಲಾಯಿತು.
ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ GRA ಸದಸ್ಯರಾದ ಮೊಹಮ್ಮದ್ ಉಮ್ಮರ್ ಮಂಗಳೂರು, ಅಬ್ದುಲ್ ರಹಿಮಾನ್ ಪುತ್ತೂರು ಮತ್ತು ಮೊಹಮ್ಮದ್ ಸಮದ್ ಬಂಟ್ವಾಳ ಅವರಿಗೆ ರೂ.5000 ದಂತೆ ಸಹಾಯಧನ ನೀಡಲಾಯಿತು.
ಈ ಸಹಾಯಧನ ನೀಡಲು ಸಹಕರಿಸಿದ ಇಬ್ರಾಹಿಂ ಬಂಡಾಡಿ, ಅಶ್ರಫ್ ಬೆದ್ರಾಳ ಪುತ್ತೂರು, ಹಾಜಿ ಅಬೂಬಕರ್ ದೇರಳಕಟ್ಟೆ, ಯಾಸರ್ ಪರ್ಲಡ್ಕ ಮತ್ತು ಅಬ್ಬಾಸ್ ಪೋಕರ್ ಉಚ್ಚಿಲ ಇವರಿಗೆ ಸಂಸ್ಥೆಯ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.
ಉಪಾಧ್ಯಕ್ಷರಾದ ಆದಂ ಬ್ಯಾರಿ ಉಪಸ್ಥಿತರಿದ್ದರು. ಜೊತೆಕಾರ್ಯದರ್ಶಿ ಯೂಸುಫ್ ಆಲಡ್ಕ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಂತರ ಮೊಹಮ್ಮದ್ ಬೊಳ್ಳಾಯಿ ನಿವೃತ್ತ ACF ಅವರಿಂದ ಮ್ಯೂಚುವಲ್ ಫಂಡ್ ಬಗ್ಗೆ ಮಾಹಿತಿ ಶಿಬಿರ ನಡೆಸಲಾಯಿತು.