ಮಂಜ ಉರೂಸ್: ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ ಆಯ್ಕೆ
ಪ್ರಧಾನ ಸಂಚಾಲಕರಾಗಿ ಉವೈಸ್ ಬೀಟಿಗೆ, ಕೋಶಾಧಿಕಾರಿಯಾಗಿ ಅಬೂಬಕರ್ ಉಕ್ಕುಡ
ಯೂಸುಫ್ ಗೌಸಿಯಾ ಸಾಜ, ಮುಹಮ್ಮದ್ ಉವೈಸ್ ಬೀಟಿಗೆ, ಅಬೂಬಕರ್ ಉಕ್ಕುಡ
ಪುತ್ತೂರು: ಮಂಜ ಬೆಳಿಯೂರುಕಟ್ಟೆ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಮೇ 9,10,11ರಂದು ನಡೆಯಲಿದ್ದು ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಉಪಾಧ್ಯಕ್ಷರಾಗಿ ಯು.ಟಿ. ಅಲಿ ಪಾಲಸ್ತಡ್ಕ, ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಅಬ್ದುಲ್ ಹಮೀದ್ ಎ.ಕೆ. ಸಾಜ, ಅಬ್ದುಲ್ಲ ಕುಂಞಿ ಸಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಉವೈಸ್ ಬೀಟಿಗೆ, ಕಾರ್ಯದರ್ಶಿಗಳಾಗಿ ಎ.ಕೆ .ರಿಯಾಝ್ ಬುಳೇರಿಕಟ್ಟೆ, ಖಲಂದರ್ ಕಬಕ, ಕೋಶಾಧಿಕಾರಿಯಾಗಿ ಅಬೂಬಕರ್ ಉಕ್ಕುಡ ಹಾಗು 101 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ಸಂಬಂಧ ಮಂಜ ಮಸ್ಜಿದುಲ್ ಅನ್ಸಾರ್ ಗೌರವಾಧ್ಯಕ್ಷ ಸಯ್ಯಿದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶೈಖುನಾ ವಾಲೆಮುಂಡೋವು ಉಸ್ತಾದ್ ಉದ್ಘಾಟನೆ ಮಾಡಿದರು.
ಕುಂಬ್ರ ಮರ್ಕಝುಲ್ ಹುದಾ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅರಿಯಡ್ಕ ಶುಭ ಹಾರೈಸಿದರು. ಮಂಜ ಮರ್ಕಝ್ ಅಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿ ಮಾತನಾಡಿದರು. ಅದರೊಂದಿಗೆ ಅಗಲಿದ ಸಯ್ಯಿದ್ ಕರುವೇಲ್ ಸಾದತ್ ತಂಙಳ್ ಹಾಗೂ ಕುಂಬ್ರ ಮರ್ಕಝ್ ವಿದ್ಯಾರ್ಥಿನಿ ರಫಾ ಫಾತಿಮಾ ಅವರ ಸ್ಮರಣೆ ಕಾರ್ಯಕ್ರಮ ನಡೆಸಲಾಯಿತು.
ಉರೂಸಿನ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಾರಂಭದಲ್ಲಿ ಮರ್ಕಝ್ ಮಂಜ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಖಲೀಲ್ ಮಾಲಿಕಿ ಸ್ವಾಗತಿಸಿ, ಕಲಂದರ್ ಕಬಕ ವಂದಿಸಿದರು.