ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್| ನ್ಯಾಯಾಲಯದ ಆದೇಶದಂತೆ ಚಿನ್ನಾಭರಣ, ನಗದು ಬ್ಯಾಂಕ್ಗೆ ಹಸ್ತಾಂತರ

ಮಂಗಳೂರು: ನ್ಯಾಯಾಲಯದ ಆದೇಶದಂತೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಗೆ ಸೇರಿದ ಚಿನ್ನಾಭರಣ ಮತ್ತು ನಗದನ್ನು ಶನಿವಾರ ಬ್ಯಾಂಕ್ ಮ್ಯಾನೇಜರ್ಗೆ ಹಸ್ತಾಂತರಿಸಲಾಗಿದೆ.
ತಲಪಾಡಿ ಸಮೀಪದ ಕೆ.ಸಿ.ರೋಡ್ ಎಂಬಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಂದ ಜ.17ರಂದು ಭಾರೀ ಮೌಲ್ಯದ ಚಿನ್ನಾಭರಣ ದರೋಡೆಯಾಗಿತ್ತು. ದುಷ್ಕರ್ಮಿಗಳ ತಂಡವೊಂದು ಹಾಡುಹಗಲೇ ಬ್ಯಾಂಕ್ಗೆ ನುಗ್ಗಿ ಪಿಸ್ತೂಲು, ತಲವಾರು, ಕತ್ತಿ ತೋರಿಸಿ ಹಣ, ಚಿನ್ನ ಕೊಡುವಂತೆ ಬ್ಯಾಂಕ್ನ ಉದ್ಯೋಗಿಗಳನ್ನು ಬೆದರಿಸಿ, ಲಾಕರ್ನಲ್ಲಿದ್ದ ಹಣ ಮತ್ತು ಚಿನ್ನವನ್ನು ದೋಚಿ ಕಾರಿನಲ್ಲಿ ಪರಾರಿಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿದ ಅಮ್ಮನಕೋವಿಲ್ನ ಮುರುಗಂಡಿ ಥೇವರ್, ಮುಂಬೈ ಗೋಪಿನಾಥ್ ಚೌಕ ನಿವಾಸಿ ಯೋಸುವಾ ರಾಜೇಂದ್ರನ್, ಮುಂಬೈ ಚೆಂಬೂರ್ನ ತಿಲಕ್ನಗರದ ಕಣ್ಣನ್ ಮಣಿ, ಷಣ್ಮುಗಮ್, ಬಂಟ್ವಾಳ ಕನ್ಯಾನದ ಭಾಸ್ಕರ್ ಬೆಳ್ಚಪಾಡ ಯಾನೆ ಶಶಿ ತೇವರ್, ತಲಪಾಡಿ ಕೆ.ಸಿ.ರೋಡ್ನ ಮುಹಮ್ಮದ್ ನಝೀರ್ ಎಂಬವರನ್ನು ಬಂಧಿಸಲಾಗಿತ್ತು. ಈ ಪೈಕಿ ಪೊಲೀಸ್ ಕಸ್ಟಡಿ ಯಲ್ಲಿದ್ದ ಕಣ್ಣನ್ ಮಣಿ ಮತ್ತು ಮುರುಗಂಡಿ ಥೇವರ್ ಎಂಬವರು ಪರಾರಿಯಾಗುವಾಗ ಪೊಲೀಸರು ಗುಂಡೇಟು ಹಾಕಿ ಬಂಧಿಸಿದ್ದರು.
ಬ್ಯಾಂಕ್ಗೆ ಸಂಬಂಧಿಸಿದ ಚಿನ್ನಾಭರಣ ಮತ್ತು ನಗದನ್ನು ಮರಳಿಸುವಂತೆ ಬ್ಯಾಂಕ್ ಮ್ಯಾನೇಜರ್ ವಾಣಿ ಎಲ್. ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಶನಿವಾರ ನ್ಯಾಯಾಲಯದ ವಶದಲ್ಲಿದ್ದ 18 ಕೆ.ಜಿ. ಚಿನ್ನಾಭರಣ ಮತ್ತು 13.50 ಕೋ.ರೂ.ವನ್ನು ಹಸ್ತಾಂತರಿಸಲಾಗಿದೆ.