Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಇತಿಹಾಸದ ಮೇಲಿನ ಬೌದ್ಧಿಕ ದಾಳಿಯಿಂದ ಸಣ್ಣ...

ಇತಿಹಾಸದ ಮೇಲಿನ ಬೌದ್ಧಿಕ ದಾಳಿಯಿಂದ ಸಣ್ಣ ಸಂಸ್ಕೃತಿಗಳು ಅಪಾಯದಲ್ಲಿವೆ : ಪ್ರೊ.ಪುರುಷೋತ್ತಮ ಬಿಳಿಮಲೆ

ನಿರ್ದಿಗಂತ ಉತ್ಸವ 2025 ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ28 Feb 2025 2:59 PM IST
share
Photo of Prof.Purushottama Bilimale

ಮಂಗಳೂರು : ನಾಡಿನ ಮೂಲ ಕಲ್ಪನೆಗಳನ್ನು ನಾಶ ಮಾಡಿ ಇತಿಹಾಸದ ಮೇಲೆ ಬೌದ್ಧಿಕ ದಾಳಿ ನಡೆಸುತ್ತಿರುವುದು ದೇಶದಲ್ಲಿ ಹೆಚ್ಚುತ್ತಿದ್ದು, ಇದರಿಂದ ಸಣ್ಣ ಪುಟ್ಟ ಸಂಸ್ಕೃತಿಗಳು ದೊಡ್ಡ ಅಪಾಯಕ್ಕೆ ಸಿಲುಕಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದ್ದಾರೆ.

ಹಿರಿಯ ರಂಗಕರ್ಮಿ, ಚಿತ್ರನಟ ಪ್ರಕಾಶ್‌ರಾಜ್ ನೇತೃತ್ವದ ನಿರ್ದಿಗಂತ ತಂಡದಿಂದ ನಗರದ ಅಲೋಶಿಯಸ್ ಕಾಲೇಜು ಆವರಣದಲ್ಲಿ ಆರಂಭಗೊಂಡಿರುವ ನಿರ್ದಿಗಂತ ಉತ್ಸವದ ಮೊದಲ ದಿನ ‘ಸೌಹಾರ್ದದ ಬಳಿ- ನಮ್ಮ ಕರಾವಳಿ’ ಎಂಬ ವಿಚಾರದ ಕುರಿತು ಆಶಯ ಭಾಷಣ ನೀಡಿದರು.

ಪುರಾಣವನ್ನು ತಿರುಚಿ ಇತಿಹಾಸವಾಗಿಸುವ ಪ್ರಯತ್ನದಲ್ಲಿ ನಾಡಿನ ವಿವೇಕ ನಾಶವಾಗುತ್ತಿದೆ. ನಾಡಿನ ಪುರಾಣಗಳನ್ನು, ಇತಿಹಾಸವನ್ನು ತಿರುಚುವ ತಂತ್ರಗಳ ಮೂಲಕ ರಾಜಕಾರಣಿಗಳು ತಮ್ಮ ಅಧಿಕಾರದ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಜನರು ರಾಜಕಾರಣಿಗಳ ಇಂತಹ ತಂತ್ರಗಾರಿಕೆಗೆ ಬಲಿಯಾಗಬಾರದು ಎಂದು ಅವರು ಹೇಳಿದರು.

ತುಳುನಾಡಿನ ಬೊಬ್ಬರ್ಯನನ್ನು ಉಲ್ಲೇಖಿಸಿ ಮಾತನಾಡಿದ ಪ್ರೊ.ಪುರುಷೋತ್ತಮ ಬಿಳಿಮಲೆ, ಬೊಬ್ಬರ್ಯ ಎನ್ನುವುದು ಮುಸ್ಲಿಂ ದೈವ. ಅವನ ತಂದೆ ಸುಲಕಲ್ಲ ಮುರವ ಬ್ಯಾರಿ, ತಾಯಿ ಫಾತಿಮಾ. ಎಲ್ಲ ದಾಖಲೆಗಳಲ್ಲೂ ಹೀಗೇ ಇದೆ. ಆದರೆ ಇದನ್ನು ಅರಗಿಸಿಕೊಳ್ಳಲಾರದ ಕೆಲವರು ಇತ್ತೀಚೆಗೆ ಬಬ್ರುವಾಹನನ ಅವತಾರವೇ ಬೊಬ್ಬರ್ಯ ಎನ್ನುತ್ತಿದ್ದಾರೆ. ರಾಮ, ವಿಷ್ಣುವಿಗೆ ಅವತಾರಗಳಿವೆ. ಬಬ್ರುವಾಹನನಿಗೆ ಅವತಾರ ಇದೆಯೇ ಎಂದು ಪ್ರಶ್ನಿಸಿದ ಪ್ರೊ.ಪುರುಷೋತ್ತಮ ಬಿಳಿಮಲೆ, ಇಂತಹ ಬೌದ್ಧಿಕ ದಾಳಿಗಳಿಂದ ನಾಡಿನ ಸಣ್ಣ ಸಂಸ್ಕೃತಿಗಳಿಗೆ ಅಪಾಯವಾಗುತ್ತಿದೆ. ದೈವ ಪರಂಪರೆಯನ್ನು ಇದ್ದುದನ್ನು ಇದ್ದ ಹಾಗೆಯೇ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ, ಹೀಗಾದರೆ ಮಾತ್ರ ಸಂಸ್ಕೃತಿಯ ಉಳಿವು ಸಾಧ್ಯ ಎಂದವರು ಹೇಳಿದರು.

‘ತುಳುವಿನ ಬಲಿಯೇಂದ್ರನ ಕತೆಯನ್ನು ಉಲ್ಲೇಖಿಸಿದ ಪ್ರೊ.ಪುರುಷೋತ್ತಮ ಬಿಳಿಮಲೆ, ಬಲಿಯೇಂದ್ರನ ಬಳಿ ವಾಮನ ಮಾತನಾಡುತ್ತಾ, ದೇವರು, ದೈವ, ನಾಗ, ಬೆರ್ಮೆರ್, ಜೈನರು, ಬ್ಯಾರಿಗಳು, ಕ್ರಿಶ್ಚಿಯನ್ನರಿಗೆ ಬದುಕಿಕೊಳ್ಳಲು ಜಾಗ ನೀಡುವ ಉಲ್ಲೇಖವಿದೆ. ಆದರೆ ಕೌದಿಯನ್ನು ಹರಿಯುವ ಶಕ್ತಿಗಳಿಗೆ ನಮ್ಮದೇ ನಾಡಿನ ಪುರಾಣಗಳ ಬಗ್ಗೆ ಮಾತ್ರವಲ್ಲ ದೇವರ ಬಗ್ಗೆಯೂ ಗೌರವ ಇಲ್ಲ. ದೇವರ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರಿಗೆ ಗೌರವವೇ ಇಲ್ಲ. ಯಾವ ದೇವರನ್ನು ನಾವು ಪೂಜಿಸುತ್ತೇವೋ ಅದರ ಬಗ್ಗೆ ಗೌರವ ಇಲ್ಲದೆ ಇದ್ದಾಗ ದೈವ, ದೇವರ ಎಂಬುದು ಕೂಡಾ ವ್ಯಸನವಾಗುತ್ತದೆ. ಇದು ಕೋಮುವಾದವನ್ನು ಬಿತ್ತುವ ಬೃಹತ್ ಶಕ್ತಿಯಾಗಿ ತುಳುನಾಡಿನಲ್ಲಿ ಮಾತ್ರವಲ್ಲದೆ ದೇಶದಲ್ಲಿ ಬೆಳೆಯುತ್ತಿದೆ. ತುಳುನಾಡಿನ ವಾಮನ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಇತರ 600ಕ್ಕೂ ಅಧಿಕ ದೈವಗಳು ಕರಾವಳಿಗೆ ವಿವೇಕವನ್ನು ನೀಡಿವೆ. ಕರಾವಳಿಯ ಪುರಾಣ ಹಾಗೂ ಪಾಡ್ದನಗಳು ನೀಡಿರುವ ವಿವೇಕ ನಮ್ಮನ್ನು ನಡೆಸುವ ಶಕ್ತಿ ಹಾಗೂ ವರ್ತಮಾನಕ್ಕೆ ನಾಡಿನ ಬೆಳಕಾಗಿರಬೇಕು ಎಂದು ಅವರು ಹೇಳಿದರು.

18ನೇ ಶತಮಾನದಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಕರಾವಳಿಗೆ ಬಂದು ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದರಿಂದ ಹೆಚ್ಚಿನವರು ವಿದ್ಯಾವಂತರಾದರು. ಇತ್ತೀಚಿನ ವರ್ಷಗಳಲ್ಲಿ ಚರ್ಚ್‌ಗಳಿಗೆ ದಾಳಿ ನಡೆಸಿದ ಜನರಿಗೆ ಅವರ ಪೂರ್ವಜರು ಕ್ರಿಶ್ಚಿಯನ್ ಶಾಲೆಗಳಲ್ಲಿ ಕಲಿತದ್ದು ಎಂಬ ಅರಿವು ಇರುತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂದರು.



ಭಾರತವೆಂಬುದು ಬಣ್ಣ ಬಣ್ಣದ ರಂಗೋಲಿ. ರಂಗೋಲಿಗೆ ಹೆಚ್ಚು ಬಣ್ಣ ಹಾಕಿದಷ್ಟು ಅದರ ಚೆಲುವು ಇಮ್ಮಡಿಸುತ್ತದೆ. ಆದರೆ, ಅದರ ಬಣ್ಣವನ್ನು ಕಡಿಮೆಯಾಗಿಸಿ ಒಂದು ಬಣ್ಣಕ್ಕೆ ಇಳಿಸಿದರೆ ಅದು ರಂಗೋಲಿಯಾಗಿ ಉಳಿಯದು. ಆದರೆ ಇಂದು ಆ ಭಾರತವೆಂಬ ರಂಗೋಲಿಯ ಬಣ್ಣ ಜತೆ ಚೆಲ್ಲಾಟವಾಡಲಾಗುತ್ತಿದೆ. ಬಣ್ಣಗಳನ್ನು ನಗಣ್ಯಗೊಳಿಸಿ ಒಂದು ಬಣ್ಣವಾಗಿಸುವ ಕಾರ್ಯ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಮತ್ತೆ ರಂಗೋಲಿ ಹಾಕುವ, ಮತ್ತೆ ಕೌದಿಯನ್ನು ಹೊಲಿಯುವ ಕಾರ್ಯ ನಿರ್ದಿಗಂತದ ಮೂಲಕ ನಡೆಯುತ್ತಿದ್ದು, ಇದು ಭಾರತಕ್ಕೆ ಸಂದೇಶವಾಗಲಿ ಎಂದು ಪುರುಷೋತ್ತಮ ಬಿಳಿಮಲೆ ಆಶಯ ವ್ಯಕ್ತಪಡಿಸಿದರು.

‘ಈಗಾಗಲೇ ಕರಾವಳಿಯ ಮೂಲನಿವಾಸಿ ತಳ ಸಮುದಾಯಗಳ ಸಂಖ್ಯೆ, ಭಾಷೆ, ಸಂಸ್ಕೃತಿ ನಶಿಸುತ್ತಿದೆ. ಈ ಸಮುದಾಯಗಳೀಗ ಬೌದ್ಧಿಕ ದಾಳಿಯ ಪರಿಣಾಮವಾಗಿ ಹಿಂದುತ್ವದ ಕಡೆಗೆ ಸಾಗುತ್ತಿವೆ ಎಂದು ಹೇಳಿದ ಅವರು, ವಿದೇಶಿಗರು ನೇರವಾಗಿ ಕಡಲ ಮಾರ್ಗದ ಮೂಲಕ ಆಗಮಿಸಿ ನೆಲೆನಿಲ್ಲಲು ಆರಂಭಿಸಿದ ಬಳಿಕ ಸಮ್ಮಿಶ್ರ ಸಂಸ್ಕೃತಿ ಬೆಳೆದು ಕರಾವಳಿ ಸಂಸ್ಕೃತಿಯು ಕರ್ನಾಟಕದ ಇತರೆಡೆಗಳಿಂದ ಭಿನ್ನವಾಗಲು ಕಾರಣವಾಯಿತು. ಈ ನಡುವೆಯೂ ದೈವ ದೇವರುಗಳ ಪರಂಪರೆಯನ್ನು ಈ ನಾಡು ಬಿಟ್ಟುಕೊಟ್ಟಿಲ್ಲ. ಆದರೆ ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ಸ್ಥಾಪಿಸಿ ಪರಶುರಾಮನ ಕಾಲಬುಡದಲ್ಲಿ ಭೂತಗಳನ್ನಿಟ್ಟು ಭೂತಗಳಿಗೆ ಅವಮಾನ ಮಾಡಲಾಗಿದೆ. ಈ ಮೂಲಕ ಕೋಮುವಾದಿಗಳು ಸಂಸ್ಕೃತಿ ನಾಶ ಮಾಡುವ ಕೆಲಸ ಮಾಡಿದ್ದಾರೆ’ ಎಂದು ಪ್ರೊ.ಬಿಳಿಮಲೆ ಆರೋಪಿಸಿದರು.




share
ವಾರ್ತಾಭಾರತಿ
ವಾರ್ತಾಭಾರತಿ
Next Story
X