ಅ.18,19, 20ರಂದು ನಡೆಯುವ ದಾರುಲ್ ಅಶ್ಅರಿಯ್ಯಾ ಸಮ್ಮೇಳನ ಯಶಸ್ವಿಗೆ ಎಸ್ವೈಎಸ್ ಕರೆ

ಮಂಗಳೂರು: ದಾರುಲ್ ಅಶ್ಅರಿಯ್ಯಾ ಸನದುದಾನ ಸಮ್ಮೇಳನ ಹಾಗೂ ಸುರಿಬೈಲು ಉಸ್ತಾದ್ 24ನೇ ಆಂಡ್ ನೇರ್ಚೆಯು ಅ. 18, 19, 20ರಂದು ಸುರಿಬೈಲ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಉಸ್ತಾದ್ ಹಾಗೂ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹಾಗು ಇತರ ನಾಯಕರು ಭಾಗವಹಿಸಲಿದ್ದಾರೆ.
ಇದರ ಭಾಗವಾಗಿ ಸಂದಲ್ ನಡೆಯುವಾಗ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಊರಿನಿಂದ ಸಹಕರಿಸುವುದು ಹಾಗೂ ಸನದುದಾನ ಸಮ್ಮೇಳನದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಸ್.ವೈ.ಎಸ್ ದ.ಕ ಜಿಲ್ಲೆ ಕರೆ ನೀಡಿದೆ.
Next Story





