ಉಜಿರೆ: ಜು. 25ರ ವರೆಗೆ ರಜತ ಪರ್ವ ಸರಣಿ ಯಕ್ಷಗಾನ- ತಾಳಮದ್ದಳೆ -ಸಂಧಾನ ಸಪ್ತಾಹ

ಧರ್ಮಸ್ಥಳ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪಾವಂಜೆ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ವತಿಯಿಂದ ರಜತ ಪರ್ವ ಸರಣಿ ಯಕ್ಷಗಾನ ತಾಳಮದ್ದಳೆ ಸಂಧಾನ ಸಪ್ತಾಹ ಕಾರ್ಯಕ್ರಮ ಜು. 19ರಿಂದ 25ರ ವರೆಗೆ ನಡೆಯಲಿದೆ.
ಪಾವಂಜೆಯ ಶಾರಧ್ವತ ಯಜ್ಞಾಂಗಣದಲ್ಲಿ ಪ್ರತಿ ದಿನ ಸಂಜೆ 4.45ರಿಂದ 7.45ರ ವರೆಗೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಜು.19ರಂದು ಸುಗ್ರೀವ -ಕೌಶಿಕ, 20ಕ್ಕೆ ಅಂಗದ -ಪ್ರಹಸ್ತ, 21ರಂದು ಹನೂಮಂತ- ವೀರಮಣಿ, 22ರಂದು ಸುಗ್ರೀವ -ಹನೂಮಂತ, 23ರಂದು ಸುಭದ್ರೆ- ಅರ್ಜುನ, 24ರಂದು ಕೃಷ್ಣ-ದುರ್ಯೋಧನ, 25ರಂದು ಷಣ್ಮುಖ- ಕೌಂಹಾಸುರ ಪ್ರಸಂಗಗಳೂ ನಡೆಯಲಿವೆ.

Next Story