Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. "ಕ್ಲಾಸ್ ಆನ್ ವ್ಹೀಲ್ಸ್" ನ ಲೈಫ್ ಟೈಮ್...

"ಕ್ಲಾಸ್ ಆನ್ ವ್ಹೀಲ್ಸ್" ನ ಲೈಫ್ ಟೈಮ್ ಪ್ರಾಯೋಜಕತ್ವ ವಹಿಸಿಕೊಂಡ ಝಕರಿಯಾ ಹಾಜಿ ಜೋಕಟ್ಟೆ

ತಂದೆ ಬಜ್ಪೆಗುತ್ತು ಶೇಕುಂಞಿ ಹಾಜಿ ಸ್ಮರಣಾರ್ಥ ಗ್ರಾಮೀಣ ಮಕ್ಕಳ ಕಲಿಕೆಗೆ ಸಹಾಯ ಹಸ್ತ ಚಾಚಿದ ಅಲ್ ಮುಝೈನ್ ಸ್ಥಾಪಕ

ವಾರ್ತಾಭಾರತಿವಾರ್ತಾಭಾರತಿ16 Jan 2025 2:52 PM IST
share
ಕ್ಲಾಸ್ ಆನ್ ವ್ಹೀಲ್ಸ್ ನ ಲೈಫ್ ಟೈಮ್ ಪ್ರಾಯೋಜಕತ್ವ ವಹಿಸಿಕೊಂಡ ಝಕರಿಯಾ ಹಾಜಿ ಜೋಕಟ್ಟೆ

ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ನಿಯಮಿತ ಸರಕಾರೀ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಚಾರಿ ಬಸ್ ಮೂಲಕ ನೀಡುತ್ತಿರುವ ಉಚಿತ ಪ್ರಾಥಮಿಕ ಕಂಪ್ಯೂಟರ್ ಶಿಕ್ಷಣ "ಕ್ಲಾಸ್ ಆನ್ ವ್ಹೀಲ್ಸ್" ನ ಮಾಸಿಕ ವೆಚ್ಚವನ್ನು ಎಂ.ಫ್ರೆಂಡ್ಸ್ ಚೆಯರ್ ಮ್ಯಾನ್ ಜೋಕಟ್ಟೆ ಝಕರಿಯಾ ಹಾಜಿಯವರು ವಹಿಸಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಹಕಾರದೊಂದಿಗೆ ಯಶಸ್ಚಿಯಾಗಿ ನಡೆದು ಬರುತ್ತಿರುವ ಈ ಸೇವೆಗೆ ಮಾಸಿಕ ಒಂದು ಲಕ್ಷ ರೂ. ಖರ್ಚು ತಗಲುತ್ತದೆ. ಇದನ್ನು ಇದುವರೆಗೂ ಎಂ. ಫ್ರೆಂಡ್ಸ್ ದಾನಿಗಳ ಸಹಕಾರದೊಂದಿಗೆ ಭರಿಸುತ್ತಾ ಬರುತ್ತಿತ್ತು. ಹಲವಾರು ಚಾರಿಟಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಇದು ಎಂ.ಫ್ರೆಂಡ್ಸ್ ಗೆ ದೊಡ್ಡ ಹೊರೆಯಾಗಿತ್ತು. ಇದೀಗ ತನ್ನ ತಂದೆ ಬಜ್ಪೆಗುತ್ತು ಮರ್ಹೂಂ ಹಾಜಿ ಬಿ. ಶೇಕುಂಞಿ ಬ್ಯಾರಿ ಸ್ಮರಣಾರ್ಥ ಜೀವನ ಪರ್ಯಂತ ಈ ಕೊಡುಗೆ ನೀಡುವುದಾಗಿ ಇತ್ತೀಚೆಗೆ ದ.ಕ. ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಘೋಷಿಸಿದ ಝಕರಿಯಾ ಹಾಜಿಯವರು ಇದೇ ಜನವರಿಯಿಂದ ಮಾಸಿಕ ರೂಪಾಯಿ ಒಂದು ಲಕ್ಷ ವೆಚ್ಚವನ್ನು ನಿಗದಿತ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಕಂಪೂಟರ್ ಶಿಕ್ಷಣಕ್ಕಾಗಿ ನೀಡಲಿದ್ದಾರೆ.

"ಕ್ಲಾಸ್ ಆನ್ ವ್ಹೀಲ್ಸ್" ಎಂಬುವುದು ಸಂಪೂರ್ಣ ಡಿಜಿಟಲೈಸ್ಡ್ ಹಾಗೂ ಹವಾನಿಯಂತ್ರಿತ ಬಸ್ಸು. ಒಳಗಡೆ 16 ಲ್ಯಾಪ್ ಟಾಪ್ ಹಾಗೂ 32 ಆಸನ ಹಾಗೂ ಡೆಸ್ಕ್ ಗಳಿವೆ. ಬಯೋಮೆಟ್ರಿಕ್ ಡಿವೈಸ್, ಸಿ.ಸಿ. ಕ್ಯಾಮರಾ. ಇಬ್ಬರು ನುರಿತ ಕಂಪ್ಯೂಟರ್ ಅಧ್ಯಾಪಕರು ಮತ್ತು ಓರ್ವ ತಂತ್ರಜ್ಞ ಮತ್ತೋರ್ವ ಚಾಲಕ. ಹೀಗೇ ಒಟ್ಟು 4 ಸಿಬ್ಬಂದಿಗಳು ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಝಕರಿಯಾ ಹಾಜಿಯವರು ಮಂಗಳೂರಲ್ಲಿ ಬರೀ ನಾಲ್ಕು ರೂಪಾಯಿಗೆ ದಿನಗೂಲಿ ಕೆಲಸವನ್ನು ಕೂಡಾ ಮಾಡುತ್ತಿದ್ದರು. ನಂತರ ಸೌದಿಗೆ ಉದ್ಯೋಗಾರ್ಥ ತೆರಳಿದ ಅವರು ಅಲ್ಲೂ ಕೂಡಾ ಕೆಲವು ಕಾಲ ಕಠಿಣ ದುಡಿಮೆ ನಡೆಸಿದ್ದರು. ಸಿಮೆಂಟ್ ಚೀಲವನ್ನು ಬೆನ್ನಿಗೇರಿಸಿ 25ನೇ ಮಹಡಿಗೆ ಸಾಗಿಸುವ ಕೂಲಿ ಕೆಲಸವನ್ನೂ ಮಾಡಿದ್ದರು. ಕ್ರಮೇಣ "ಅಲ್ ಮುಝೈನ್" ಸಂಸ್ಥೆಯನ್ನು ಸ್ಥಾಪಿಸಿ ತನ್ನ ಇಚ್ಛಾಶಕ್ತಿ, ಛಲ, ಸತತ ಪರಿಶ್ರಮದಿಂದ ಮುನ್ನೇರುತ್ತಾ ಬಂದ ಝಕರಿಯ್ಯಾ ಹಾಜಿಯವರು ಇಂದು ಎಂಟು ಸಾವಿರ ಮಂದಿ ದುಡಿಯುತ್ತಿರುವ ಬೃಹತ್ ಕಂಪೆನಿಯ ಒಡೆಯ.

ಆರ್ಥಿಕ, ಔದ್ಯಮಿಕ, ಜನಾದರಣೆಗಳ ವಿಷಯದಲ್ಲಿ ಎಂತಹವರೂ ಬೆರಗಾಗುವಂತಹ ಮೇರು ಮಟ್ಟ ತಲುಪಿದ್ದರೂ ತಾನು ನಡೆದು ಬಂದ ಹಾದಿಯನ್ನು ಮರೆಯದೆ ಇರುವುದು ಹಾಜಿಯವರ ಹೃದಯ ಶ್ರೀಮಂತಿಕೆಯಾಗಿದೆ. ಅವರ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯ ತೂಕ ಸ್ವಲ್ಪ ಹೆಚ್ಚೇ ಎಂದರೂ ತಪ್ಪಲ್ಲ. ಬಾಲ್ಯದಲ್ಲಿ ಬಡತನದ ದೆಸೆಯಿಂದಾಗಿ ಶಿಕ್ಷಣ ವಂಚಿತರಾಗಿದ್ದ ಇವರು ಅದರ ಕಹಿ ಅನುಭವವನ್ನು ನೆನಪಲ್ಲಿಟ್ಟಿದ್ದಾರೆ. ಹಾಗಾಗಿ ಯಾರೂ ಶಿಕ್ಷಣ ವಂಚಿತರಾಗಬಾರದು ಎಂಬುದು ಅವರ ಕಳಕಳಿ. ತಲೆಮೇಲೆ ಅಚ್ಚು ಬೆಲ್ಲ ಮತ್ತು ತಕ್ಕಡಿ ಹೊತ್ತುಕೊಂಡು ಮನೆಮನೆಗೆ ಮಾರಾಟ ಮಾಡಿದ್ದ ಬಾಲ್ಯಕಾಲದ ಅನುಭವವನ್ನು ಹೇಳಿಕೊಳ್ಳಲು ಅವರು ಸಂಕೋಚ ಪಡುವುದಿಲ್ಲ. ಅವರ ಮಧುರ ವ್ಯಕ್ತಿತ್ವವೇ ಕಷ್ಟದಲ್ಲಿರುವವರಿಗೆ ಸವಿಜೇನ ಸಿಂಚನ.

ಎಂಟು ಸಾವಿರ ಮಂದಿಗೆ ಉದ್ಯೋಗ ಕೊಟ್ಟು ಎಂಟು ಸಾವಿರ ಕುಟುಂಬಗಳಿಗೆ ಅನ್ನದಾತರಾಗಿದ್ದರೂ ಆ ಬಗ್ಗೆ ಯಾವುದೇ ತಲೆಭಾರವಿಲ್ಲದಿರುವುದು ಇವರ ಶಿರೋಧಾರ್ಯ ಗುಣ. ಹಣ ಯಾರಲ್ಲೂ ಇರುತ್ತದೆ, ತಮ್ಮ ಯಶೋಗಾಥೆಯ ಕಥೆ ಹೇಳುವ ಹಲವರಿರಬಹುದು. ಆದರೆ ಯಶೋದುಂಧುಬಿಯ ಜೊತೆಗೆ ವಿನಯ ಸಂಪನ್ನತೆ ಹೊಂದಿರುವವರು, ಕಷ್ಟಗಳಿಗೆ ಸ್ಪಂದಿಸುವವರು ಅಪರೂಪ. ಅಂತಹ ಅಪರೂಪದ ಅಧ್ಭುತ ವ್ಯಕ್ತಿಯಾಗಿದ್ದಾರೆ ಝಕರಿಯಾ ಹಾಜಿಯವರು.

ಹಣ ಯಾರಿಗೂ ಕೈಗೂಡುತ್ತದೆ. ಆದರೆ ಗುಣ ಎಲ್ಲರಿಗೂ ಕೈಗೂಡುವುದಿಲ್ಲ. ಹಣವೂ ಗುಣವೂ ಜೊತೆಯಾಗಿರುವುದು ಒಂದು ವಿಶೇಷ ದೈವಾನುಗ್ರಹವಾಗಿದೆ. ಅಂತಹ ಒಂದು ವಿಶೇಷ ದೈವಾನುಗ್ರಹ ದೊರೆತ ಓರ್ವ ಅನುಗ್ರಹೀತ ಮಹನೀಯರಾಗಿದ್ದಾರೆ ಕರ್ನಾಟಕದ ರತ್ನ, ಜಿಲ್ಲೆಯ ಝಕರಿಯಾ ಹಾಜಿಯವರು.

-ರಶೀದ್ ವಿಟ್ಲ.

Delete Edit

share
ವಾರ್ತಾಭಾರತಿ
ವಾರ್ತಾಭಾರತಿ
Next Story
X