ಕೃಷ್ಣ ಗುಜರನ್

ಉಡುಪಿ, ಸೆ.14: ದೈವ ನರ್ತಕ ಕೃಷ್ಣ ಗುಜರನ್(80) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಕುತ್ಪಾಡಿಯ ಸ್ವಗೃಹದಲ್ಲಿ ನಿಧನರಾದರು.
ಸರಳ ಸಜ್ಜನಿಕೆಯ ಹಲವಾರು ವರ್ಷಗಳ ಕಾಲ ದೈವ, ದೇವರುಗಳ ಸೇವೆ ಮಾಡಿದ್ದರು. ಆರಾಧನಾ ಕಲೆಯಲ್ಲಿ ಇವರ ಸೇವೆಯನ್ನು ಗೌರವಿಸಿ ಹಲವು ಗರೋಡಿ, ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದವು.
ಇವರು ದೈವ ನರ್ತಕರಾದ ಮಹೇಶ್ ಗಜರನ್ ಹಾಗೂ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story





