ಉಡುಪಿ, ಜು.15: ಕರಾವಳಿ ಬೈಪಾಸ್ ಬಳಿಯ ಶ್ರೀಲಕ್ಷ್ಮೀ ನರಸಿಂಹ ಕೃಪಾದ ಸುಕನ್ಯಾ ಜ್ಯೋತಿ (62) ಕಳೆದ ರವಿವಾರ ನಗರದ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪ್ರಸಿದ್ಧ ಪುರೋಹಿತರಾದ ಪಿ.ನರಸಿಂಹ ಭಟ್ ಅವರ ಧರ್ಮಪತ್ನಿ. ಸುಕನ್ಯ ಅವರು ಪತಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.