ರಾಮಕೃಷ್ಣ ಕಿಣಿ

ಉಡುಪಿ, ಜ.17: ಕೆನರಾ ಬ್ಯಾಂಕಿನ ಉನ್ನತ ನಿವೃತ್ತ ಅಧಿಕಾರಿ, ಮಣಿಪಾಲ ನಿವಾಸಿ ಕೆ.ತುಳಸೀದಾಸ್ ರಾಮಕೃಷ್ಣ ಕಿಣಿ (89) ಸ್ವಗೃಹದಲ್ಲಿ ಜ.17ರಂದು ನಿಧನರಾದರು
ಮೃತರು ಪತ್ನಿ, ಓರ್ವ ಪುತ್ರ , ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನ ಭಜನಾ ಸಪ್ತಾಹದ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದಲ ಇವರು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಆರ್ಥಿಕ ನೆರವು, ಅನ್ಯಾರೋಗ್ಯ ಪೀಡಿತರಿಗೆ ಧನ ಸಹಾಯ ಮಾಡುತ್ತಿದ್ದರು.
ಇವರ ನಿಧನಕ್ಕೆ ಮಾಜಿ ಸಚಿವ ಪ್ರಮೋದ್ ಮದ್ವರಾಜ್ , ಮಾಜಿ ಶಾಸಕ ರಘುಪತಿ ಭಟ್ , ಹರ್ಷ ಬಳಗ ಹಾಗೂ ವಿವಿಧ ಭಜನಾ ಮಂಡಳಿಯವರು ಸಂತಾಪ ಸೂಚಿಸಿದ್ದಾರೆ
Next Story





