Dharwad | ʼಸಮುದಾಯ 50ʼ ಸಮಾರೋಪ ಸಮಾರಂಭ; ಸಮುದಾಯ ಸಂಘಟನೆಯಿಂದ ‘ಪ್ರಕಾಶ್ ರಾಜ್ಗೆ ಸ್ವಾಗತ’: ಬಿಜೆಪಿಯಿಂದ ‘ಗೋ ಬ್ಯಾಕ್’ ಘೋಷಣೆ

ಧಾರವಾಡ : ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ನಟ ಪ್ರಕಾಶ್ ರಾಜ್ ಅವರಿಗೆ ಬಿಜೆಪಿಯ ಸವಿತಾ ಅಮರಶೆಟ್ಟಿ, ರಾಹುಲ್ ಮಲ್ಲಿಗವಾಡ ಇತರರು ‘ಗೋ ಬ್ಯಾಕ್ ಪ್ರಕಾಶ್ ರಾಜ್’ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಗದ್ದಲ ಉಂಟಾಗಿತ್ತು
ನಗರದ ಪಾಟೀಲ ಪುಟ್ಟಪ್ಪ ಭವನದಲ್ಲಿ ಆಯೋಜಿಸಿದ್ದ ʼಸಮುದಾಯ 50ʼ ಸಮಾರೋಪ ಸಮಾರಂಭಕ್ಕೆ ಬಂದಿದ್ದ ವೇಳೆ ನಟ ಪ್ರಕಾಶ್ ರಾಜ್ ಗೆ ಬಿಜೆಪಿಯವರ ‘ಗೋ ಬ್ಯಾಕ್ʼ ಘೋಷಣೆಗೆ ಪ್ರತಿಯಾಗಿ ಸಮುದಾಯ ಸಂಘಟನೆಯವರು ‘ಪ್ರಕಾಶ್ ರಾಜ್ಗೆ ಸ್ವಾಗತ’ ಎಂದು ಕೂಗಿದರು.
ಸಮುದಾಯ ಸಂಘಟನೆಯ ಕೆ.ನೀಲಾ, ಮೀನಾಕ್ಷಿ ಬಾಳಿ ಮತ್ತಿತರರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸವಿತಾ ಅಮರಶೆಟ್ಟಿ, ಇತರರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
Next Story




