Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮುಜಿಬುರ್ ರಹ್ಮಾನ್ ಹಂತಕರ ಗಡೀಪಾರು:...

ಮುಜಿಬುರ್ ರಹ್ಮಾನ್ ಹಂತಕರ ಗಡೀಪಾರು: ಅಮೆರಿಕಕ್ಕೆ ಬಾಂಗ್ಲಾ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ14 Aug 2023 11:01 PM IST
share
ಮುಜಿಬುರ್ ರಹ್ಮಾನ್ ಹಂತಕರ ಗಡೀಪಾರು: ಅಮೆರಿಕಕ್ಕೆ ಬಾಂಗ್ಲಾ ಆಗ್ರಹ

ಢಾಕ: ದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರಹ್ಮಾನ್ ಮತ್ತವರ ಕುಟುಂಬದ ಸದಸ್ಯರನ್ನು 1975ರ ಆಗಸ್ಟ್ 15ರಂದು ಢಾಕಾದ ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆಗೈದು ವಿದೇಶಕ್ಕೆ ಪರಾರಿಯಾಗಿರುವ ಇಬ್ಬರು ಸೇನಾಧಿಕಾರಿಗಳನ್ನು ಮರಳಿ ಕರೆತರಲು ಬಾಂಗ್ಲಾ ಪ್ರಯತ್ನಿಸುತ್ತಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸ್ವಯಂ ತಪ್ಪೊಪ್ಪಿಕೊಂಡಿರುವ ಕೊಲೆಗಾರರಾದ ರಶೀದ್ ಚೌಧುರಿಯನ್ನು ಅಮೆರಿಕದಿಂದ ಮತ್ತು ನೂರ್ ಚೌಧುರಿಯನ್ನು ಕೆನಡಾದಿಂದ ಗಡೀಪಾರುಗೊಳಿಸುವ ನಿಟ್ಟಿನಲ್ಲಿ ಸರಕಾರ ಮಾತುಕತೆ ನಡೆಸುತ್ತಿದೆ . ಹತ್ಯೆ ಸಂಚಿನ ಪ್ರಮುಖ ಸೂತ್ರಧಾರ ಮೇಜರ್ ಶರೀಫುಲ್ ಹಖ್ ದಲೀಮ್ ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಬಾಂಗ್ಲಾದ ಕಾನೂನು ಮತ್ತು ನ್ಯಾಯ ಇಲಾಖೆಯ ಸಚಿವ ಅನೀಸುಲ್ ಹಖ್ ಹೇಳಿದ್ದಾರೆ. ದೇಶದಲ್ಲಿ ಮರಣದಂಡನೆ ಶಿಕ್ಷೆ ಎದುರಿಸುವ ವ್ಯಕ್ತಿಯನ್ನು ಗುರಿಯಾಗಿರುವ ವ್ಯಕ್ತಿಯನ್ನು ಗಡೀಪಾರುಗೊಳಿಸಲು ಕೆನಡಾದ ಕಾನೂನಿನಲ್ಲಿ ಅವಕಾಶವಿಲ್ಲ.

`ಅವರು ರಾಷ್ಟ್ರದ ಪಿತಾಮಹ ಮತ್ತವರ ಕುಟುಂಬದ 17 ಸದಸ್ಯರನ್ನು ಹತ್ಯೆ ಮಾಡಿದ್ದಾರೆ. ಅಪರಾಧದ ಹೇಯ ಸ್ವರೂಪವನ್ನು ಗಮನಿಸಿ ನೂರ್ ಚೌಧುರಿಯನ್ನು ಮರಳಿಸಲು ಕೆನಡಾಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಲಿದ್ದೇವೆ. ಅವರು ಸ್ವಯಂ ತಪ್ಪೊಪ್ಪಿಕೊಂಡ ಕೊಲೆಗಾರರು ಮತ್ತು ಲಭ್ಯ ಪುರಾವೆಗಳು ಅವರ ಅಪರಾಧವನ್ನು ಸಾಬೀತುಪಡಿಸಿವೆ' ಎಂದು ಸಚಿವರು ಹೇಳಿದ್ದಾರೆ.

1975ರಲ್ಲಿ ಮಧ್ಯಮ ಹಂತದ ಸೇನಾಧಿಕಾರಿಗಳ ಗುಂಪೊಂದು ಅವಾಮಿ ಲೀಗ್ ಅಧ್ಯಕ್ಷ ಶೇಖ್ ಮುಜೀಬ್ ಅವರ ಚುನಾಯಿತ ಸರಕಾರವನ್ನು ಉರುಳಿಸುವ ದಂಗೆಯನ್ನು ಯೋಜಿಸಿದರು ಮತ್ತು ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಷಡ್ಯಂತ್ರವನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದರು. ಷಡ್ಯಂತ್ರದ ಪ್ರಧಾನ ಸೂತ್ರಗಾರರ ನೇತೃತ್ವದ 4 ತಂಡಗಳು ಆಗಸ್ಟ್ 15ರ ಬೆಳಿಗ್ಗೆ ಢಾಕಾ ಪ್ರವೇಶಿಸಿದ್ದು ಮೊದಲ ತಂಡವು ಮುಜಿಬುರ್ ನಿವಾಸಕ್ಕೆ ನುಗ್ಗಿ ಮುಜಿಬುರ್, ಅವರ ಕುಟುಂಬದ ಸದಸ್ಯರು, ಆಪ್ತ ಸಿಬಂದಿಗಳ ಸಹಿತ 17 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿತು. ಮುಜಿಬುರ್ ಅವರ ಇಬ್ಬರು ಪುತ್ರಿಯರಾದ ಶೇಖ್ ಹಸೀನಾ ಮತ್ತು ಶೇಖ್ ರೆಹಾನಾ ವಿದೇಶದಲ್ಲಿ ಇದ್ದ ಕಾರಣ ಪ್ರಾಣ ಉಳಿಸಿಕೊಂಡಿದ್ದರು. ಉಳಿದ 3 ಗುಂಪುಗಳು ರೇಡಿಯೊ ಸ್ಟೇಷನ್ ಸಹಿತ ಪ್ರಮುಖ ಸರಕಾರಿ ಕಟ್ಟಡಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆದವು. ಅವಾಮಿ ಲೀಗ್ನ 4 ಮುಖಂಡರಾದ ಬಾಂಗ್ಲಾದ ಪ್ರಥಮ ಪ್ರಧಾನಿ ತಜುದ್ದೀನ್ ಅಹ್ಮದ್, ಮಾಜಿ ಪ್ರಧಾನಿ ಮನ್ಸೂರ್ ಆಲಿ, ಮಾಜಿ ಉಪಾಧ್ಯಕ್ಷ ಸಯದ್ ನಝ್ರುಲ್ ಇಸ್ಲಾಮ್, ಮಾಜಿ ಗೃಹಸಚಿವ ಖಮರುಝಮಾನ್ ರನ್ನು ಬಂಧಿಸಿ, ಬಳಿಕ ಜೈಲಿನಲ್ಲೇ ಹತ್ಯೆ ಮಾಡಲಾಗಿತ್ತು. ಈ ಕಾರಣಕ್ಕೆ ಆಗಸ್ಟ್ 15ನ್ನು ಬಾಂಗ್ಲಾದಲ್ಲಿ ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಗುರುತಿಸಲಾಗಿದೆ. 2 ವರ್ಷದ ಬಳಿಕ ವಿದೇಶದಿಂದ ಗಡೀಪಾರು ಆದ ಮಾಜಿ ಸೇನಾಧಿಕಾರಿ ಅಬ್ದುಲ್ ಮಜೀದ್ರನ್ನು ಬಾಂಗ್ಲಾದಲ್ಲಿ ಗಲ್ಲಿಗೇರಿಸಲಾಯಿತು. 10 ವರ್ಷದ ಬಳಿಕ ಇತರ 5 ಮಂದಿಯನ್ನು ಗಲ್ಲಿಗೇರಿಸಲಾಗಿದ್ದರೆ ಮತ್ತೊಬ್ಬ ಆರೋಪಿ ಝಿಂಬಾಬ್ವೆಯಲ್ಲಿ ಮೃತಪಟ್ಟಿದ್ದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X