Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. "ರಾತ್ರಿ ಹೊತ್ತು ನಿದ್ರಿಸಲಾಗುತ್ತಿಲ್ಲ":...

"ರಾತ್ರಿ ಹೊತ್ತು ನಿದ್ರಿಸಲಾಗುತ್ತಿಲ್ಲ": ಟ್ವಿಟರ್ ಕಟ್ಟಡದ ಮೇಲಿರುವ ಹೊಸ ಲೋಗೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಸ್ಯಾನ್ ಫ್ರಾನ್ಸಿಸ್ಕೊ ತೊರೆಯುವುದಿಲ್ಲವೆಂದ ಎಲಾನ್ ಮಸ್ಕ್

ವಾರ್ತಾಭಾರತಿವಾರ್ತಾಭಾರತಿ30 July 2023 12:06 PM IST
share
ರಾತ್ರಿ ಹೊತ್ತು ನಿದ್ರಿಸಲಾಗುತ್ತಿಲ್ಲ: ಟ್ವಿಟರ್ ಕಟ್ಟಡದ ಮೇಲಿರುವ ಹೊಸ ಲೋಗೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ಕಟ್ಟಡದ ಮೇಲೆ ತೂಗು ಹಾಕಲಾಗಿರುವ ಬೃಹತ್ ಎಕ್ಸ್ ಲಾಂಛನಕ್ಕೆ ಶಕ್ತಿಶಾಲಿ ಬೆಳಕಿನ ವಿನ್ಯಾಸ ಅಳವಡಿಸಿರುವುದರ ವಿರುದ್ಧ ಆ ಕಟ್ಟಡದ ನೆರೆಹೊರೆಯಲ್ಲಿ ವಾಸಿಸುತ್ತಿರುವವರು ಕಿಡಿ ಕಾರುತ್ತಿದ್ದು, ಆ ಬೆಳಕಿನ ವಿನ್ಯಾಸದಿಂದ ಹೊರಹೊಮ್ಮುತ್ತಿರುವ ಶಕ್ತಿಶಾಲಿ ಬೆಳಕಿನ ಕಿರಣಗಳಿಂದ ರಾತ್ರಿ ಹೊತ್ತು ನಿದ್ರಿಸಲಾಗುತ್ತಿಲ್ಲವೆಂದು ದೂರಿದ್ದಾರೆ. ಎಲಾನ್ ಮಸ್ಕ್ ಮಾಲಕತ್ವದ ಈ ಕಂಪನಿಯು ಬೃಹತ್ ಎಕ್ಸ್ ಲಾಂಛನವನ್ನು ತನ್ನ ಮುಖ್ಯ ಕಚೇರಿಯ ಮೇಲಿಂದ ತೂಗು ಬಿಟ್ಟಿದ್ದು, ರಾತ್ರಿ ಪೂರಾ ಅದರಿಂದ ಶಕ್ತಿಶಾಲಿ ಬೆಳಕು ಹೊರಹೊಮ್ಮುತ್ತಿದೆ. ಸದ್ಯ ಆ ಕಟ್ಟಡದ ನೆರೆಹೊರೆಯಲ್ಲಿ ವಾಸಿಸುತ್ತಿರುವವರು ಆ ಬೆಳಕಿನಿಂದ ತಪ್ಪಿಸಿಕೊಳ್ಳಲು ತಮ್ಮ ಮನೆಯ ಕಿಟಕಿಗಳಿಗೆ ಪರದೆಗಳನ್ನು ಖರೀದಿಸಲು ಚಿಂತಿಸುತ್ತಿದ್ದಾರೆ ಎಂದು ianslive.com ವರದಿ ಮಾಡಿದೆ.

"ಇನ್ನು ಕನಸುಗಳಿಲ್ಲ. ಇದು ನನ್ನ ಈಗಿನ ಬದುಕು" ಎಂದು ಎಕ್ಸ್ ಮುಖ್ಯ ಕಚೇರಿಯ ನೆರೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬ ಆ ಲಾಂಛನದ ಕಿರು ವಿಡಿಯೊವನ್ನು ರಾತ್ರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಅಲವತ್ತುಕೊಂಡಿದ್ದಾರೆ.

ಮತ್ತೊಬ್ಬ ಬಳಕೆದಾರರು, "ನಾನು ವ್ಯಗ್ರಗೊಂಡಿದ್ದೇನೆ. ಈ ಎಕ್ಸ್ ಲಾಂಛನ ನಿಮ್ಮ ಮಲಗುವ ಕೋಣೆಯ ಸಮೀಪವೇ ಇರುವುದನ್ನು ಕಲ್ಪಿಸಿಕೊಳ್ಳಿ" ಎಂದು ಅಸಮಾಧಾನ ಹೊರಹಾಕಿದ್ದಾರೆ.

"ನಾನು ಈ ನಗರದಲ್ಲಿ ವಾಸಿಸುವುದನ್ನು ಮತ್ತು ಇದರೊಂದಿಗೆ ಬಂದಿರುವ ಎಲ್ಲವನ್ನೂ ಇಷ್ಟಪಡುತ್ತೇನೆ. ನಾನು ಬೀದಿ ದೀಪಗಳನ್ನು, ಕರೆಗಂಟೆಗಳನ್ನು, ಕೈಗಾಡಿಯ ಶಬ್ದವನ್ನು ಇಷ್ಟಪಡುತ್ತೇನೆ. ಅದರೆ, ಈ ಮೂರ್ಖತನದ ಮರಳು ಚೀಲದಂಥ ಸೌರ ದೀಪವು ಸಹಜವೂ ಅಲ್ಲ ಅಥವಾ ಒಳ್ಳೆಯದೂ ಅಲ್ಲ" ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಆದರೆ, ಈ ಕುರಿತು ರವಿವಾರ ಸ್ಪಷ್ಟನೆ ನೀಡಿರುವ ಎಲಾನ್ ಮಸ್ಕ್, ಎಕ್ಸ್ ಕಂಪನಿಯು ಸ್ಯಾನ್ ಫ್ರಾನ್ಸಿಸ್ಕೊ ತೊರೆಯುವುದಿಲ್ಲವೆಂದು ಹೇಳಿದ್ದಾರೆ. "ಹಲವಾರು ಮಂದಿ ಎಕ್ಸ್ ಮುಖ್ಯ ಕಚೇರಿಯನ್ನು ಸ್ಯಾನ್ ಫ್ರಾನ್ಸಿಸ್ಕೊದಿಂದ ಬೇರೆಡೆಗೆ ಸ್ಥಳಾಂತರಿಸಲು ಉತ್ತಮ ಭತ್ಯೆಯ ಆಮಿಷವೊಡ್ಡಿದ್ದಾರೆ. ಇದಲ್ಲದೆ, ಈ ನಗರವು ಹಿಮ್ಮುಖ ಚಲನೆಯಲ್ಲಿದ್ದು, ಈ ನಗರದಿಂದ ಒಂದರ ನಂತರ ಮತ್ತೊಂದು ಕಂಪನಿಗಳು ತೊರೆದಿವೆ ಅಥವಾ ತೊರೆಯುತ್ತಿವೆ. ಹೀಗಾಗಿ, ಅವರು ಎಕ್ಸ್ ಮುಖ್ಯ ಕಚೇರಿಯೂ ಸ್ಥಳಾಂತರಗೊಳ್ಳಬೇಕು ಎಂದು ಬಯಸುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

"ನಾವು ಸ್ಥಳಾಂತರಗೊಳ್ಳುವುದಿಲ್ಲ. ನೀವು ಕುಗ್ಗಿದ್ದಾಗಲೇ ನಿಮ್ಮ ನಿಜ ಗೆಳೆಯರು ಯಾರು ಎಂದು ತಿಳಿಯುವುದು. ಸ್ಯಾನ್ ಫ್ರಾನ್ಸಿಸ್ಕೊ, ಸುಂದರ ಸ್ಯಾನ್ ಫ್ರಾನ್ಸಿಸ್ಕೊ, ಬೇರೆಯವರು ನಿನ್ನನ್ನು ತೊರೆದರೂ, ನಾವು ಯಾವಾಗಲೂ ನಿನ್ನ ಗೆಳೆಯರಾಗಿರುತ್ತೇವೆ" ಎಂದು ಹೇಳಿಕೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಮುಖ್ಯ ಕಚೇರಿಯ ಬಾಡಿಗೆ ಪಾವತಿಸದ ಕಾರಣ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಟ್ವಿಟರ್ ವಿರುದ್ಧ 136,250 ಡಾಲರ್ ಪರಿಹಾರಕ್ಕಾಗಿ ದಾವೆ ಹೂಡಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X