ನಿಜ್ಜಾರ್ ಹತ್ಯೆಯ ವಾರ್ಷಿಕ ದಿನ | ಕೆನಡಾ ಸಂಸತ್ನಲ್ಲಿ ಮೌನಾಚರಣೆ
ಟೊರಂಟೊ : ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ವಾರ್ಷಿಕ ದಿನದಂದು ಕೆನಡಾದ ಸಂಸತ್ನಲ್ಲಿ ಒಂದು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಲಾಗಿದೆ.
ಕಳೆದ ವರ್ಷದ ಜೂನ್ 18ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಾಗಿತ್ತು. ಹತ್ಯೆಯ ವಾರ್ಷಿಕ ದಿನವಾದ ಮಂಗಳವಾರ ಸಂಸತ್ನಲ್ಲಿ ಒಂದು ನಿಮಿಷದ ಮೌನ ಆಚರಿಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ಗ್ರೆಗ್ ಫಗ್ರ್ಯೂಸ್ ಘೋಷಿಸಿದರು. ಈ ಮಧ್ಯೆ, ವಾಂಕೋವರ್ನಲ್ಲಿನ ಭಾರತದ ಕಾನ್ಸುಲೇಟ್ ಎದುರು ಖಾಲಿಸ್ತಾನ್ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ` ಭಾರತದ ಸಚಿವರು ಮತ್ತು ರಾಜತಾಂತ್ರಿಕರು ಕೆನಡಾದ ನ್ಯಾಯಾಂಗ ವ್ಯವಸ್ಥೆಯಿಂದ ನುಣುಚಿಕೊಳ್ಳಬಹುದು. ಆದರೆ ಖಾಲಿಸ್ತಾನ್ ಪರ ಸಿಖ್ಖರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜತಾಂತ್ರಿಕ ರಕ್ಷಣೆಯ ಅಡಿಯಲ್ಲಿ ನೀವು ಕೆಲಸಮಯ ಅಡಗಿ ಕೂರಬಹುದು. ಆದರೆ ಜೀವನಪೂರ್ತಿ ರಕ್ಷಣೆ ಪಡೆಯಲಾಗದು' ಎಂದರು.
ಏರಿಂಡಿಯಾದ ಕನಿಷ್ಕ ವಿಮಾನದಲ್ಲಿ ಬಾಂಬ್ದಾಳಿ ನಡೆದ 39ನೆಯ ವಾರ್ಷಿಕ ದಿನವಾದ ಜೂನ್ 23ರಿಂದ ಏರಿಂಡಿಯಾವನ್ನು ಬಹಿಷ್ಕರಿಸುವಂತೆ ಪನ್ನೂನ್ ಕರೆ ನೀಡಿರುವುದಾಗಿ ವರದಿಯಾಗಿದೆ.