Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಬಡ ಬೇಸಾಯಗಾರನ ಬಂಡುಕೋರ ಲಾವಣಿ

ಬಡ ಬೇಸಾಯಗಾರನ ಬಂಡುಕೋರ ಲಾವಣಿ

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ4 Feb 2025 9:46 AM IST
share
ಬಡ ಬೇಸಾಯಗಾರನ ಬಂಡುಕೋರ ಲಾವಣಿ

ಬೈಲಹೊಂಗಲ ಎಂದು ಹೆಚ್ಚು ಬಳಕೆಯಲ್ಲಿರುವ ಹೊಂಗಲದಲ್ಲಿ 1863ರ ಅಕ್ಟೋಬರ್ 12ರಂದು ನಡೆದ ಒಂದು ಕೊಲೆಯ ಆಧಾರದ ಮೇಲೆ ಈ ಲಾವಣಿ ಕಟ್ಟಲಾಗಿದೆ. ಕೊಲೆಯಾದವ ಬಸಲಿಂಗಣ್ಣ ಎಂಬ ಲೇವಾದೇವಿ ವ್ಯವಹಾರದವನು. ಈ ಲಾವಣಿ ಬೈಲಹೊಂಗಲ ಶಹರದ ತುಕಾರಾಮ ಎಂಬ ಜಾನಪದ ಕವಿಯ ಶಿಷ್ಯ ಅಪ್ಪು ಎಂಬ ಮರಾಠಾ ವೃತ್ತಿಲಾವಣಿಕಾರನಿಂದ ರಚನೆಯಾಗಿದೆ.

ಇ

ತ್ತೀಚೆಗೆ ಕರ್ನಾಟಕದ ರೈತರು ಮೈಕ್ರೋಫೈನಾನ್ಸ್ ಗಳ ಸಾಲಬಾಧೆಯಿಂದ ಬಳಲುತ್ತಿದ್ದಾರೆ. ಅನೇಕರು ಆತ್ಮಹತ್ಯೆಯಲ್ಲಿ ಜೀವವನ್ನು ಕೊನೆಗಾಣಿಸುತ್ತಿದ್ದಾರೆ. ಒಂದೆಡೆ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಗ್ರೀವಾಜ್ಞೆಯ ಮೂಲಕ ಮೈಕ್ರೋಫೈನಾನ್ಸ್ ಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಮತ್ತೊಂದೆಡೆ ಮೈಕ್ರೋಫೈನಾನ್ಸ್ ನಡೆಸುವ ಕಾರ್ಪೊರೇಟ್ ಶಕ್ತಿಗಳು ಸರಕಾರದ ನಡೆಯನ್ನು ತಡೆಯಲು ಪ್ರಯತ್ನಿಸುತ್ತಿವೆ. ಧರ್ಮಸ್ಥಳ ಸಂಘದ ಕಿರುಕುಳದ ಬಗ್ಗೆ ರಾಜ್ಯವ್ಯಾಪಿ ಎಫ್‌ಐಆರ್‌ಗಳು ದಾಖಲಾಗುತ್ತಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂತಹದೇ ಸಾಲ ಕೊಡುವ ಲೇವಾದೇವಿಗಾರ ಮತ್ತು ಸಾಲ ಪಡೆದ ಬಡ ರೈತನ ಮಧ್ಯೆ ನಡೆದ ಒಂದು ಸಂಘರ್ಷದ ಕಥೆಯನ್ನು ಬಹಳ ಹಿಂದೆಯೇ ಕನ್ನಡದಲ್ಲಿ ಲಾವಣಿ ಕಟ್ಟಿದ್ದಾರೆ. ಇಂತಹದ್ದೊಂದು ಬಡ ಬೇಸಾಯಗಾರನ ಬಂಡುಕೋರ ಲಾವಣಿಯು ಜನರ ಮೌಖಿಕ ಚರಿತ್ರೆಯಲ್ಲಿ ದಾಖಲಾಗಿದೆ.

ಕನ್ನಡದ ಜಾನಪದ ಅಧ್ಯಯನದ ಸಂದರ್ಭದಲ್ಲಿ ಡಾ.ಜಾನ್ ಫೆಯ್ತ್‌ಫುಲ್ ಫ್ಲೀಟ್ ಸಂಗ್ರಹಿಸಿದ ಲಾವಣಿಗಳಿಗೆ ಚಾರಿತ್ರಿಕ ಮಹತ್ವವಿದೆ. ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಅವರು ಡಾ.ಜಾನ್ ಎಫ್. ಫ್ಲೀಟ್ ಇಂಡಿಯನ್ ಆಂಟಿಕ್ವರಿ ಪತ್ರಿಕೆಯಲ್ಲಿ ಪ್ರಕಟಿಸಿದ ಲಾವಣಿಗಳನ್ನು (1885-1890) ಕನ್ನಡಕ್ಕೆ ತಂದು ಉಪಕಾರ ಮಾಡಿದ್ದಾರೆ. ನಮಗೆ ಹಲಗಲಿ ಬೇಡರ ಲಾವಣಿ ಸಿಕ್ಕಿದ್ದು ಕೂಡ ಫ್ಲೀಟ್ ಸಂಗ್ರಹದಿಂದ. ಈ ಸಂಗ್ರಹದಲ್ಲಿ ಇನ್ನಷ್ಟು ಬಂಡುಕೋರ ಲಾವಣಿಗಳಿವೆ. ಅದರಲ್ಲಿ ‘ಸಂಗ್ಯನ ಅಪರಾಧ ಮತ್ತು ಸಾವು’ ಎನ್ನುವ ಲಾವಣಿ ಗಮನಸೆಳೆಯುತ್ತದೆ.

ಈ ಬಂಡುಕೋರ ಲಾವಣಿ ಬೆಳಗಾವಿ ಜಿಲ್ಲೆಯಲ್ಲಿ ಬಹು ಜನಪ್ರಿಯ. ಹಿಂದೆ ಅನೇಕ ಬಡ ಬೇಸಾಯಗಾರರ ಮನೆಗಳಲ್ಲಿ ಈ ಪದವನ್ನು ಹಾಡುತ್ತಿದ್ದರಂತೆ. ಇದು ಬಡ ಬೇಸಾಯಗಾರ ಸಂಗ್ಯ ಲೇವಾದೇವಿಗಾರ ಬಸವಲಿಂಗಯ್ಯನನ್ನು ಕೊಲೆ ಮಾಡಿ ಮರಣದಂಡನೆಗೆ ಗುರಿಯಾದ ನೈಜ ಘಟನೆಯನ್ನು ಆಧರಿಸಿದೆ.

ಬೈಲಹೊಂಗಲ ಎಂದು ಹೆಚ್ಚು ಬಳಕೆಯಲ್ಲಿರುವ ಹೊಂಗಲದಲ್ಲಿ 1863ರ ಅಕ್ಟೋಬರ್ 12ರಂದು ನಡೆದ ಒಂದು ಕೊಲೆಯ ಆಧಾರದ ಮೇಲೆ ಈ ಲಾವಣಿ ಕಟ್ಟಲಾಗಿದೆ. ಕೊಲೆಯಾದವ ಬಸಲಿಂಗಣ್ಣ ಎಂಬ ಲೇವಾದೇವಿ ವ್ಯವಹಾರದವನು. ಈ ಲಾವಣಿ ಬೈಲಹೊಂಗಲ ಶಹರದ ತುಕಾರಾಮ ಎಂಬ ಜಾನಪದ ಕವಿಯಬ ಶಿಷ್ಯ ಅಪ್ಪು ಎಂಬ ಮರಾಠಾ ವೃತ್ತಿಲಾವಣಿಕಾರನಿಂದ ರಚನೆಯಾಗಿದೆ. ಈ ಲಾವಣಿಯನ್ನು ದೇಮಣ್ಣ ತಪ್ಪಿಲ್ಲದಂತೆ ಬರೆದಿಟ್ಟಿದ್ದಾನೆ. ಈ ಲಾವಣಿ 10 ನುಡಿಗಳಲ್ಲಿದೆ. ‘‘ಬಡತನ ಅಂಬುದು ಬಾಳಕೆಟ್ಟ/ಬಡವಗ ಬಂತು ಬಹು ಶಿಟ್ಟ/ಸಾವಕಾರ ಸಾಲಾ ಕೊಡಬೇಕಾದರ/ಸಂಗ್ಯಾಗ ಆದಿತೊ ಸಂಕಷ್ಟ..’’ಎಂದು ಬಡವರ ಸಿಟ್ಟನ್ನು ಈ ಲಾವಣಿ ಮುನ್ನೆಲೆಗೆ ತಂದಿದೆ.

ಮೊದಲನೆಯ ನುಡಿಯಲ್ಲಿ ಇವನ ವ್ಯಾಪಾರ ಮತ್ತು ವೈಯಕ್ತಿಕ ಅಭಿರುಚಿಗಳು ವಿವರಿಸಲ್ಪಟ್ಟಿವೆ. ಬಸಲಿಂಗಣ್ಣನ ಸಾಲಗಾರರಲ್ಲಿ ಸಂಗ್ಯನೂ ಒಬ್ಬ. ಇವನು ತನಗೆ ಹಣದ ಅವಶ್ಯಕತೆ ಉಂಟಾದಾಗ ಪಡೆದ ಸಾಲದ ಕರಾರಿನಂತೆ ತನ್ನ ಭೂಮಿಯನ್ನು ಒತ್ತೆಯಿಡುತ್ತಾನೆ. ಸಾಲಿಗ ಸೌಂದತ್ತಿಯ ‘ಕೆಳಗಿನ ನ್ಯಾಯಾಲಯ’ದಲ್ಲಿ ವ್ಯಾಜ್ಯ ನಡೆಸಿ ಸಂಗ್ಯನ ವಿರುದ್ಧವಾಗಿ ತೀರ್ಪು ಪಡೆದ. ಸಂಗ್ಯನು ಧಾರವಾಡದ ಜಿಲ್ಲಾ ನ್ಯಾಯಾಧೀಶರ ಬಳಿಗೆ ಅಪೀಲು ಹೋಗಲೂ ಅವಕಾಶ ಕೊಡಲಿಲ್ಲ. ಆಮೇಲೆ ಇವನ ಭೂಮಿಯನ್ನು ಹರಾಜು ಹಾಕುವುದರ ಮೂಲಕ ತೀರ್ಪನ್ನು ಕಾರ್ಯಗತಗೊಳಿಸಲು ನ್ಯಾಯಾಲಯದ ಕಾರಕೂನನನ್ನು ಕಳಿಸಲಾಯಿತು. ಸಂಗ್ಯನಿಗೆ ಹರಾಜಿನಲ್ಲಿ ಕೊಳ್ಳಲೂ ಆಗಲಿಲ್ಲ. ಸಾಲಿಗನ ಬಳಿ ಮತ್ತೆ ಗಡುವು ಪಡೆಯಲೂ ಸಾಧ್ಯವಾಗಲಿಲ್ಲ. ಭೂಮಿ ಬಸಲಿಂಗಣ್ಣನ ಪಾಲಾಯಿತು. ಇದ್ದ ತುಂಡು ಭೂಮಿಯನ್ನು ಕುತಂತ್ರದಿಂದ ಕಳೆದುಕೊಂಡ ಸಂಗ್ಯ ತನ್ನ ಸೋದರ ಪರ್ಸ್ಯನೊಂದಿಗೆ ಸೇರಿ ಸೇಡು ತೀರಿಸಿಕೊಳ್ಳಲು ಬಸಲಿಂಗಣ್ಣನನ್ನು ಕೊಲ್ಲುವ ನಿರ್ಧಾರ ಮಾಡಿದ.

ಮಾರನೆಯ ಬೆಳಗ್ಗೆ ಎದ್ದವನೇ ಸಂಗ್ಯ ತನ್ನ ತಾಯಿಯ ಪಾದಕ್ಕೆ ಅಡ್ಡಬಿದ್ದ. ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಂಗ್ಯ ಮತ್ತು ಪರ್ಸ್ಯ ಇಬ್ಬರೂ ತಮ್ಮ ಪ್ರಿಯವಾದ ದೈವ ಬಸವಣ್ಣನಿಗೆ ಪ್ರಾರ್ಥನೆ ಸಲ್ಲಿಸಿದರು. ಬಸಲಿಂಗಣ್ಣನ ಒಬ್ಬ ತಮ್ಮ ಫಕೀರಣ್ಣನನ್ನು ಮೊದಲು ಕೊಲ್ಲಲು ಯೋಜಿಸಿದರು; ಆದರೆ ಅವನು ಸಿಕ್ಕಲಿಲ್ಲ. ಅವರು ಬಸವಣ್ಣ ದೇವರನ್ನು ಪ್ರಾರ್ಥಿಸಿ, ಬಸಲಿಂಗಣ್ಣನ ಇನ್ನೊಬ್ಬ ಸೋದರ ರಾಚಪ್ಪನನ್ನು ಕೊಲ್ಲಲು ಹೋದರು. ಅದೂ ಕೈಗೂಡಲಿಲ್ಲ. ಅವರ ಪಾಲಿಗೆ ದೇವರು ದೊಡ್ಡವನೆಂದು ಬಗೆದು ನೇರವಾಗಿ ಬಸಲಿಂಗಣ್ಣನ ಮನೆಗೆ ಹೋದರು.

ಬಸಲಿಂಗಣ್ಣ ವ್ಯಾಪಾರದಲ್ಲಿ ತೊಡಗಿದ್ದ. ಆತನ ಚಿತ್ತ ರೂಪಾಯಿ ಮೇಲಿತ್ತು. ದುಡ್ಡು ಎಣಿಸುವುದರಲ್ಲಿ ಮಗ್ನನಾಗಿದ್ದ. ಅಲ್ಲಿದ್ದವರ ಗಮನಕ್ಕೆ ಬರದಂತೆ ಸಂಗ್ಯ ಕಂಕುಳಲ್ಲಿ ಅಡಗಿಸಿದ್ದ ಕುಡುಗೋಲನ್ನು ತೆಗೆದು ಅವನ ಕತ್ತನ್ನು ಕತ್ತರಿಸಿಬಿಟ್ಟ, ಬಸಲಿಂಗಣ್ಣನ ‘‘ಬಾಯಿಲಿ ಸುರಿತ ನೆತ್ತರಾ | ಹಾರಿತ ಕಬರಾ | ಬಿದ್ದನ ಜೀವ ಹೋಗಿ’’ ಸಂಗ್ಯ ತಪ್ಪಿಸಿಕೊಳ್ಳಲೂ ಪ್ರಯತ್ನಿಸಲಿಲ್ಲ. ಮೇಲಾಗಿ ಸಂಗ್ಯನ ಸಿಟ್ಟು ಆಕ್ರೋಶ ಓಡಿಹೋಗಲು ಬಿಟ್ಟುಕೊಡಲಿಲ್ಲ. ಪರ್ಸ್ಯ ಮತ್ತು ಸಂಗ್ಯ ಇಬ್ಬರನ್ನೂ ಬಂಧಿಸಿ ಗ್ರಾಮದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

5ನೇ ನುಡಿ

‘‘ಬಂದದ್ದಾತಿ ಅಂತಾರ ಕಾಲಿ

ಶಿಟ್ಟ ಆದರ ತಮ್ಮ ಮನದಲ್ಲಿ

ಬಸಲಿಂಗಣ್ಣನ ಮನಿಗೆ ಹೋದರೋ ತಿಳಿಯಲಿಲ್ಲ ಇಬ್ಬರ ನೆಲಿ

ವೊಂಬತ್-ತಾಸ ವೇಳೆದ ಮೇಲೆ ಪೂರ್ವಲಿಖಿತ ವದಗಿತ ಅಲ್ಲಿ

ಸಂಗ್ಯಾ ಪರಿಷ್ಯಾ ಮುಜರಿ ಮಾಡಿಕ್ಯಾರ ಹೋಗಿ ನಿಂತರೊ ಅವನ ಬದಿಯಲಿ

ಬಸಲಿಂಗಣ್ಣನ ಚಿತ್ತ ರೂಪಾಯಿ ಮೇಲೆ

ಮೂರು ನಾಕು ಮಂದಿ ಅವನ ಬದಿಯಲ್ಲಿ

ಕಡದಾರು ಅಂಬುದು ಅವಗ ತಿಳಿಯಲಿಲ್ಲ

ಶಿವ ತಂದ ಹಾಕಿದ ಮಾಲಿ ॥ 23॥

ಸಂಗ್ಯಾ ಮುಂಗೈಯಂಗಿಯ ತೇಡಿಕೊಂಡ

ಬಗಲನ್ನ ಕುಡಗೋಲ ತಕ್ಕೊಂಡ

ನಿಂತ ನೋಡಿ ಕಡದನೊ ಅವನ ಚಂಡ

ಅದರಂತ ಕುಡಗೋಲ ಯಳಕೊಂಡ

ಕಡದವನ ಹಿಂದಕ ಸರಕೊಂಡ

ವೋಡಿ ಹೋದನ ಪರಿಷ್ಯಾನ್ನ ಕರಕೊಂಡ’’

ಇಬ್ಬರನ್ನೂ ಎದುರುಬದುರಿಗೆ ಕಂಬಕ್ಕೆ ಕಟ್ಟಿ ಅಪರಾಧದ ಬಗ್ಗೆ ವಿಚಾರಣೆ ಮಾಡಿದರು. ಇಬ್ಬರೂ ಹೂವಿನ ರಾಮ ಎಂಬ ಯುವಕನನ್ನು ಸಿಕ್ಕಿಸಲು ಪ್ರಯತ್ನಿಸಿದರು. ವಿಚಾರಣೆಯ ನಂತರ ಹೂವಿನ ರಾಮ ನಿರ್ದೋಷಿಯೆಂದು ಬಿಡುಗಡೆಯಾದ. ಪರ್ಸ್ಯನನ್ನು ಗಡಿಪಾರು ಮಾಡಿ ಸಂಗ್ಯನಿಗೆ ಮರಣದಂಡನೆ ವಿಧಿಸಿದರು. ಎರಡು ಜಿಲ್ಲೆಗಳಿಗೆ ಮುಖ್ಯ ಕಾರಾಗೃಹವಾಗಿದ್ದ ಧಾರವಾಡದ ಕಾರಾಗೃಹಕ್ಕೆ ಮೊದಲು ಸಂಗ್ಯನನ್ನು ಒಯ್ಯಲಾಯಿತು. ಆಮೇಲೆ ಹೊಂಗಲದಲ್ಲೇ ದಂಡನೆ ನೀಡಲು ನಿರ್ಧರಿಸಲಾಯಿತು. ಧಾರವಾಡದಿಂದ ಹೊಂಗಲದ ತನಕದ ಪ್ರಯಾಣ, ಸಂಗ್ಯ ತನ್ನ ತಂದೆತಾಯಿಗಳನ್ನು ಬೀಳ್ಕೊಡುವುದು, ತನ್ನ ನತದೃಷ್ಟತೆಗಾಗಿ ದುಃಖಿಸುವುದು, ಕಾರ್ಯಾಚರಣೆಯ ವಿವರಣೆ-ಇವುಗಳಿಂದಲೇ ಲಾವಣಿಯ ಇತರ ಭಾಗಗಳೆಲ್ಲ ತುಂಬಿಹೋಗಿವೆ. ಇಲ್ಲಿ ಅನೇಕ ಹೃದಯಸ್ಪರ್ಶಿ ವಾಕ್ಯಗಳಿವೆ. ಇಡೀ ಹಾಡು ಪರಿಣಾಮಕಾರಿ ವರ್ಣನೆಗಳಿಂದ ಕೂಡಿದೆ.

10ನೇ ನುಡಿ

‘‘ಸಂತಿ ಶುಕ್ರವಾರಾ ಅದ ದಿನ ಸುತ್ತಿನ ಮಂದಿ ಕೂಡಿತ ಜನಾ

ಹವ್ವ ಹಾರಿ ಕಬರಿಲ್ಲದ ಮಾತಾಡತಾನ ವೂರ ಹೊರಗ ತಂದಾರೋ ಅವನಾ

ಸಾಹೇಬಗ ಹೇಳಿಕೊಂಡ ಯೇನೇನ ಕೈಮುಗದ ಮಾಡಿದ ಶರಣ

ಐದ ರೂಪಾಯಿ ಖರ್ಚು ಮಾಡಿಕ್ಯಾರ ಮಠದ ವೊಳಗ ಕೊಡಸರಿ ಮಣ್ಣ

ಮಾರಿ ಬಾಡಿ ಆದಿತ ಸಣ್ಣ ಕಳೆ ಗುಂದಿ ಹಾರಿತ ಬಣ್ಣಾ

ಹರಹರಾ ಅಂತ ಹಾದಿ ಹಿಡದನೊ ಹತ್ತಿ ನಿಂತ ತನ್ನ ಟಿಕಾಣ |ಬಡತನ|

ಗಲ್ಲಿಗೆ ಹಾಕ್ಯಾರ ಕೊರಳಿಗೆ ಸರಕಾ

ಸ್ವರ್ಗದ ದಾರಿ ಹಿಡಿದಾನೊ ಕೈಲಾಸಕಾ

ಅಕ್ಕತಂಗೆರ ಅಣ್ಣತಮ್ಮರ ತಾಯಿ ದುಕ್ಖ

ಸುತ್ತಗಟ್ಟಿ ನಿಂತಿತ ಜನಲೋಕಾ

ನಾಕ ತಿಂಗಳ ಹನ್ನೆರಡ ದಿನಕ

ಅವರಾತ್ರಿ ಅಮಾಸಿ ತಾರೀಖಾ॥

ಈ ಪದ ಬೆಳಗಾವಿ ಮತ್ತು ಬೈಲಹೊಂಗಲ ಭಾಗದಲ್ಲಿ ರೈತರು ಹೆಚ್ಚು ಹಾಡುತ್ತಿದ್ದರಂತೆ. ಯಾಕೆ ರೈತರು ಈ ಕೊಲೆಯ ಪದವನ್ನು ಹಾಡುತ್ತಿದ್ದರು ಎನ್ನುವುದು ಬಹಳ ಮುಖ್ಯವಾದ ಸಂಗತಿ. ಈ ಲಾವಣಿ ಹಾಡುವ ಮೂಲಕ ಲೇವಾದೇವಿಗಾರರನ್ನು ಭಯಪಡಿಸುವ ತಂತ್ರವೂ ಇದ್ದಿರಬಹುದು. ಅಥವಾ ಬಡ್ಡಿ ವ್ಯವಹಾರದ ಧಣಿಗಳ ವಿರುದ್ಧ ಜನರೊಳಗಿರುವ ಸಿಟ್ಟಿನ ಪ್ರತೀಕವಾಗಿಯೂ ಈ ಲಾವಣಿ ಹಾಡುತ್ತಿದ್ದರು. ಇಂತಹದ್ದೊಂದು ಲಾವಣಿ ಯನ್ನು ಬ್ರಿಟಿಷ್ ಅಧಿಕಾರಿಯಾಗಿದ್ದ ಫ್ಲೀಟ್ ಸಂಗ್ರಹಿಸಿ ಇಂಡಿಯನ್ ಆಂಟಿಕ್ವೆರಿಯಲ್ಲಿ ಪ್ರಕಟಿಸಿದ. ಬಹುಶಃ ಕನ್ನಡದ ಜಾನಪದ ಅಧ್ಯಯನಕಾರರಾಗಿದ್ದರೆ ಈ ಪದವನ್ನು ಸಂಗ್ರಹಿಸುತ್ತಿದ್ದರೇ ಎನ್ನುವ ಅನುಮಾನವಿದೆ. ಕಾರಣ ಕನ್ನಡ ಜಾನಪದ ಅಧ್ಯಯನಕಾರರಲ್ಲಿ ಬಹುಪಾಲು ಮೇಲ್ಜಾತಿಯ ವಿದ್ವಾಂಸರೇ ಇರುವ ಕಾರಣ ಈ ಲಾವಣಿಯನ್ನು ಗಲಭೆಗೆ ಇಂಬು ಕೊಡುವ ಲಾವಣಿ ಎಂದು ಸಂಗ್ರಹಿಸುತ್ತಿದ್ದಿಲ್ಲ ಅನ್ನಿಸುತ್ತದೆ. ಕಾರಣ ಕನ್ನಡದಲ್ಲಿ ಸಂಗ್ರಹವಾಗಿರುವ ಲಾವಣಿಗಳಲ್ಲಿ ಈ ಬಗೆಯ ಬಂಡುಕೋರ ಲಾವಣಿಗಳು ಸಿಗುವುದು ಕಡಿಮೆ. ಫ್ಲೀಟ್‌ಗೆ ಇದು ಪ್ರತಿರೋಧದ ಪದವಾಗಿ ಕಂಡು ಸಂಗ್ರಹಿಸಿರುವ ಸಾಧ್ಯತೆ ಇದೆ.

ಈ ಲಾವಣಿಯಲ್ಲಿ ವ್ಯಕ್ತವಾಗುವ ಸಂಗ್ಯಾನ ಸಿಟ್ಟು ಅದು ಕೇವಲ ಸಂಗ್ಯಾನದಾಗಿರದೆ ಬಡ್ಡಿವ್ಯಾಪಾರಸ್ಥರಿಂದ ನೊಂದ ಎಲ್ಲಾ ರೈತರದೂ ಆಗಿತ್ತು. ಅಂತೆಯೇ ಹೇಗೆ ದಲಿತ ದಮನಿತ ಸಮುದಾಯಗಳ ಭೂಮಿಯನ್ನು ಮೇಲುಜಾತಿಗಳು ವಶಪಡಿಸಿಕೊಳ್ಳುತ್ತಿದ್ದರು ಎನ್ನುವುದನ್ನು ಈ ಲಾವಣಿ ಸಾಕ್ಷೀಕರಿಸುತ್ತದೆ. ಇಂತಹ ಲಾವಣಿಗಳು ನಾಡಿನ ಸ್ಥಳೀಯ ಸಂಘರ್ಷದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಇಂತಹ ಬಂಡುಕೋರ ಜಾನಪದ ಹಾಡುಗಳನ್ನು ಸಂಗ್ರಹಿಸಿ ಹೋರಾಟಕ್ಕೆ ಬೇಕಾದ ಸ್ಫೂರ್ತಿಯನ್ನು ಪಡೆದರು. ಹಾಗಾಗಿಯೇ ಕರ್ನಾಟಕದ ಜಾನಪದ ಕ್ಷೇತ್ರದಲ್ಲಿ ಇಂತಹ ಬಂಡುಕೋರ ಪದಗಳನ್ನು ಮುನ್ನೆಲೆಗೆ ತಂದು ಅಧ್ಯಯನ ಮಾಡುವ ಅಗತ್ಯವಿದೆ.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X