Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಆಳಂದ | ಗಡಿನಾಡಿನ ಶ್ರಮಿಕ ಕನ್ನಡಿಗರ...

ಆಳಂದ | ಗಡಿನಾಡಿನ ಶ್ರಮಿಕ ಕನ್ನಡಿಗರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆ : ಶಾಸಕ ಬಿ.ಆರ್.ಪಾಟೀಲ್

69ನೇ ಕರ್ನಾಟಕ ರಾಜ್ಯೋತ್ಸವ, 47 ಸಾಧಕರಿಗೆ ಸನ್ಮಾನ

ವಾರ್ತಾಭಾರತಿವಾರ್ತಾಭಾರತಿ25 Nov 2024 8:49 PM IST
share
Photo of Program

ಕಲಬುರಗಿ : ಮಹಾರಾಷ್ಟ್ರದ ಗಡಿಗೆ ಹೊಂದಿಕೊoಡಿರುವ ಆಳಂದ ತಾಲ್ಲೂಕು ಮರಾಠಿ ಹಾಗೂ ಉರ್ದು, ಮೋಡಿ ಭಾಷೆಯ ಪ್ರಭಾವದಿಂದ ಕನ್ನಡ ಕಲಿಯುವ ವಾತಾವರಣ ಕಡಿಮೆ ಇರುವುದನ್ನು ಮನಗಂಡು 1980ರಲ್ಲಿ ಖಾಸಗಿ ಕನ್ನಡ ಶಾಲೆಯನ್ನು ಸ್ಥಾಪಿಸಲಾಯಿತು. ಜತೆಗೆ ಸರಕಾರಿ ಶಾಲೆಗಳಲ್ಲಿಯೂ ಕನ್ನಡ ಅಭ್ಯಾಸ ಮಾಡುವಂತಾಗಿರುವದರಿoದಲೇ ಅನೇಕರು ಶಾಲೆ ಕಲಿತು ಉನ್ನತ ಹುದ್ದೆಗೇರಲು ಸಾಧ್ಯವಾಗಿದೆ. ಗಡಿನಾಡಿನ ಶ್ರಮಿಕ ಕನ್ನಡಿಗರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆಯಾಗಲಿ ಎಂದು ಸಿಎಂ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.

ಆಳಂದ ಪಟ್ಟಣದ ಲೋಕ ನಾಯಕ ಜಯಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿ ಸೋಮವಾರ ಸಮತಾ ಲೋಕ ಶಿಕ್ಷಣ ಸಮಿತಿಯ ವಿವಿಧ ಶಾಲಾ ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಂಡ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 47 ಜನರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯು ಶ್ರೀಮಂತವಾಗಿದ್ದು ಇದು ಅನ್ನದ ಭಾಷೆಯಾಗಿದೆ. ಕನ್ನಡ ಭಾಷೆ ಇದು ಬದುಕಿನ ಭಾಷೆ, ವ್ಯಾಪಾರ ವ್ಯವಹಾರ, ಆಡಳಿತ ಕನ್ನಡದಲ್ಲಿ ಇರಲಿ, ಬೇರೆ ಭಾಷೆಯ ಬಗ್ಗೆ ಗೌರವ ಇರಲಿ ಎಂದರು.

ಕಳೆದ 43 ವರ್ಷಗಳಿಂದಲೂ ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಪ್ರಗತಿ ಸಾಧಿಸಿ ಮುಂದೆ ಬರುವಂತೆ ಕರೆ ನೀಡಿದರು.

ಕಲಬುರಗಿ ಮಕ್ಕಳ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಫಲದಿಂದಲೇ ಕರ್ನಾಟಕ ನಾಮಕರಣವಾಗಲು ಸಾಧ್ಯವಾಗಿದೆ. ಮುತ್ಸದ್ದಿ ರಾಜಕಾರಣಿ, ಶಾಸಕ ಬಿ.ಆರ್.ಪಾಟೀಲ್ ಅವರು ಹೋರಾಟ, ಚಳುವಳಿ ಮೂಲಕ ಜನಪರ ಆಡಳಿತ ನೀಡುವ ಜತೆಗೆ ಗಡಿಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿದ್ದು ಸಮಾಜಮುಖಿ ಕಾರ್ಯಗಳು ನಾಡಿಗೆ ಮಾದರಿಯಾಗಿವೆ ಎಂದು ಬಣ್ಣಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್, ನಿರ್ದೇಶಕ ಸೂರ್ಯಕಾಂತ ಗುಡ್ಡಡಗಿ, ಕಸಾಪ ಮಾಜಿ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ, ಶಿಕ್ಷಣ ಪ್ರೇಮಿ ಕಲ್ಯಾಣರಾವ್ ಪಾಟೀಲ್, ಗುರುಲಿಂಗಪ್ಪ ಪಾಟೀಲ್, ಪ್ರಚಾರ್ಯ ಡಾ.ಮಂಜುನಾಥ ಅಕ್ಕಿ, ಸುರೇಂದ್ರ ಪಾಟೀಲ್, ನಾಗಣ್ಣಾ ಸಲಗರೆ, ಶಿವಕುಮಾರ ದಾನಾಯಿ, ವೈಜನಾಥ ಜಿಡಗೆ, ಮುಖ್ಯಗುರು ಗಂಗಾoಬಿಕಾ ಮಂಟಗಿ, ಶಿವಪುತ್ರಪ್ಪ ಅಲ್ದಿ, ಕಲಾವಿದ ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ, ಸಂಜಯ ಪಾಟೀಲ್, ಗುರುಲಿಂಗಯ್ಯ ಅಳ್ಳೋಳಿಮಠ, ಮಾಣಿಕ ಕಾಳಜೆ, ಸತೀಶ ಕೋಗನೂರೆ ಮತ್ತಿತರರು ಇದ್ದರು.

47 ಸಾಧಕರಿಗೆ ಪ್ರಶಸ್ತಿ ಸನ್ಮಾನ :

ನಿರ್ಮಲಾ ಶಿವರಾಮ ಬಳಿಗಾರ, ಸಿದ್ದರಾಮ ಕೋರೆ, ಗುರುಶಾಂತಪ್ಪ ಪಾಟೀಲ್, ರವಿ ಪಾಟೀಲ್ (ಕೃಷಿ), ಸುನೀತಾ ಮುಲಗೆ, ಪೂಜಾ ಹತ್ತೆ, ಜಲಜಾಕ್ಷಿ ಕೋರೆ, ಅವಿನಾಶ ಕೋರೆ, ಬಸವರಾಜ ಕೋರಳ್ಳಿ (ಸಂಶೋಧನೆ), ಶಾಂತಯ್ಯ ಸ್ವಾಮಿ, ಇಶಾಕ್ ಅಲಿ ಮುಜಾವರ, ದತ್ತಪ್ಪ ಗಾಯಕವಾಡ, ಗುರುಲಿಂಗಯ್ಯ ಸ್ವಾಮಿ(ಸಮಾಜ ಸೇವೆ), ಬದ್ರನಾಥ ಮುಡಬಿ, ಉತ್ತಮ ಕಾಂಬಳೆ, ಮಹಾಂತೇಶ ಫುಲಾರೆ, ಬಸವರಾಜ ಕಾಮಾಜಿ, ಸಂತ್ರಾನ ಗುಮಟೆ (ಕಲೆ), ಲಕ್ಷö್ಮಣ ಝಳಕಿ, ಲತಾಬಾಯಿ ಜ್ಯೋಶಿ (ಶಿಕ್ಷಣ), ಚಂದ್ರಕಾAತ ಯಳಮೇಲಿ ( ಸೈನಿಕ),ಮೋಸಿನ್ ಸಗರಿ, ಸುಧಾಕರ ಧುತ್ತರಗಿ, ಕರ್ಣ ಬಿರಾದಾರ (ಕ್ರೀಡೆ), ಡಾ.ಯಲ್ಲಪ್ಪ ಇಂಗಳೆ (ಆರೋಗ್ಯ), ವೀರಭದ್ರಯ್ಯ ಸ್ವಾಮಿ (ಪರಿಸರ ಸಂರಕ್ಷಣೆ), ಎಚ್.ಬಿ.ತೀರ್ಥೆ,ಮಹಾದೇವಪ್ಪ ಪೂಜಾರಿ, ಶಂಕರ ಹೂಗಾರ (ವಿಶೇಷ ಸಾಧನೆ), ಕವಿತಾ ಸುರವಸೆ, ಜಯಶ್ರೀ ಐರೋಡಗಿ, ಲಕ್ಷ್ಮಣ ಜಾಧವ (ಹೈನುಗಾರಿಕೆ), ಶ್ರೀದೇವಿ ಚಟ್ಟಿ (ಅಂಗನವಾಡಿ), ಶಾಂತಾಬಾಯಿ ಹರಳಯ್ಯ (ಆಶಾ ಕಾರ್ಯಕರ್ತೆ), ನಿಂಬೆಣ್ಣಾ ಬಿರಾದಾರ, ಶಿವಕುಮಾರ ಕಲ್ಯಾಣಿ, ಮಹಾದೇವ ಪರಮೇಶ್ವರ, ಗುರುಶಾಂತ ಭರಮಲಿಂಗ, ಶೀಫಾ ನದಾಫ್, ಅಕ್ಷತಾ ಧಾಬಾ, ಸುಷ್ಮೀತಾ ಬೋಸ್ಲೆ, ಆದಿತ್ಯ ಜಗದಾಳೆ, ಅಷ್ಮೀತಾ ಏಟೆ, ಸುಪ್ರಿಯಾ ಆಲೂರೆ(ಶಿಕ್ಷಣ ಹೆಚ್ಚು ಅಂಕ ಪಡೆದವರು) ಅವರಿಗೆ ಸನ್ಮಾನಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X