Aland | ಶ್ರೀ ಧನಲಕ್ಷ್ಮೀ ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ‘ಉತ್ತಮ ಸಹಕಾರಿ ಸಂಸ್ಥೆ’ ಪ್ರಶಸ್ತಿ

ಆಳಂದ: ಗ್ರಾಮೀಣ ಭಾಗದ ಜನರು, ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಆಸರೆಯಾಗಿರುವ ತಾಲೂಕಿನ ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಪತ್ತಿನ ಸಹಕಾರ ಸಂಘ 2026-27ನೇ ಸಾಲಿನ ರಾಜ್ಯಮಟ್ಟದ ‘ಉತ್ತಮ ಸಹಕಾರಿ ಸಂಸ್ಥೆ’ ಪ್ರಶಸ್ತಿಗೆ ಭಾಜನವಾಗಿದೆ.
ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ (ನಿ.) ವತಿಯಿಂದ ಆಯೋಜಿಸಿದ್ದ ಸಂಯುಕ್ತ ಸಹಕಾರಿ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಘಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯದಾದ್ಯಂತ ಕೇವಲ ಐದು ಅತ್ಯುತ್ತಮ ಸಹಕಾರಿ ಸಂಸ್ಥೆಗಳನ್ನು ಆಯ್ಕೆ ಮಾಡಿ ಗೌರವಿಸಲಾಗಿದ್ದು, ಅವುಗಳಲ್ಲಿ ಶ್ರೀ ಧನಲಕ್ಷ್ಮೀ ಸೌಹಾರ್ದ ಪತ್ತಿನ ಸಹಕಾರ ಸಂಘ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಐದು ಶಾಖೆಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಸಂಘವು ಗ್ರಾಮೀಣ ಜನತೆ, ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಸಂಘಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಆಳಂದ ತಾಲೂಕಿನ ಸಹಕಾರ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಸದಸ್ಯರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸೋಮಲಿಂಗ ಕೌಲಗಿ, ನಿರ್ದೇಶಕರಾದ ವಿಠಲ ಖಾನಾಪುರೆ, ಶ್ರೀಕಾಂತ್ ದೇಶಟ್ಟಿ, ಯೋಗಿರಾಜ ಮಾಡ್ಯಾಳೆ, ದೀಪಾ ಮಾಡ್ಯಾಳೆ, ಕವಿತಾ ಹಿರೇಮಠ, ವಿಜಯಲಕ್ಷ್ಮಿ ಕೊರಳ್ಳಿ, ಮಲ್ಲಿನಾಥ ಯಲಶೇಟ್ಟಿ, ಶಿವಕುಮಾರ ಬಾರಾಬಾಯಿ ಹಾಗೂ ಸಂಘದ ವ್ಯವಸ್ಥಾಪಕ ಸೋಮನಾಥ ನಿಂಬರ್ಗಿ ಉಪಸ್ಥಿತರಿದ್ದರು.






