ಚಿತ್ತಾಪುರ: ಕೋಲಿ ಸಮಾಜದ ಯುವ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಆಯೋಜಿಸಿದ್ದ ಕೋಲಿ ಸಮಾಜದ ಸಭೆಯಲ್ಲಿ ಸಮಾಜದ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಪಟ್ಟಣದ ರಾಜೇಶ ನರಸಪ್ಪ ಹೋಳಿಕಟ್ಟಿ, ನಗರ ಯುವ ಘಟಕದ ಅಧ್ಯಕ್ಷರಾಗಿ ಬಸವರಾಜ ಹುಣಿಚೆಪ್ಪ ಮೈನಾಳಕರ್ ಆಯ್ಕೆಯಾಗಿದ್ದಾರೆ.
ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಅವರು ಅಧ್ಯಕ್ಷರ ಹೆಸರು ಘೋಷಿಸಿದರು. ಮುಖಂಡ ಭೀಮಣ್ಣಾ ಸಾಲಿ ಅವರು ಅನುಮೋದಿಸಿದರು.
ಪದಾಧಿಕಾರಿಗಳು: ಶೇಖಪ್ಪ ಶರಣಪ್ಪ ಬಡಿಗೇರ ಆಲೂರು (ಉಪಾಧ್ಯಕ್ಷ), ಹಣಮಂತ ವೆಂಕಟರಮಣ ಬೇವಿನಗಿಡ ಭಂಕಲಗಾ (ಪ್ರಧಾನ ಕಾರ್ಯದರ್ಶಿ), ರಮೇಶ ಭೀಮಶಾ ವಾಡಿ (ಸಹ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಪದಾಧಿಕಾರಿಗಳಿಗೆ ಸಮಾಜದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ
ಬಾನರ, ನಗರ ಘಟಕದ ಅಧ್ಯಕ್ಷ ಪ್ರಭು ಹಲಕರ್ಟಿ, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ, ಸುರೇಶ ಬೆನಕನಳ್ಳಿ, ಹಣಮಂತ ಸಂಕನೂರು, ಮಹಿಪಾಲ್ ಮೂಲಿಮನಿ, ದೇವಿಂದ್ರ ಅರಣಕಲ್, ಮಲ್ಲಿಕಾರ್ಜುನ ಸಂಗಾವಿ, ಕರಣಕುಮಾರ ಅಲ್ಲೂರು, ಹಣಮಂತ ಕಟ್ಟಿ, ಶಿವಶರಣ ಸಾಲಹಳ್ಳಿ ಸೇರಿದಂತೆ ಅನೇಕರು ಇದ್ದರು.





