Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಜ.31ರಿಂದ ಫೆ.3ವರೆಗೆ ಯಳಸಂಗಿಯಲ್ಲಿ...

ಜ.31ರಿಂದ ಫೆ.3ವರೆಗೆ ಯಳಸಂಗಿಯಲ್ಲಿ ಭಾರತೀಯ ಆಧ್ಯಾತ್ಮಿಕ ಉತ್ಸವ: ಪರಮಾನಂದ ಮಹಾಸ್ವಾಮೀಜಿ

ವಾರ್ತಾಭಾರತಿವಾರ್ತಾಭಾರತಿ22 Jan 2025 8:48 PM IST
share
ಜ.31ರಿಂದ ಫೆ.3ವರೆಗೆ ಯಳಸಂಗಿಯಲ್ಲಿ ಭಾರತೀಯ ಆಧ್ಯಾತ್ಮಿಕ ಉತ್ಸವ: ಪರಮಾನಂದ ಮಹಾಸ್ವಾಮೀಜಿ

ಕಲಬುರಗಿ: ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿನ ಜಗದ್ಗುರು ಶ್ರೀ ಸಿದ್ಧಾರೂಢ ಮಠದ ರಜತ ಮಹೋತ್ಸವ ಶ್ರೀ ಪರಮಾನಂದ (ಸಿದ್ಧಾರೂಢ ಭಾರತಿ), ಮಹಾಸ್ವಾಮಿಗಳ ದ್ವ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಜ.30ರಿಂದ ಫೆ.3ರವರೆಗೆ ಶ್ರೀಮಠದಲ್ಲಿ ಭಾರತೀಯ ಆಧ್ಯಾತ್ಮಿಕ ಉತ್ಸವ ಅಂಗವಾಗಿ ಐತಿಹಾಸಿಕವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಐದು ದಿನಗಳ ಕಾಲ ಅರ್ಥಪೂರ್ಣವಾಗಿ ಜರುಗಲಿದ್ದು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಪರಮಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಆಳಂದ ಪಟ್ಟಣದ ಭಾರತನಗರದ ಜಗದ್ಗುರು ಶ್ರೀ ಸಿದ್ಧಾರೂಢ ಮಠದಲ್ಲಿ ಬುಧವಾರ ತಮ್ಮ ಕಾರ್ಯಕ್ರಮದ ಸಿದ್ಧತೆಗೆ ಕರೆದ ಸಭೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಉತ್ಸವದ ಭರದ ಸಿದ್ಧತೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಡಿನ ಅನೇಕ ಜನ ಸಾಧುಸಂತರು ಮಹಾತ್ಮರು ಜಗದ್ಗುರುಗಳು ಪಂಡಿತೋತ್ತಮರು ಆಗಮಿಸುತ್ತಿದ್ದಾರೆ. ಅವರೆಲ್ಲರ ಆಧ್ಯಾತ್ಮಿಕ ಚಿಂತನೆಗಳು, ಕೃಷಿ ವಿಚಾರಗಳು ಸಾಮಾಜಿಕ ಚಿಂತನೆಗಳು ಎಲ್ಲವೂ ನಾಡಿನ ಸದ್ಭಕ್ತಸ್ತೋಮಕ್ಕೆ ಲಾಭತಲುಪಿಸುವ ಜೊತೆಗೆ ಪೂರ್ವಭಾವಿಯಾಗಿ ಹತ್ತು ದಿನಗಳ ಕಾಲ ಯೋಗ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಶಿಬಿರಗಳು ಹೀಗೆ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಜ.20ರಿಂದ19ರವರೆಗೆ ಯೋಗಶಿಬಿರ ಆರಂಭಿಸಿದ್ದು, ಜ.23ರಿಂದ ಫೆ.3ವರೆಗೆ ಶ್ರೀ ಸಿದ್ಧರೂಢ ಕಥಾಮೃತ ಪಾರಾಯಣ ಸಪ್ತಾಹ, ಜ.30ರಿಂದ ಫೆ. 3ವರೆಗೆ ಶ್ರೀಮದ್ಧಭಗ್ವತಗೀತಾ ಪಾರಾಯಣ, ಜ.19ರಿಂದ ಫೆ. 29ರವರೆಗೆ ಸಿದ್ಧಾರೂಢರ ಉತ್ಸವ ಮೂರ್ತಿಯ 108 ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಐದು ದಿನಗಳ ಕಾಲಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ಪ್ರವಚನ ಬೃಹತ್ ಧಾರ್ಮಿಕ ಸಮಾರಂಭ ನಡೆಯಲಿದೆ ಎಂದರು.

ಕಣ್ಣೀರಿಯಾ ಅದೃಶ್ಯ ಕಾಡು ಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಕೃಷಿ ಋಷಿ ರೈತ ವಿಜ್ಞಾನಿಯಾಗಿರುವಂತ ಗುಜರಾತಿನ ಗೋಶಾಲೆಯ ಗೋಪಾಲ್ ಭಾಯ್ ಸುತಾರಿ ಸೇರಿದಂತೆ ಜಿಡಗಾದ ಡಾ. ಮುರುಘರಾಜೇಂದ್ರ ಶ್ರೀ, ಹವಾ ಮಲ್ಲಯ್ಯಾ ಮುತ್ಯಾ, ನಿಂಬಾಳ ಶ್ರೀ, ಬಾಲ್ಕಿ ಶ್ರೀ, ಬೆಂಗಳೂರಿನ ಶ್ರೀಗಳು ಸೇರಿ ನೂರಕ್ಕೆ ಹೆಚ್ಚು ಸಾಧು ಸಂತರು, ಮಠಾಧೀಶರು, ಶಾಸಕರು, ಸಚಿವರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜ.30ರಂದು ಬೆಳಗಿನ ಜಾವ 8ಗಂಟೆಗೆ ಯಳಸಂಗಿ ಶ್ರೀ ಸಿದ್ಧಗಿರಿ ತಪ್ಪೋವನದಲ್ಲಿ 1008 ಸುಮಂಗಲೆಯ ಉಡಿತುಂಬುವುದು, ನಂತರ ಸಹಸ್ರ ಕುಂಭ ಕಳಸದೊಂದಿಗೆ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಅಮೃತ ಶಿಲಾ ಮೂರ್ತಿಯ ಹಾಗೂ ಆಗಮಿಸಿದ ಮಹಾತ್ಮರ ಜೊತೆಯಲ್ಲಿ ಜೊತೆಯಲ್ಲಿ 25 ಜೋಡೆತ್ತುಗಳ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಶ್ರೀಮಠಕ್ಕೆ ಸಾಗಲಿದೆ ಎಂದು ಹೇಳಿದರು. ಬೆಳಗಿನ 9.30ಗಂಟೆಗೆ ನಡೆಯುವ ಧಾರ್ಮಿಕ ಸಭೆ ಹಾಗೂ ಪ್ರವಚನದಲ್ಲಿ ಬೀದರ ಚಿದಂಬರಾಶ್ರಮದ ಡಾ.ಶಿವುಕುಮಾರ ಮಹಾಸ್ವಾಮಿಗಳು, ಯಳಸಂಗಿ, ಬಬಲಾದ ಮಠದ ಶ್ರೀ ಗುರುಪಾದಲಿಂಗ ಮಹಾಶಿಯೋಗಿಗಳು ಸೇರಿದಂತೆ ಪ್ರಮುಖ ಊರುಗಳ ಮಠಾಧೀಶರು ಪಾಲ್ಗೊಳ್ಳುವರು ಎಂದರು.

ಸಂಜೆ 6ಗಂಟೆಗೆ ನಡೆಯುವ ಪ್ರವಚನದ ಸಾನ್ನಿಧ್ಯವನ್ನು ಬೀದರ ಡಾ. ಶಿವುಕುಮಾರ ಶ್ರೀಗಳು, ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ಮುಚ್ಚಳಂಬದ ಪ್ರಣವಾನಂದ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಆಗಮಿಸುವರು.

ಜ.31ರಂದು ಬೆಳಗಿನ 9.30ಕ್ಕೆ ಬೀದರ ಡಾ. ಶಿವುಕುಮಾರ ಶ್ರೀಗಳಿoದ ಪ್ರವಚನ ನಡೆಯುವುದು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೆಯಂದ್ರ, ಬಿ.ಜಿ.ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಶಾಸಕರಾದ ಬಸವರಾಜ ಮುತ್ತಿಮುಡ್, ಶರಣು ಸಲಗರ, ಮಾಜಿ ಶಾಸಕ ದತ್ತಾತ್ರೆಯ ಪಾಟೀಲ, ವೇದಿಕೆಯಲ್ಲಿ ನಿತ್ಯ ಶ್ರೀ ಪರಮಾನಂದ ಶ್ರೀಗಳಿಗೆ ಭಕ್ತಾದಿಗಳಿಂದ ಸರಣಿ ತುಲಾಬಾರ ಸೇವೆ ನಡೆಯುವುದು. ಅಲ್ಲದೆ, ಆಳಂದ ಸಿದ್ಧರೂಢ ಮಠದ ಭಕ್ತಾದಿಗಳಿಂದ ರಜತ ಮಹೋತ್ಸವ ಸಿದ್ಧಾರೂಢರ ಉತ್ಸವಮೂರ್ತಿ ತುಲಾಭಾರ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸಮಾಜ ಸೇವೆಯಲ್ಲಿ ಸಾಧನೆ ಕೈಗೊಂಡ ಒಟ್ಟು 50 ಸಾಧಕರಿಗೆ ಗೌರವ ಸತ್ಕಾರ, ನಡೆಯಲಿದೆ. ಲೇಖಕ ಎಸ್.ಆರ್. ಒಡೆಯರ್ ರಚಿತ ಕಿರು ಪುಸ್ತಕ ಅನುಭವಾಂಕುರ ಬಿಡುಗಡೆ ನಡೆಯಲಿದೆ.

ಫೆ.1ರಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಶಾಸನ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ, ಅರಣ್ಯ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ಸಿದ್ಧರಾಮ ಮೇತ್ರೆ, ಕೆಕೆಆರ್‌ಡಿಬಿ ಡಾ. ಅಜಯಸಿಂಗ್, ಸಂಸದ ಸಾಗರ ಖಂಡ್ರೆ, ಶಾಸಕ ಅಲ್ಲಂ ಪ್ರಭು, ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಮತ್ತಿತರು ಆಗಮಿಸುವರು.

ಫೆ.2ರಂದು ಬೆಳಗಿನ 9.30ಗಂಟೆಗೆ ಪ್ರವಚನ ಹಾಗೂ ಸಂಜೆ 6ಗಂಟೆಗೆ ಭಾರತೀಯ ಕೃಷಿ ಸಂಸ್ಕೃತಿ ಪ್ರವಚನ ಕನ್ನೇರಿ ಮಠದ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ವಿಜಯಪೂರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು, ಮುಚ್ಚಳಂಬ ಪ್ರಣವಾನಂದ ಮಹಾಸ್ವಾಮಿಗಳು, ಹಂಪಿಯ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು, ವಿಶ್ವ ಹಿಂದೂ ಪರಿಷತ್ ಉತ್ತರಾ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪಾ, ಗುಜರಾತನ ಗೋಪಾಲ ಭಾಯ್, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅನೇಕರು ಆಗಮಿಸುವರು.

ಫೆ.3ರ ಕಾರ್ಯಕ್ರಮಕ್ಕೆ ಶ್ರೀ ಹವಾಮಲ್ಲಿನಾಥ ಮಹಾಸ್ವಾಮಿಗಳು ಮತ್ತಿತರು ಪಾಲ್ಗೊಳ್ಳುವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಈ ಸಂದರ್ಭದಲ್ಲಿ ಕಮೀಟಿಯ ಕಾರ್ಯದರ್ಶಿ ಭೀಮಣ್ಣಾ ಶಿವಪೂರೆ, ಸುಧಾಕರ ಖಾಂಡೇಕರ್, ಆಳಂದ ಸಿದ್ಧರೂಢ ಮಠದ ಧರ್ಮಲಿಂಗ ಸ್ವಾಮಿ ಜಗದೆ ಮತ್ತಿತರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X