ಕಲಬುರಗಿ | ಆರೆಸ್ಸೆಸ್ ನಿಷೇಧಿಸಲು ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಪ್ರತಿಭಟನೆ

ಕಲಬುರಗಿ: ಭಾರತದ ಏಳಿಗೆಗಾಗಿ ದೇಶದ ಪ್ರಜಾ ಪ್ರಭುತ್ವವನ್ನು ಉಳಿಸಲು ಈ ದೇಶದಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಆರೆಸ್ಸೆಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸುವುದರ ಮುಖಾಂತರ ಭಾರತದಲ್ಲಿ ಪ್ರಜಾ ಪ್ರಭುತ್ವವನ್ನು ಉಳಿಸಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಾಲೂಕು ಘಟಕ ಆಗ್ರಹಿಸಿದೆ.
ಜೇವರ್ಗಿ ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ಪ್ರತಿಭಟನೆಕಾರರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮುಖಾಂತರ ಜೀವ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳನ್ನು ಬಂಧಿಸಬೇಕು, ಆರೆಸ್ಸೆಸ್ ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ತಾಲೂಕು ಆಡಳಿತದ ವತಿಯಿಂದ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ದೇಶದಲ್ಲಿ ಬುದ್ಧರ, ಬಸವಣ್ಣನವರ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ದಾಂತಗಳ ಮೇಲೆ ಬದುಕುತ್ತಿರುವ ಹಾಗೂ ಜಾತಿ ರಹಿತ, ವರ್ಗ ರಹಿತ, ಶೋಷಣೆ ರಹಿತ, ಸಮಾಜ ಕಟ್ಟುವಲ್ಲಿ ಅತ್ಯಂತ ಪ್ರಭಾವಿ ನಾಯಕರಾದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರನ್ನ ದೂರವಾಣಿ ಮುಖಾಂತರ ಜೀವ ಬೆದರಿಕೆ ಹಾಕಿದ ಆರೋಪಿಗಳನ್ನ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು. ದೇಶದಲ್ಲಿ ಯುವ ಸಮುದಾಯದ ಹಾದಿಯನ್ನು ತಪ್ಪಿಸಿ ಈ ದೇಶದಲ್ಲಿ ಕೋಮುಗಲಬೆಯನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತಿರುವ ಆರೆಸ್ಸೆಸ್ ಗೆ ಸರಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ನೀಡಬಾರದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸದ ಮುಖಂಡರುಗಳಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶ್ರೀಹರಿ ಕರಕಳ್ಳಿ, ಸಿದ್ರಾಮ ಕಟ್ಟಿ, ವಿಶ್ವರಾಧ್ಯ ಗಂವ್ಹಾರ, ದವಲಪ್ಪ ಮದನ್, ರವಿ ಕುಳಗೇರಿ, ಸಿದ್ದು ಕೇರೂರ, ಮಾಪಣ್ಣ ಕಟ್ಟಿ, ಮಲ್ಲಿಕಾರ್ಜುನ ಕಟ್ಟಿ, ಮಹೇಶ ಕೋಕಿಲೆ, ಶಿವಶರಣ ಮಾರಡಗಿ, ಗುಂಡಪ್ಪ ಜಡಗಿ, ಶಿವಶರಣಪ್ಪ ಮಂದೆವಾಲ, ಪರಮಾನಂದ ಯಲಗೋಡ, ಯಶವಂತ ಬಡಿಗೇರ, ಶ್ರೀಮಂತ ಕಿಲ್ಲೆದಾರ, ಭಾಗಣ್ಣ ಸಿದ್ನಾಳ, ಗುರುಲಿಂಗಪ್ಪ ಗುಡೂರ, ಶರಣಬಸಪ್ಪ ರೇವನೂರ, ಸಿದ್ದು ಶರ್ಮಾ, ಭೀಮರಾಐ ಬಳಬಟ್ಟಿ, ವಿಶ್ವರಾಧ್ಯ ಗೋಪಾಲ್ಕರ್, ಭಾಗಣ್ಣ ಕಟ್ಟಿ, ಸುಭಾಷ ಕುಮ್ಮನಶಿರಸಗಿ, ಮರೆಪ್ಪ ಜನಿವಾರ, ಅಬ್ದುಲ್ ಗನಿ, ಸಮಾಜದ ಹಿರಿಯರಾದ ಚಂದ್ರಶೇಖರ ಹರನಾಳ, ಶಾಂತಪ್ಪ ಕುಡಲಗಿ, ಶಾಂತಪ್ಪ ಯಲಗೋಡ, ಪುಂಡಲಿಕ ಗಾಯಕ್ವಾಡ, ಮಲ್ಲಮ್ಮ ಕೊಬ್ಬಿನ್, ಭೆಣ್ಣೆಪ್ಪ ಕೊಂಬಿನ್, ರಾಜಶೇಖರ ಶೀಲ್ಪಿ, ಪ್ರಭಾಕರ್ ಸಾಗರ ಸೇರಿದಂತೆ ಅನೇಕರಿದ್ದರು.







