ಕಲಬುರಗಿ: ʼಹೆಮ್ಮೆಯ ಕನ್ನಡಿಗʼ ಪ್ರಶಸ್ತಿಗೆ ಧರ್ಮಣ್ಣ ಎಚ್. ಧನ್ನಿ ಆಯ್ಕೆ

ಕಲಬುರಗಿ: ಬೆಂಗಳೂರಿನ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಕೊಡುವ "ಹೆಮ್ಮೆಯ ಕನ್ನಡಿಗ'' ಪ್ರಶಸ್ತಿಗೆ ಸಾಹಿತಿ, ಕವಿ ಧರ್ಮಣ್ಣ ಎಚ್ ಧನ್ನಿ ಅವರು ಆಯ್ಕೆಯಾಗಿದ್ದಾರೆ.
ಕಳೆದ ಮೂರು ದಶಕಗಳಿಂದಲೂ ಸಾಹಿತ್ಯ, ಪತ್ರಿಕೆ ಹಾಗೂ ಸಾಂಸ್ಕೃತಿಕ ಬಳಗದಲ್ಲಿ ಮಾಡಿರುವ ಕಾರ್ಯ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಗೌರವ ಕಾರ್ಯದರ್ಶಿಯಾಗಿ ಕಳೆದ ಮೂರು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಅಮರ್ಜಾ ಪ್ರಕಾಶನ ಸ್ಥಾಪಿಸಿ ಜಿಲ್ಲೆಯ 23ಕ್ಕೂ ಹೆಚ್ಚಿನ ಯುವ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಸಿದ್ದಾರೆ. ಜತೆಗೆ 12ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು ಸೃಜನಶೀಲ ಸಾಹಿತಿಯಾಗಿ ಗುರುತಿಸಿ ಕೊಡಿದ್ದಾರೆ.ಅವರ 'ನೆನಪಿನ ಅಲೆಯಲ್ಲಿ' ಎಂಬ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯವು "ರಾಜ್ಯೋತ್ಸವ ಪ್ರಶಸ್ತಿ" ಪ್ರಶಸ್ತಿ ನೀಡಿ ಗೌರವಿಸಿದೆ.
ಇದೇ 23ರಂದು ಕನ್ನಡ ಭವನದಲ್ಲಿ ಜರುಗಲಿರುವ ಕಲಬುರಗಿ ಸಾಹಿತ್ಯ ಸಂಭ್ರಮ-2026 ಎಂಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲೆಯ ಅನೇಕ ಗಣ್ಯರು ಧರ್ಮಣ್ಣ ಧನ್ನಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




