ಕಲಬುರಗಿ | ಡಾ.ಫಾರುಕ್ ಮಣ್ಣೂರ್ ರಾಜಕೀಯಕ್ಕೆ ಬರಬೇಕು : ತಿಪ್ಪಣಪ್ಪ ಕಮಕನೂರ

ಕಲಬುರಗಿ : ಡಾ.ಸಿ.ಎನ್. ಮಂಜುನಾಥ ಅವರು ಹೃದಯ ತಜ್ಞರಾಗಿ ಅನೇಕ ಬಡ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಜನರ ಪ್ರೀತಿ ವಿಶ್ವಾಸ ಸಂಪಾದಿಸಿ ಜನರ ಆಶಿರ್ವಾದದಿಂದ ಲೋಕಸಭೆಗೆ ಆಯ್ಕೆ ಆದರು. ಅದೇ ಮಾದರಿಯಲ್ಲಿ ಡಾ.ಫಾರುಕ್ ಮಣ್ಣೂರ್ ಅವರು ಕೂಡ ರಾಜಕೀಯಕ್ಕೆ ಬಂದು ಬಡ ಜನರ ಸೇವೆ ಮಾಡಬೇಕು, ಇದಕ್ಕೆ ನಮ್ಮ ಬೆಂಬಲ ಸಹಕಾರ ಸದಾ ಇರುತ್ತದೆ ಎಂದು ಡಾ.ಫಾರುಕ್ ಮಣ್ಣೂರ್ ಅವರಿಗೆ ವಿಧಾನ ಪರಿಷತ ಸದಸ್ಯ ತಿಪ್ಪಣಪ್ಪ ಕಮಕನೂರ ರಾಜಕೀಯಕ್ಕೆ ಅಹ್ವಾನಿಸಿದರು.
ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಕೇತಕಿ ಗಾರ್ಡನ್ ನಲ್ಲಿ ಡಾ.ಫಾರುಕ್ ಮಣ್ಣೂರ್ ಅಭಿಮಾನಿ ಬಳಗದಿಂದ ಡಾ.ಫಾರುಕ್ ಮಣ್ಣೂರ್ ಅವರ 38ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ದಿವಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಿಮ್ಮಂತವರು ಜನಪರ, ಬಡವರ ಪರ , ಹಿಂದುಳಿದವರ ಪರ ಕಾಳಜಿವುಳ್ಳವರು ರಾಜಕೀಯಕ್ಕೆ ಬಂದರೆ ಜನರಿಗೆ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಾಗುತ್ತದೆ, ರಾಜಕೀಯ ಯಾರಪ್ಪನ ಆಸ್ತಿಇಲ್ಲ ಎಂದು ಹೇಳಿದರು.
ಮಣ್ಣೂರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಮಣ್ಣೂರ್ ಮಾತನಾಡಿ, ಇಂದು ಪ್ರತಿಯೊಬ್ಬ ಪೋಷಕರು ಹೆಣ್ಣು ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಿದರೆ ಹೆಣ್ಣು ಮಗು ಇಡೀ ಕುಟುಂಬಕ್ಕೆ ವಿದ್ಯಾವಂತರನ್ನಾಗಿ ಮಾಡುತ್ತದೆ, ಆದ ಕಾರಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು ಎಂದರು.
ಮಣ್ಣೂರ್ ಆಸ್ಪತ್ರೆಯು ಪ್ರಾರಂಭವಾದಗಿನಿಂದ ಕಲಬುರಗಿ ಜಿಲ್ಲೆಯ 750 ಕ್ಷಯ ರೋಗಿಗಳನ್ನು ದತ್ತು ಪಡೆದು ಪೌಷ್ಠಿಕ ಆಹಾರ ವಿತರಣೆ ಮಾಡಲಾಗುತ್ತಿದೆ, ಕಲಬುರಗಿ ಜಿಲ್ಲಾದ್ಯಂತ ಉಚಿತವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ, ಮಧುಮೇಹ ಮುಕ್ತ ಕಲಬುರಗಿ ಉದ್ದೇಶದಿಂದ ಉಚಿತವಾಗಿ ಮಧುಮೇಹ ತಪಾಸಣೆ ಅಭಿಯಾನ ಹಮ್ಮಿಕೊಳ್ಳಲಾಗಿದ , ಕಲಬುರಗಿ ಜಿಲ್ಲೆಯ ಸುಮಾರು 360 ಬಡ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ ದತ್ತು ಪಡೆದು 18 ವರ್ಷಗಳ ವರೆಗೆ ಅವರ ಹಣದ ಕಂತ್ತನ್ನು ಆಸ್ಪತ್ರೆಯಿಂದ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜನಾಬ ಮೌಲಾನಾ ಅಲ್ತಾಫ ಪಟೇಲ್ ಸಾಹೆಬ್, ಸೆಟ್ ಮೇತಿ ಚರ್ಚನ ಫಾಧರ ಸ್ಟೇನಿ ಲೊಬೊ, ಬೆಳಮಗಿಯ ಜ್ಞಾನ ಭೂಮಿ ಬುದ್ಧ ವಿಹಾರದ ಭೋದಿ ಭಂತೆ ಅಮರ ಜ್ಯೋತಿ, ಮೌನೇಶ್ವರ ಮಠ ಗಂಜಲ ಖೇಡದ ಪೂಜ್ಯ ಶ್ರೀ ನಾಗೇಶ ಮಾಣಿಕ ಅಪ್ಪಾಜಿ, ಪಾಳಾ ಸಂಸ್ಥಾನ ಮಠದ ಪ.ಪೂಜ್ಯ ಗುರುಮೂರ್ತಿ ಶಿವಾಚರ್ಯರು, ಶಾಸಕಿ ಖನಿಜ್ ಫಾತಿಮಾ, ಮಾಜಿ ಜಿ.ಪಂ ಅಧ್ಯಕ್ಷರಾದ ನೀತಿನ ಗುತ್ತೇದಾರ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ,ಬಾಬುಮಿಯ್ಯಾ ಮಣ್ಣೂರ, ನಿಲಂಕಠರಾವ ಮೂಲಗೆ, ಪತ್ರಕರ್ತ ಸಙಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ. ಡಿ.ಹೆಚ್.ಓ ಆರಣಬಸಪ್ಪ ಖ್ಯಾತನಾಳ, ಶರಣಬಸಪ್ಪ ಖೇಣಿ, ಉದಯ ಪಾಟೀಲ್, ಧರ್ಮರಾಜ ಕಲ್ಲಹಿಪಪ್ರಗಾ, ಅಲ್ಲಮಪ್ರಭು ದೇಶಮುಖ, ಹರ್ಷ, ಅಮೀರ ನಿಂಭಾಳಕರ್.ಸಂಜು ಪಾಟೀಲ್, ಮತೀನ ಅಲಿ, ಇಸ್ಮಾಯಿಲ್, ರಾಜು ಕಂಬಳಿಮಠ, ಮಂಜುನಾಥ ಕಂಬಳಿಮಠ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.