Kalaburagi | ಡಾ.ಅಂಬೇಡ್ಕರ್ 135ನೇ ಜಯಂತಿ ನಿಮಿತ್ತ ನೇತ್ರದಾನ ಶಿಬಿರ

ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವದ ಅಂಗವಾಗಿ “ಡಾ.ಅಂಬೇಡ್ಕರ್ ಅರಿವು ಉತ್ಸವ - 2026” ಹಿನ್ನಲೆಯಲ್ಲಿ ನೇತ್ರದಾನ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರು ಸಾನಿಧ್ಯ ವಹಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ನೇತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಕವಿತಾ ಪಾಟೀಲ್, ಜಿಲ್ಲಾ ಆರ್ಸಿಎಚ್ ಅಧಿಕಾರಿಗಳಾದ ಡಾ.ಸಿದ್ರಾಮಪ್ಪ ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದರು.
ಇದೇ ವೇಳೆ ಸೋಮಶೇಖರ್ ಮೇಲಿನಮನಿ, ವಿಶ್ವನಾಥ ಕಾರ್ನಾಡ, ಹಣಮಂತ ಇಟಗಿ, ಅರವಿಂದ ಕಮಲಾಪೂರಕರ್, ರೆಣುಕಾ ಸರಡಗಿ, ವಿನೋದ ಕಾಂಬಳೆ, ಮಯೂರ ವಾಘಮೋರೆ, ಉಮರೆಶ ಶೃಂಗೆರಿ, ಸಿದ್ಧಾರ್ಥ ಪಾರೆ ಹಾಗೂ ಅಲ್ಲಮಪ್ರಭು ನಿಂಬರ್ಗಾ ಉಪಸ್ಥಿತರಿದ್ದರು.
Next Story





