ಕಲಬುರಗಿ | ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ರೇವಣಸಿದ್ದಪ್ಪ
ಕಲಬುರಗಿ : ಸಾಲಬಾಧೆ ತಾಳಲಾರದೆ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಮಲಾಪೂರ ತಾಲೂಕಿನ ಮುತ್ಯಾನ ಬಬಲಾದ(ಐಕೆ) ಗ್ರಾಮದಲ್ಲಿ ನಡೆದಿದೆ.
ಆಳಂದ ತಾಲೂಕಿನ ನರೋಣ ಗ್ರಾಮದ ನಿವಾಸಿ ರೇವಣಸಿದ್ದಪ್ಪ ಅಪ್ಪಾರವ್ ಡೊಂಗರಿಗಿ (55) ಆತ್ಮಹತ್ಯೆ ಮಾಡಿಕೊಡಿರುವ ರೈತ ಎಂದು ತಿಳಿದುಬಂದಿದೆ.
ಜ.29ರಂದು ಬೆಳಿಗ್ಗೆ ಬಬಲಾದ(ಐಕೆ) ಶ್ರಿಚಂದ ಗ್ರಾಮದ ರಸ್ತೆಯಲ್ಲಿ ಮೃತ ದೇಹಪತ್ತೆಯಾಗಿದ್ದು, ಬ್ಯಾಂಕ್ನಲ್ಲಿ 10 ಲಕ್ಷ ರೂ. ಸಾಲ ಮಾಡಿದ್ದ ರೈತ ರೇವಣಸಿದ್ದಪ್ಪ, ಸಾಲಬಾಧೆ ತಾಳಲಾರದೆ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಿಎಸ್ಐ ಆಶಾ ರಾಠೋಡ್ ತಿಳಿಸಿದ್ದಾರೆ.
ಈ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Next Story







