ಕಲಬುರಗಿ | ಸ್ರೀ ಕುಲಕ್ಕೆ ಹೇಮರೆಡ್ಡಿ ಮಲ್ಲಮ್ಮ ಅನನ್ಯ ರತ್ನ : ಮಹಿಪಾಲರೆಡ್ಡಿ ಮುನ್ನೂರು

ಕಲಬುರಗಿ: ತನಗಾಗಿ ಏನನ್ನೂ ಬೇಡದ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕಾಗಿ ಮತ್ತು ನಿಸ್ವಾರ್ಥದಿಂದ ಬದುಕಿದವಳು ಎಂದು ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯ ಕಾರ್ಯಸೌಧ ಡಾ.ರಾಧಾಕೃಷ್ಣ ಸಭಾಂಗಣದಲ್ಲಿ ಮಹಾಸಾದ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಮಾನವ ಕುಲದ ಜೀವಲೋಕದ ಮಹಾತಾಯಿ ಹೇಮರೆಡ್ಡಿ ಮಲ್ಲಮ್ಮ. ಕೌಟುಂಬಿಕ ಕಲಹಗಳ ನಡುವೆ ಕಷ್ಟಗಳು ಅವಮಾನಗಳನ್ನು ಸಹಿಕೊಂಡು ಬದುಕಿನ ಮಹಾ ಸ್ವಾದಿ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಧೀಮಂತ ಮಹಿಳೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಗೂರು ಶ್ರೀರಾಮುಲು ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನ ಕುರಿತು ಇನ್ನೂ ಅನೇಕ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವರಾದ ಡಾ.ಎನ್.ಜಿ.ಕಣ್ಣೂರ ವಿದ್ಯಾವಿಷಯಕ, ಪರಿಷತ್ ಸದಸ್ಯರಾದ ಪ್ರೊ.ರಾಜನಾಳ್ಕರ್ ಲಕ್ಷ್ಮಣ್, ಸಿಂಡಿಕೇಟ್ ಸದಸ್ಯರಾದ ಮಲ್ಲಣ್ಣ ಎಸ್.ಮಡಿವಾಳ ಎಸ್.ಪಿ.ಸುಳ್ಯದ ಎಲ್ಲಾ ನಿಕಾಯದ ಡೀನರು ಮತ್ತು ವಿಭಾಗಗಳ ಮುಖ್ಯಸ್ಥರು ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜಯಂತಿ ಸಂಚಾಲಕರಾದ ಪ್ರೊ.ಜೆ.ಲಲಿತಾ ನಿರೂಪಿಸಿದರು ಮತ್ತು ಆಡಳಿತಾತ್ಮಕ ಕುಲಸಚಿವರಾದ ಪ್ರೊ.ರಮೇಶ ಲಂಡನಕರ್ ವಂದನಾರ್ಪಣೆ ಮಾಡಿದರು.
ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಈಗ ಸರಳವಾಗಿ ನಡೆಸಿದ್ದು, ಜೂನ್ ತಿಂಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ನವರ ಕುರಿತ ವಿಶೇಷ ಕಾರ್ಯಕ್ರಮ ಆಯೋಜಿಸುವಂತೆ ಜಯಂತಿ ಕಾರ್ಯಕ್ರಮ ಸಂಚಾಲಕರಾದ ಪ್ರೊ.ಜೆ.ಲಲಿತಾ ಅವರು ಕುಲಪತಿಗಳಿಗೆ ಮನವಿ ಮಾಡಿದರು.