ಕಲಬುರಗಿ: ಬುದ್ಧ-ಬಸವ-ಅಂಬೇಡ್ಕರ್ ಜಯಂತ್ಯೋತ್ಸವ ಕರಪತ್ರ ಬಿಡುಗಡೆ
ಕಲಬುರಗಿ: ರಾಮದಾಸ್ ಅಠವಲೆ ಅವರು ಇದೇ ತಿಂಗಳ 25ರಂದು ಕಲಬುರಗಿ ನಗರಕ್ಕೆ ಆಗಮಿಸಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ‘ನನ್ನ ಅಂಬೇಡ್ಕರ್’ ನಾಟಕ ಪ್ರದರ್ಶನದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಸಮಾರಂಭ ಗುರುವಾರ ಜಗತ್ ವೃತ್ತದ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ನಡೆಯಿತು.
ಹಿರಿಯ ದಲಿತ ಮುಖಂಡ ದೇವೇಂದ್ರ ಶೆಳ್ಳಗಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಭಗವಾನ್ ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಸಮಾನತೆ, ಸಹೋದರತೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶವನ್ನು ಜನರಿಗೆ ತಲುಪಿಸುವ ಇಂತಹ ಕಾರ್ಯಕ್ರಮಗಳು ಸಮಾಜಮುಖಿ ಚಿಂತನೆಗೆ ಪ್ರೇರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಬುದ್ಧ-ಬಸವ-ಅಂಬೇಡ್ಕರ್ ಜಯಂತ್ಯೋತ್ಸವ ಹಾಗೂ ‘ನನ್ನ ಅಂಬೇಡ್ಕರ್’ ನಾಟಕ ಪ್ರದರ್ಶನವು ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆರ್ಪಿಐ ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಎ.ಬಿ. ಹೊಸಮನಿ, ಮಿಲಿಂದ್ ಕಣ್ಮುಸ್, ರೇವಣಸಿದ್ದಪ್ಪ ಹುಳಿಪಲ್ಲೆ, ಶಿವಲಿಂಗ ಹತಗುಂದಿ, ಮಹಾಂತೇಶ್ ಹೂವಿನಳ್ಳಿ, ಅಮೃತ್ ಬಂಡೆ, ಮಹಾದೇವ ಅನವಾರ್ಕರ್, ಶಂಕರ್ ಕೊರವಿ, ಹಣಮಂತಪ್ಪ ಗಾರಂಪಳ್ಳಿ, ಹಣಮಂತ ಗುಡಿಮನಿ, ಪೀರಪ್ಪ ಹಾದಿಮನಿ, ಶಾಮ್ ಸಿಂಗ್ ಕಾಳೆ, ಸೂರ್ಯಕಾಂತ್ ಹಾಗರಗಿ, ಶ್ರೀದೇವಿ, ಶರಣಬಸವ ಚಂದನಕೇರಾ, ಅನಿಲ್ ಕುಮಾರ್ ದೇವರಮನಿ, ಮಲ್ಲಿಕಾರ್ಜುನ್ ಭಾವಿಕಟ್ಟಿ, ಶಿವಾನಂದ ಪಾಟೀಲ್ ಹಾಗೂ ರಾಹುಲ್ ಹಾಗರಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.






