ಕಲಬುರಗಿ | ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮುದಾಯ ರೇಡಿಯೋಗೆ "ಸುಸ್ಥಿರತಾ ಮಾದರಿ ಪ್ರಶಸ್ತಿ"

ಕಲಬುರಗಿ : ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ 10ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಸಮುದಾಯ ರೇಡಿಯೋ ಕೇಂದ್ರ (ಅಖS) ರೇಡಿಯೋ ಅಂತರವಾಣಿಗೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರು ತೃತೀಯ ಸ್ಥಾನ ಪಡೆದ ಅಂತರವಾಣಿಗೆ ರಾಷ್ಠ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.
ಅಂತರವಾಣಿ (ಅಖS) ಮೊದಲ ಬಾರಿಗೆ ಗೆದ್ದ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯು 50,000 ರೂ. ನಗದು ಬಹುಮಾನ, ಪದಕ ಮತ್ತು ಪ್ರಶಂಸಾ ಪತ್ರವನ್ನು ಹೊಂದಿದೆ.
ಪ್ರಾಸಂಗಿಕವಾಗಿ ರೇಡಿಯೋ ಅಂತರವಾಣಿ "ಸುಸ್ಥಿರತಾ ಮಾದರಿ ಪ್ರಶಸ್ತಿ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಇಡೀ ಕರ್ನಾಟಕದಿಂದ ಏಕೈಕ ಸಮುದಾಯ ರೇಡಿಯೋ ಕೇಂದ್ರವಾಗಿದೆ ಮತ್ತು ಈ ಪ್ರಶಸ್ತಿಯ ಮತ್ತೊಂದು ವೈಶಿಷ್ಟ್ಯವೆಂದರೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ವಿವಿಧ ಭಾಗಗಳಿಂದ 530 ಕ್ಕೂ ಹೆಚ್ಚು ಸಮುದಾಯ ರೇಡಿಯೋ ಕೇಂದ್ರಗಳಿಂದ ಏರ್ಪಟ್ಟ ತೀವ್ರ ಸ್ಪರ್ಧೆಯಲ್ಲಿ ಅಂತರವಾಣಿ ಮೂರನೇ ಸ್ಥಾನ ಪಡೆದು ಕೀರ್ತಿ ತಂದಿದೆ.
ಅಂತರವಾಣಿಯು ತನ್ನ 30 ಕಿಮೀ ತಂರಗಾಂತರ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಭಾಗದ ಸುಮಾರು 100ಕ್ಕೂ ಹೆಚ್ಚು ಹಳ್ಳಿಗಳ ಕೇಳುಗರಿಗೆ ಸಮುದಾಯ ಕೇಂದ್ರದಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಅಂತರವಾಣಿ ಪ್ರಸಾರ ಮಾಡುವ ಕಾರ್ಯಕ್ರಮಗಳಾದ ಸಂಸ್ಕೃತಿ, ಜಾನಪದ, ಪರಿಸರ ಸಮಸ್ಯೆಗಳು, ಸಾಹಿತ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಸುತ್ತ ಕೇಂದ್ರೀಕೃತವಾಗಿವೆ. ಅಂತರವಾಣಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಆರೋಗ್ಯ ವಾಣಿ, ಲೈವ್ ಇನ್ ಕಾರ್ಯಕ್ರಮಗಳು ಮತ್ತು ಶರಣಬಸವೇಶ್ವರ ಸುಪ್ರಭಾತ ಸೇರಿವೆ. ಇದರ ಹೊರತಾಗಿ ರೇಡಿಯೋ ಅಂತರವಾಣಿ ಅಪ್ಲಿಕೇಶನ್ ಪ್ಲೇ ಸ್ಟೋರ್ ನಲ್ಲಿ ಪ್ರಪಂಚದಾದ್ಯಂತ ಕೇಳುಗರಿಗೆ 24ಘಿ7 ಆಧಾರದ ಮೇಲೆ ಲಭ್ಯವಿದೆ ಎಂದರು.
ಡಾ ಶಿವರಾಜ್ ಶಾಸ್ತ್ರಿ ಹೇರೂರ ಅವರು ಅಂತರವಾಣಿಗೆ ನೀಡಿದ ಪ್ರಶಸ್ತಿಯನ್ನು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಹಾಗೂ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರಿಗೆ ನೀಡಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಡಾ.ಶಿವರಾಜ ಶಾಸ್ತ್ರಿ ಅವರನ್ನು ಮಹಾಮನೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.