Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಆಳಂದ ಮುಖ್ಯರಸ್ತೆ ಅಗಲೀಕರಣ :...

ಕಲಬುರಗಿ | ಆಳಂದ ಮುಖ್ಯರಸ್ತೆ ಅಗಲೀಕರಣ : ನೋಟಿಸ್ ಜಾರಿಗೊಳಿಸಿದ ಪುರಸಭೆ

ವಾರ್ತಾಭಾರತಿವಾರ್ತಾಭಾರತಿ25 Dec 2024 9:42 PM IST
share
ಕಲಬುರಗಿ | ಆಳಂದ ಮುಖ್ಯರಸ್ತೆ ಅಗಲೀಕರಣ : ನೋಟಿಸ್ ಜಾರಿಗೊಳಿಸಿದ ಪುರಸಭೆ

ಕಲಬುರಗಿ : ಆಳಂದ ಪಟ್ಟಣದ ಹಳೆಯಕಾಲದ ಇತಿಹಾಸ ಹೊಂದಿರುವ ಮುಖ್ಯರಸ್ತೆಯ ಅಗಲೀಕರಣ ಪ್ರಕ್ರಿಯೆಗೆ ಸರಕಾರ 11 ಕೋಟಿ ರೂ. ಮೀಸಲಿಟ್ಟು ಒಂದುವರೆ ವರ್ಷ ಕಳದಿದೆ. ಈಗ ಪ್ರಕ್ರಿಯೆ ಅಂತಿಮ ಸ್ಥಿತಿಗೆ ತಲುಪಿಸಲು ಪುರಸಭೆ ಆಡಳಿತ ಭರದ ಸಿದ್ಧತೆ ಮಾಡಿಕೊಂಡು ಸಂಬoಧಿತರಿಗೆ ನೋಟಿಸ್ ಜಾರಿಗೊಳಿಸಿದೆ.

1970ರ ಮುಂಚಿತವಾಗಿ ತಮ್ಮ ಆಸ್ತಿಗಳ ಮೂಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು 15 ದಿನಗಳೊಳಗೆ ಪುರಸಭೆ ಕಚೇರಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಮ್ಮ ಆಸ್ತಿಯನ್ನು ಅನಧಿಕೃತವೆಂದು ಪರಿಗಣಿಸಿ ಪುರಸಭೆ ಕಾಯ್ದೆ 1964ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂಬ ನೋಟಿಸನ್ನು ಡಿ.19ರಂದು ಮುಖ್ಯಾಧಿಕಾರಿಗಳು ಹೊರಡಿಸಿ ಎಚ್ಚರಿಸಿದ್ದಾರೆ.

ಈ ರಸ್ತೆಗೆ ಸಂಬoಧಿಸಿದoತೆ 480 ಕಟ್ಟಡಗಳು ಎಡಬಲ ರಸ್ತೆಗೆ ಅಂಟಿಕೊoಡಿದ್ದು, ಶೇ.40 ರಷ್ಟು ಕಟ್ಟಡಗಳು ರಸ್ತೆ ಅತಿಕ್ರಮಿಸಿಕೊಂಡಿವೆ ಎಂದು ಸಮಿತಿಯ ಅಂದಾಜಿಸಿಕೊಂಡಿದೆ.

ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿ :

ಹತ್ತು-ಹದಿನೈದು ವರ್ಷಗಳ ಹಿಂದೆ ಈ ರಸ್ತೆಯ ಅಗಲೀಕರಣ ಕೈಗೊಳ್ಳುವುದು ಪ್ರಮುಖವಾಗಿತ್ತು, ಆದರೆ ಈಗ ಸರಕಾರದ ಕಚೇರಿಗಳು ಮಿನಿ ವಿಧಾನಸೌಧದೊಂದಿಗೆ ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಗೊಂಡು, ಈ ರಸ್ತೆ ತನ್ನ ಮಹತ್ವವನ್ನು ಸಡಿಲಗೊಳಿಸಿತು. ಹಗಲು ಸಮಯದಲ್ಲಿಯೂ ವಾಹನ ದಟ್ಟಣೆ ಕಡಿಮೆ ಕಂಡುಬರುತ್ತಿರುವುದು, ಸಾರ್ವಜನಿಕ ವಲಯದಲ್ಲಿ ಚರ್ಚೆ ಜೋರಾಗಿದೆ.

ಶ್ರೀರಾಮ ಮಾರುಕಟ್ಟೆಯಿಂದ ಮಹಾವೀರ್ ಚೌಕ ಮತ್ತು ತಹಶೀಲ್ದಾರ್ ಕಚೇರಿಯವರೆಗೆ ಮಾತ್ರ ಈ ರಸ್ತೆಯಲ್ಲಿ ಸ್ವಲ್ಪ ದಟ್ಟಣೆ ಕಂಡುಬರುತ್ತದೆ. ಇನ್ನಾರ್ಧ ಭಾಗದಲ್ಲಿ ಸನ್ಮತಿ ಕ್ರಾಸ್ನಿಂದ ದರ್ಗಾಚೌಕ್ ವರೆಗಿನ ರಸ್ತೆಯಲ್ಲಿ ಜನರ ಒಡಾಟ ಮತ್ತು ವಾಹನಗಳ ಚಲನೆ ತೀರಾ ಕಂಡಿಯಾಗಿದೆ. ಇಲ್ಲಿ ಸರ್ಕಾರದ ಹಣ ಖರ್ಚು ಮಾಡಿ ಸಾರ್ವಜನಿಕರ ಆಸ್ತಿಗಳಿಗೆ ನಷ್ಟದ ಮಧ್ಯ ಅಗಲೀಕರಣ ಬೇಕಾ ಬೇಡವೂ ಎಂಬ ಚರ್ಚೆ ಜೋರಾಗಿದೆ.

ಮಾರುಕಟ್ಟೆ, ಬಸ್ ನಿಲ್ದಾಣ ಸ್ಥಳಾಂತರದ ಪರಿಣಾಮ :

ಹಳೆಯ ಪಟ್ಟಣದ ಹೃದಯ ಭಾಗದಲ್ಲಿರುವ ಮಾರುಕಟ್ಟೆಯನ್ನು ಎಪಿಎಂಸಿ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಗಳು ಇನ್ನೂ ಚರ್ಚೆಯಲ್ಲಿವೆ. ಇದೇ ರೀತಿಯಾಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಮುನ್ಸೂಚನೆ ನೀಡಲಾಗಿದೆ. ಈ ಕ್ರಮಗಳು ಹಳೆ ನಗರದಲ್ಲಿ ಈ ರಸ್ತೆಯ ಅಗಲೀಕರಣದ ಅವಶ್ಯಕತೆಯನ್ನು ಈಗ ಬೇಕೇ ಎಂಬವುದು ಮತ್ತೆ ಪ್ರಶ್ನಿಸುತ್ತದೆ.

ಪರಿಹಾರ ಕೊಟ್ಟರೆ ಅನುಕೂಲ:

ಬಹುತೇಕ ರಸ್ತೆ ಬದಿಯ ಆಸ್ತಿಗೆ ಸಂಬoಧಿತರಿಗೆ ಪರಿಹಾರ ಕೊಟ್ಟು ತೆರುವುಗೊಳಿಸಲು ತಕಾರರಿಲ್ಲ. ಆಸ್ತಿ ಕಟ್ಟಡ ಕಳೆದುಕೊಳ್ಳುತ್ತಿದ್ದೇವೆ. ಪರಿಹಾರ ಕೊಟ್ಟರೆ ಅನುಕೂಲವಾಗುತ್ತದೆ ಎಂದು ರಸ್ತೆಯ ಬದಿಯ ಆಸ್ತಿಯ ಸಂಬಂಧಿತರು ಬೇಡಿಕೆಯಾಗಿದೆ. ಆದರೇ ಪರಿಹಾರ ನೀಡಲು ಸರ್ಕಾರ ಮತ್ತು ಪುರಸಭೆ ನಿಮಾವಳಿಯಲಿದೆ? ಅಷ್ಟೋಂದು ಪರಿಹಾರ ನೀಡುವಷ್ಟು ಸಸಕ್ತವಾಗಿದೆಯೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.

50 ಅಡಿ ಬದಲು 40ಕ್ಕೆ ಸಮಾಧಾನ :

ಆಳಂದ ಮುಖ್ಯ ರಸ್ತೆಯೂ ಒಂದು ಕಾಲಕ್ಕೆ ವ್ಯಾಪಾರ ವೈಹಿವಾಟಿನ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿ ಮಾರ್ಪಟ್ಟಿತ್ತಾದರು, ಕಳೆದೆರಡು ವರ್ಷಗಳಿಂದ ಇಲ್ಲಿನ ಸರಕಾರಿ ಕಚೇರಿಗಳು ಪಟ್ಟಣದ ಹೊರವಲಯದ ಐದಾರು ಕಿ.ಮೀ. ದೂರಕ್ಕೆ ನಿರ್ಮಿಸಲಾದ ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಬಳಿಕ ಅನೇಕ ಸರ್ಕಾರಿ ನೌಕರರ, ವ್ಯಾಪಾರಿಗಳು, ಶಿಕ್ಷಣ ನೌಕರಿಗಾಗಿ ನೂರಾರು ಮನೆಗಳು ಜಿಲ್ಲಾ ಕೇಂದ್ರ ಕಲಬುರಗಿಗೆ ಸ್ಥಳಾಂತಗೊoಡಿದ್ದು, ಇದರಿಂದ ಕಿರಾಣಿ, ಬಟ್ಟೆ, ಆಸ್ಪತ್ರೆ, ಇಸ್ತ್ರಿ, ಹಾಲು ಹಣ್ಣಿನ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದ್ದು ಹಾಗೂ ಪಟ್ಟಣದಲ್ಲಿ ಸಾಕಷ್ಟು ಬಾಡಿಗೆ ಮನೆಗಳು ಖಾಲಿಯಾಗಿದ್ದು ಹೀಗೆ ಹಲವು ವಿಧಗಳಲ್ಲಿ ಆಳಂದ ಪಟ್ಟಣಕ್ಕೆ ಆರ್ಥಿಕ ಹೊಡೆತಬಿದ್ದುಕೊಂಡಿದೆ.

ಸದ್ಯ 50 ಅಡಿ ರಸ್ತೆ ಅಗಲದ ಬದಲು 40 ಅಡಿಗೆ ಅಗಲೀಕರಣದ ನಿರ್ಧಾರ ಸರಿಯಾದ ಕ್ರಮವಾಗಿದೆ ಎಂದು ಕೊಂಚ ಸಮಾಧಾನವು ಜನ ತಂದುಕೊಳ್ಳತೊಡಗಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ, ಈ ರಸ್ತೆಯ ಅಗಲೀಕರಣದಲ್ಲಿ ಹೂಡಿಕೆ ಮಾಡುವುದು ಲಾಭದಾಯಕವೇ ಅಥವಾ ಅನಾವಶ್ಯಕವೆ ಎಂಬುದು ಪುನಃ ಮೌಲ್ಯಮಾಪನಗೊಳ್ಳಬೇಕಾಗಿದೆ. ಅಗಲೀಕರಣಕ್ಕೆ ಸಂಬoಧಿಸಿದoತೆ ಸಾರ್ವಜನಿಕ ಅಭಿಪ್ರಾಯ, ಸ್ಥಳೀಯ ಶಾಸಕರ ಹಾಗೂ ಮಾಜಿ ಶಾಸಕರ ಮಾರ್ಗದರ್ಶನ ಮತ್ತು ಪುರಸಭೆ ಅಧಿಕಾರಿಗಳ ನಿರ್ಧಾರ ಅತ್ಯಂತ ಮುಖ್ಯ.

ಈ ಯೋಜನೆ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗುವುದೋ ಅಥವಾ ವ್ಯಾಪ್ತಿಯನ್ನು ಕಡಿಮೆಗೊಳಿಸುವುದೋ ಎಂಬ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬುದು ಈಗ ಕೇಳಿಬರಲಾರಂಬಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X