ಕಾಳಗಿ | ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ : ವಿಜಯಕುಮಾರ ಪಾಟೀಲ ತೆಗಲತಿಪ್ಪಿ
ಕಸಾಪದಿಂದ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ

ಕಾಳಗಿ : ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಸಮಾಜಕ್ಕೆ ಯೋಗ್ಯ ನಾಗರಿಕರನ್ನು ರೂಪಿಸುವಲ್ಲಿ ಅವರ ಪಾತ್ರ ಅಮೂಲ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೆಗಲತಿಪ್ಪಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರಿಗೆ ಯೋಗ್ಯ ಗೌರವ ನೀಡುವುದು ಕೇವಲ ಶಿಷ್ಟಾಚಾರವಲ್ಲ, ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಇದೇ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಶಿಕ್ಷಕರನ್ನು ಗುರುತಿಸಿ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ ಎಂದು ಹೇಳಿದರು.
ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ್ ಜಗದೇವ ಗುತ್ತೇದಾರ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ‘ಆಚಾರ್ಯ ದೇವೋ ಭವ’ ಎಂದು ಶಿಕ್ಷಕರಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಕರ ಶ್ರಮವನ್ನು ಗೌರವಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಕಲಮೂಡ ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಹೇಳಿದರು.
ಸುಲೇಪೇಠ ಪೂಜ್ಯ ಪ್ರಭುದೇವರು ಆಶಿರ್ವಚನ ನೀಡಿದರು. ಸಂಶೋಧಕ ಸಾಹಿತಿ ಗುಂಡೇರಾವ ಮುಡಬಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಕುಮಾರ್ ಶಾಸ್ತ್ರಿ, ಪಾಚಾರ್ಯ ಸುಭಾಷ್ ಶಿಲವಂತ, ಕಸಾಪ ತಾಲೂಕಾಧ್ಯಕ್ಷ ಸಂತೋಷ ಕುಡಳ್ಳಿ ಮಾತನಾಡಿದರು.
ಇದೇ ವೇಳೆ ಶಿಕ್ಷಕರಾದ ಪವಿತ್ರಾ ಬಿರೆದಾರ, ಬಸವರಾಜ ಚೇಂಗಟಿ, ಜೈಶ್ರೀ ಮಿಟ್ಟಿಮನಿ, ಶಿವಲಿಂಗಪ್ಪ ಯಳಸಂಗಿ, ಶ್ರೀದೆವಿ ಕಾಪ್ಸೆ, ಚಂದ್ರಕಾಂತ ಮಹಾಗಾಂವ, ಹೇಮಾವತಿ ನರೂಣಿ, ರೇವಣಸಿದ್ದಯ್ಯ ಸಪ್ಪಾಯಗೋಳ, ವಿಜಯಲಕ್ಷ್ಮಿ ಮಂಕಾಣಿ, ರಾಧಾಕೃಷ್ಣ ಮುಚ್ಚಟ್ಟಿ, ಅಂಬವ್ವ ದೊಡ್ಡಮನಿ, ಗಿರಿಜಾ ಮಠಪತಿ, ಅಮೃತ ನಾಟೀಕಾರ, ಸೈಯದ ಸಯೀದಾ ಬೇಗಂ, ರತನಸಿಂಗ್ ಚಿನ್ನಾರಾಠೋಡ, ಶರಣೇಶ್ವರಿ ಪಗಾದಿ, ಚಂದ್ರಕಾಂತ ಗೊಣಗಿಮಠ, ಮಹಾದೇವಿ ಪಾಟೀಲ ಅವರಿಗೆ ಕಸಾಪದಿಂದ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ಬಸಂತರಾಯ ಪೆದ್ದಿ, ಮಹ್ಮದ ಯೂಸುಫ್ ಖಾನ್, ಪ್ರಮಿಳಾದೇವಿ ಶೇರಿಕಾರ, ಸೇವಂತಾ ಚವ್ಹಾಣ, ಮಹೇಶ ಬಡಿಗೇರ, ಸತೀಶ್ಚಂದ್ರ ಸುಲೇಪೇಠ, ರಾಜೇಂದ್ರಬಾಬು ಹಿರಾಪೂರ, ಸಂತೋಷ ನರನಾಳ, ಸುಲೋಚನಾ ರಾಠೋಡ, ನಾಗಮ್ಮ ಹಿರೇಮಠ, ಮೀರಾಬಾಯಿ ಗಣುರೆ ಸೇರಿದಂತೆ ಅನೇಕರು ಇದ್ದರು.






