ಕೊಪ್ಪಳ | ನುಲಿಯ ಚಂದಯ್ಯ ಜಯಂತಿ ಆಚರಣೆ

ಕನಕಗಿರಿ: ಪಟ್ಟಣದ ಕೊರವರ/ ಭಜಂತ್ರಿ ಸಮಾಜದ ಆಶ್ರಯದಲ್ಲಿ ನುಲಿಯ ಚಂದಯ್ಯ ಅವರ ಜಯಂತಿ ಶುಕ್ರವಾರ ಆಚರಿಸಲಾಯಿತು.
ನುಲಿಯ ಚಂದಯ್ಯ ಅವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಚಿದಾನಂದ ಭಜಂತ್ರಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅವರು ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ನೀಡಲು ಸಾಧ್ಯವಿದೆ ಸಮಾಜದವರು ವೃತ್ತಿ ಜೀವನದ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ತಿಳಿಸಿದರು.
ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂದು ತಿಳಿಸಿದರು.
ಭಜಂತ್ರಿ ಸಮಾಜದವರು ಶ್ರಮ ಜೀವಿಗಳಾಗಿದ್ದು ಕುಲ ಕಸುಬುಗಳ ಜತೆಗೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಸರ್ಕಾರ ಸಾಲ ಸೌಲಭ್ಯಗಳನ್ನು ಒದಗಿಸಬೇಕೆಂದು ಹೇಳಿದರು.
ಈ ವೇಳೆ ಪ್ರಮುಖರಾದ ಶೇಠ್ ಯಮನಪ್ಪ ಭಜಂತ್ರಿ, ಈರಪ್ಪ ಖ್ಯಾಡೆದ, ಹನುಮಂತಪ್ಪ ಮಾಳಗಿಮನೆ, ಹನುಮಂತಪ್ಪ ಲಸ್ಕರ್, ಲಕ್ಷ್ಮಣ ಭಜಂತ್ರಿ, ವೀರೇಶ ಭಜಂತ್ರಿ, ತಿಮ್ಮಣ್ಣ ಹಸ್ತಮನೆ, ಹುಲಗಪ್ಪ ಖ್ಯಾಡೆದ, ಕೆ. ಹುಲಗಪ್ಪ, ಹುಲಗಪ್ಪ ಮೀನಗಾರ ಇತರರು ಇದ್ದರು.




