ಕಲಬುರಗಿ: ಹಿರಿಯ ಸಾಹಿತಿ ಡಾ.ಲಕ್ಷ್ಮಣ ಕೌಂಟೆ ರಚಿತದ ʼನೀಲ ಗಂಗಾʼ ಪುಸ್ತಕ ಅವಲೋಕನ

ಕಲಬುರಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಹಿರಿಯ ಸಾಹಿತಿ ಡಾ.ಲಕ್ಷ್ಮಣ ಕೌಂಟೆ ರಚಿಸಿದ "ನೀಲಗಂಗಾ" ಎಂಬ ಕಾದಂಬರಿ ಪುಸ್ತಕದ ಪರಿಚಯ ಕಾರ್ಯಕ್ರಮ ಶನಿವಾರ ಇಲ್ಲಿನ ಸಂಘದ ಕಚೇರಿಯಲ್ಲಿ ನಡೆಯಿತು.
ನಗರದ ನೂತನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಮಲ್ಲಿನಾಥ ತಳವಾರ ಅವರು ಪುಸ್ತಕದ ಅವಲೋಕನ ಮಾಡುತ್ತ' 12ನೇ ಶತಮಾನದ ಶರಣರ ಜೀವನ ಆಧಾರಿತ ಕುರಿತು ಅನೇಕರು ಕಾದಂಬರಿಗಳು ರಚಿಸಿದ್ದಾರೆ, ಆದರೆ ಡಾ.ಲಕ್ಷ್ಮಣ ಕೌಂಟೆಯವರ ನೀಲಗಂಗಾ ಕಾದಂಬರಿಯು 12ನೇ ಶತಮಾನ ಮತ್ತು 21ನೇ ಶತಮಾನದ ವಿಚಾರ ಮತ್ತು ಆಚಾರಗಳು ಮುಖಾಮುಖಿಯಾಗಿವೆ. ಅಂದಿನ ಮಡಿವಂತಿಕೆ ಮತ್ತು ಮೌಢ್ಯದ ಕುರಿತು ಶರಣರ ಧೋರಣೆ ಇಂದಿಗೂ ಉಳಿದುಕೊಂಡಿವೆ. ನೀಲಾಂಬಿಕೆ ಗಂಗಾಂಬಿಕೆಯರ ಗೆಳತನ ಮತ್ತು ತ್ಯಾಗವು ಪ್ರಸ್ತುತವಾಗಿವೆ ಮತ್ತು ಆದರ್ಶವಾಗಿವೆ ಎಂದು ಹೇಳಿದರು.ಅವರು ಮುಂದುವರಿದು ಈ ಕೃತಿಯು ಮೌಲಿಕವಾಗಿದೆ,ಭಾಷೆ,ವಸ್ತು ಮತ್ತು ಶೈಲಿ ಕಾದಂಬರಿ ಹೆಣೆಯುವ ತಂತ್ರ ಚೆನ್ನಾಗಿ ಬಳಸಿಕೊಂಡಿದ್ದಾರೆ' ಎಂದರು.
ಕೃತಿಯ ಲೇಖಕರಾದ ಡಾ.ಲಕ್ಷ್ಮಣ ಕೌಂಟೆಯವರು ಪುಸ್ತಕದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಡಾ.ಗವಿಸಿದ್ದಪ್ಪ ಪಾಟೀಲ್ ಈ ಕಾದಂಬರಿ ಕುರಿತು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಅಪ್ಪಾರಾವ ಅಕ್ಕೋಣಿಯವರು ಅಧ್ಯಕ್ಷೀಯ ಮಾತನಾಡಿದರು. ವೇದಿಕೆ ಮೇಲೆ ಡಾ.ಸ್ವಾಮಿರಾವ ಕುಲಕರ್ಣಿ ಉಪಸ್ಥಿತರಿದ್ದರು. ಪ್ರೊ.ಶೋಭದೇವಿ ಚೆಕ್ಕಿ ಪ್ರಾರ್ಥನೆ ಗೀತೆ ಹಾಡಿದರು, ಡಾ.ವಿಜಯಕುಮಾರ ಪರುತೆಯವರು ಕಾರ್ಯಕ್ರಮದ ಸಂಚಾಲನೆ ಮಾಡಿದರು. ಬಿ.ಎಚ್.ನಿರಗುಡಿ, ವಿಜಯಕುಮಾರ ರೋಣದ್, ವೀರಭದ್ರಪ್ಪ ಗುರಮಿಠಕಲ್, ಸಿದ್ಧರಾಮ ಸರಸಂಬಿ, ಎಸ್.ವಿ.ಹತ್ತಿ,ಡಾ.ಜಯದೇವಿ ಗಾಯಕವಾಡ್, ಡಾ.ಚಿ.ಸಿ.ನಿಂಗಣ್ಣ,ಎಸ್.ಎಸ್.ಪಾಟೀಲ್, ಡಾ.ರಾಜಕುಮಾರ ಮಾಳಗೆ, ಡಾ.ಚಿದಾನಂದ ಕುಡ್ಡನ್, ಪ್ರೊ.ಲಿಂಗಪ್ಪ ಗೋನಾಲ ಮತ್ತು ಡಾ.ಸಿದ್ಧರಾಮಯ್ಯ ಮಠ ಇತರರು ಉಪಸ್ಥಿತರಿದ್ದರು.







