Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ರಾಜಕಾರಣ ಮಾಡಬೇಕಾದವರು ಜನರು,...

ರಾಜಕಾರಣ ಮಾಡಬೇಕಾದವರು ಜನರು, ಜನಪ್ರತಿನಿಧಿಗಳಲ್ಲ: ನಟ ಪ್ರಕಾಶ್ ರಾಜ್

ವಾರ್ತಾಭಾರತಿವಾರ್ತಾಭಾರತಿ20 Dec 2025 2:11 PM IST
share
ರಾಜಕಾರಣ ಮಾಡಬೇಕಾದವರು ಜನರು, ಜನಪ್ರತಿನಿಧಿಗಳಲ್ಲ: ನಟ ಪ್ರಕಾಶ್ ರಾಜ್
'ವಾರ್ತಾಭಾರತಿ'ಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ

ಕಲಬುರಗಿ : ಜನರು ರಾಜಕಾರಣ ಮಾಡಬೇಕಾದವರು. ಗೆದ್ದವರು ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಗೆದ್ದ ಮೇಲೆ ನಮ್ಮ ತೆರಿಗೆ, ನಮ್ಮ ದೇಶ. ಸೇವೆಯಷ್ಟೇ ಜನಪ್ರತಿನಿಗಳ ಕೆಲಸ. ಐದು ವರ್ಷಕ್ಕೊಮ್ಮೆ ಮತ ಕೇಳಲು ಬರುವವರು ಜನಪ್ರತಿನಿಧಿಗಳೇ ಹೊರತು, ಜನರಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.

ʼವಾರ್ತಾಭಾರತಿʼ ಕಲ್ಯಾಣ ಕರ್ನಾಟಕ ಆವೃತ್ತಿಯ ಲೋಕಾರ್ಪಣೆ ಸಮಾರಂಭದಲ್ಲಿ, ಪತ್ರಿಕೆಯ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇದು ನಮ್ಮ ದೇಶ. ಇಲ್ಲಿ ನಿರಂತರ. ಪ್ರಜೆಗಳು ರಾಜಕಾರಣ ಮಾಡಬೇಕು. ರಾಜಕಾರಣಿಗಳು ಕೆಲಸ ಮಾಡಬೇಕು. ಅದನ್ನು ಯಾವತ್ತೂ ಬದಲಾಯಿಸಬೇಡಿ. ರಾಜಕಾರಣ ಜನರೇ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪಿ.ಲಂಕೇಶ್ ಅವರು ಹೇಳುತ್ತಿದ್ದ ಮಾತುಗಳನ್ನು ಉಲ್ಲೇಖಿಸಿದ ಅವರು, ಪತ್ರಿಕೆ - ಮಾಧ್ಯಮ– ಕಲಾವಿದ – ಜನ ನಿರಂತವಾದ ವಿರೋಧ ಪಕ್ಷವಾಗಬೇಕು. ಆಳುವ ಪಕ್ಷದ ಕೃಪಕಟಾಕ್ಷವಿಲ್ಲದೇ ಜನರ ದನಿಯಾಗಿರಬೇಕು. ಆಗ ಮಾತ್ರ ಧೈರ್ಯದಿಂದ ಕೆಲಸ ಮಾಡಲು ಸಾಧ್ಯ. ಇವತ್ತಿನ ಜನರಿಗೆ ರಾಜಕಾರಣ ಮಾಡಬೇಕಾದವರು ಯಾರು ಎಂದು ಹೇಳಬೇಕು. ನಮ್ಮ ರಾಜ್ಯವು ಬೆಂಗಳೂರು ಕೇಂದ್ರಿತ ದಕ್ಷಿಣ ಕರ್ನಾಟಕವಾಗಿದೆ. ಕಲ್ಯಾಣ ಕರ್ನಾಟಕಕ್ಕೆ ವಾರ್ತಾಭಾರತಿ ಕಾಲಿಟ್ಟಿದೆ. ಆ ಮೂಲಕ ಈ ಭಾಗದ ಅಭಿವೃದ್ಧಿಯಾಗಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆ ಪತ್ರಿಕೆಯು ಗಟ್ಟಿದನಿಯಲ್ಲಿ ನಿರಂತರ ವರದಿ ಮಾಡಬೇಕು ಎಂದು ಅವರು ಹೇಳಿದರು.

ಪ್ರವಾಹದಲ್ಲಿ ಯಾರು ಬೇಕಾದರೂ ಕೊಚ್ಚಿಹೋಗಬಹುದು. ಸತ್ತ ಮೀನುಗಳೂ ಕೊಚ್ಚಿ ಹೋಗುತ್ತದೆ. ಆದರೆ ಪ್ರವಾಹದ ಮುಂದೆ ಈಜಲು ಜೀವವಿರಬೇಕು. ಜೀವ ಇರುವುದು ಸ್ವತಂತ್ರ ಮಾಧ್ಯಮಗಳಿಗೆ. ರವೀಶ್ ಕುಮಾರ್, The Wire, ವಾರ್ತಾಭಾರತಿಯಂತಹ ಮಾಧ್ಯಮಗಳಿಗೆ ನನ್ನಂತಹವರಿಗೆ ಪ್ರವಾಹದಲ್ಲಿ ಈಜುವ ಜೀವವಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಸರ್ವಾಧಿಕಾರಕ್ಕೆ ನಮ್ಮೆಲ್ಲರ ಭಯವೇ ಬಲ. ನಾವು ಹೆದರದಿದ್ದರೆ ಅವರು ಹೆದರುತ್ತಾರೆ. ಪೊಲೀಸ್, ಚುನಾವಣಾ ಆಯೋಗ, ನ್ಯಾಯಾಲಯ, ಪತ್ರಿಕೆಗಳನ್ನು ಕೊಂಡು ಅವರ ಕತ್ತು ಹಿಸುಕುವುದು, ಕೈ ತಿರುಚುವುದು, ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುವುದು ಅವರ ಕೆಲಸ. ಉಮರ್ ಖಾಲಿದ್ ಗೆ ಜಾಮೀನು ಸಿಗಲಿಲ್ಲ. ದೇಶಕ್ಕೆ, ಜನರಿಗೆ ನ್ಯಾಯಾಲಯಗಳಿಗೆ ಮನಸಾಕ್ಷಿಯ ಕೊರತೆ ಕಾಣುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸ್ವಾತಂತ್ಯ ಬಂದ ನಂತರ ಮೊದಲು ಪೊಲೀಸ್ ವ್ಯವಸ್ಥೆಯ ಮೇಲೆ ಭಯವಿತ್ತು. ಯಾರೇ ಅನ್ಯಾಯ ಎಸಗಿದರೂ ಕೋರ್ಟ್ ನಲ್ಲಿ ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದೆವು. ನ್ಯಾಯಾಂಗದ ಬಗ್ಗೆ ಒಂದು ನಂಬಿಕೆ ಇತ್ತು. ಇವತ್ತು ಆ ನಂಬಿಕೆ ಇಲ್ಲ. ಇದೆಲ್ಲದರ ಹಿಂದೆ ಬಿಜೆಪಿ ಅನ್ನುವ ಮಹಾಪ್ರಭು ನರೇಂದ್ರ ಮೋದಿ ಇದ್ದಾರೆ. ಭಾರತ ದೇಶ ಒಂದು ಕೊಳ ಆದರೆ, ಅದನ್ನು ಕಾಡುತ್ತಿರುವುದು ಅದರೊಳಗೆ ಇರುವುದು ಒಬ್ಬ ಬ್ರಹ್ಮ ರಾಕ್ಷಸ. ಕೊಳದ ಮೇಲೆ ಒಂದು ಕಮಲ ಅರಳಿದೆ. ಅದು ಬಿಜೆಪಿ. ನಾವು ಈ ಕಮಲದ ಜೊತೆ ಜಗಳವಾಡುತ್ತಿದ್ದೇವೆ. ಆದರೆ ಜಗಳ ಮಾಡಬೇಕಾಗಿರುವುದು ಕಮಲದ ಜೊತೆ ಅಲ್ಲ. ಅದರ ಬೇರಿನ ಶಕ್ತಿಯ ಆಳದಲ್ಲಿರುವ ಆರೆಸ್ಸೆಸ್ ಜೊತೆ ಎಂದು ಪ್ರಕಾಶ್ ರಾಜ್ ಹೇಳಿದರು.

ಪ್ರಪಂಚದ ಎಲ್ಲಾ ಸರ್ವಾಧಿಕಾರಿಗಳು, ಅದು ಹಿಟ್ಲರ್, ಮುಸ್ಸೋಲಿನಿ ಯಾರೇ ಇರಬಹುದು. ಅವರೆಲ್ಲಾ ಒಂದು ರಾಜಕೀಯ ಪಕ್ಷವಾಗಿದ್ದರು. ಜನರು ಅವರನ್ನು ಸೋಲಿಸಬಹುದಿತ್ತು. ಇಲ್ಲಿ ಆರೆಸ್ಸೆಸ್ ರಾಜಕೀಯ ಪಕ್ಷವಲ್ಲ. ಬಿಜೆಪಿಯನ್ನು ಸೋಲಿಸಿದರೆ ಮುಗಿಯುವುದಿಲ್ಲ. ಬೇರು ಸಹಿತ ಕೀಳಬೇಕು. ದೊಣ್ಣೆ ಹಿಡಿದುಕೊಂಡು ಓಡಾಡುತ್ತಿದ್ದಾಲ್ಲ. ಅವರ ಬೆಳವಣಿಗೆ ಚಡ್ಡಿಯಿಂದ ಪ್ಯಾಂಟ್ ಅಷ್ಟೇ. ಬೇರೇನೂ ಬೆಳವಣಿಗೆ ಇಲ್ಲ. ಈ ರೀತಿಯ ಆತಂಕಗಳ ಬಗ್ಗೆ ನಾವು ಯೋಚನೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಹಿಂದಿ ಹೇರಿಕೆ, ಕ್ಷೇತ್ರಗಳ ಪುನರ್ವಿಂಗಡನೆ, ಚುನಾವಣೆಗಳ ಹೆಸರಿನಲ್ಲಿ ಭಾರತ ದೇಶದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಈ ದಬ್ಬಾಳಿಕೆ ನಡೆಸುತ್ತಿರುವ ರಾಕ್ಷಸ ಯಾರು? ಆ ರಾಕ್ಷಸನ ಬಗ್ಗೆ ಹೇಳುತ್ತಿರುವ ವಾರ್ತಾಭಾರತಿಯಂತಹ ಪತ್ರಿಕೆ ಯಾವುದು ಎಂದು ನಾವು ಅರಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X