Kalaburagi| ಶರಣರ ವೈಚಾರಿಕತೆ ಹೊಸ ಪೀಳಿಗೆಗೆ ದಾರಿದೀಪ: ಡಾ.ಕೆ.ಎಸ್. ನಾಯಕ

ಕಲಬುರಗಿ: ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಹಾಗೂ ಶರಣರ ವೈಚಾರಿಕತೆ ಕೇವಲ ಆ ಕಾಲಕ್ಕೆ ಸೀಮಿತವಾಗಿರದೆ, ಇಂದಿನ ಹೊಸ ಪೀಳಿಗೆಗೂ ದಾರಿದೀಪವಾಗಿದೆ. ಯಾವುದೇ ಕೆಲಸ ಕೀಳಲ್ಲ. ಪ್ರತಿಯೊಬ್ಬರೂ ಶ್ರಮಪಟ್ಟು ದುಡಿಯಬೇಕು ಎಂಬುದು ಶರಣರ ತತ್ವವಾಗಿದೆ ಎಂದು ಹಿರಿಯ ಸಾಹಿತಿ ಡಾ.ಕೆ.ಎಸ್. ನಾಯಕ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ 13ನೇ ವರ್ಷಾಚರಣೆ ಅಂಗವಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ವಿಶ್ವ ವೈಚಾರಿಕ ದರ್ಶನ’ದಂತಿರುವ ಶರಣತತ್ವ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬಸವಾದಿ ಶರಣರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಎಲ್ಲ ಎಲ್ಲೆಗಳನ್ನು ಮೀರಿದವರು. ಸಮಾಜದ ಪರಿವರ್ತನೆಗೆ ಅವರ ವಚನಗಳು ದಿವ್ಯ ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ಇದನ್ನು ಅರಿಯಬೇಕಾದರೆ ಎಲ್ಲ ಶರಣರ ವಚನಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ದಾರಿದೀಪವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಮೇಯರ್ ವರ್ಷಾ ರಾಜೀವ ಜಾನೆ, ಸಾಹಿತಿಗಳಾದ ಡಾ. ಜಗನ್ನಾಥ ತರನಳ್ಳಿ, ಮುಡುಬಿ ಗುಂಡೇರಾವ, ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ ಹಾಗೂ ಪೂಜಾ ಬಂಕಲಗಿ ಮಾತನಾಡಿದರು.
ಜಿಲ್ಲಾ ಕಸಾಪದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಪರಮೇಶ್ವರ ಶಟಕಾರ, ಮಹೇಶ ಗುತ್ತೇದಾರ, ಎಸ್.ಕೆ. ಬಿರಾದಾರ, ವೀರಭದ್ರಪ್ಪ ಗುರುಮಿಠಕಲ್, ವೀರೇಂದ್ರ ಕೊಲ್ಲೂರ ಹಾಗೂ ರಾಜೇಂದ್ರ ಮಾಡಬೂಳ ವೇದಿಕೆಯಲ್ಲಿದ್ದರು.
ಶರಣ ದಂಪತಿಗಳಾದ ಕಾವೇರಿ–ಡಾ. ಶರಣಬಸಪ್ಪ ಕಾರಭಾರಿ, ಭಾಗ್ಯಶ್ರೀ–ಹನುಮಗೌಡ, ಜ್ಯೋತಿ ಲಕ್ಷ್ಮೀ–ಸಂಜುಶೆಟ್ಟಿ, ಗಿರಿಜಾ–ರುದ್ರಗೌಡ ಪಾಟೀಲ, ಸಂಗೀತಾ–ಚಂದ್ರಶೆಟ್ಟಿ ಕಾಡಾದಿ, ಸುಷ್ಮಾವತಿ–ಡಾ. ಶರಣು ಹೊನ್ನಗೆಜ್ಜೆ, ನೀಲಮ್ಮ–ಸುನೀಲ ವಾಡಿ ಹಾಗೂ ಸಂಗಮ್ಮ–ರೇವಣಸಿದ್ದಯ್ಯ ಮಠ ಅವರನ್ನು ‘ದಂಪತಿ ದರ್ಪಣ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು.
ತಮ್ಮ ಕಾಯಕದ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹೇಶಕುಮಾರ ಭಾವಿಕಟ್ಟಿ, ಜಗನ್ನಾಥ ಬಂಡಿ, ಜೈದೀಪ್ ಅಡವಿರಾಜ ಕೊಡ್ಲಿ, ಗುರುಬಸಪ್ಪ ಪಾಟೀಲ, ಪಂಡಿತ ಗೋವಿನ ಸರಸಂಬಾ, ಸಿದ್ಧಲಿಂಗೇಶ್ವರ ಕೊನೆಕ್, ಶಿವರಾಜ ಮಾಲಿಪಾಟೀಲ ತೇಗಲತಿಪ್ಪಿ, ಶಾಂತಾಬಾಯಿ ಹಿರೇಮಠ, ಡಾ. ಮಾಲಿನಿ ಡೇರೆದ, ಭಾಗ್ಯಶ್ರೀ ಪಾಟೀಲ ಕಲ್ಲಹಂಗರಗಾ, ಮಲ್ಲಿಕಾರ್ಜುನ ನೆಲ್ಲೂರ, ಎ.ಆರ್. ದತ್ತಾ, ಅಮರೇಶ್ವರ ನೂಲಾ, ನಾಗೇಂದ್ರಪ್ಪ ದಂಡೋತಿಕರ್ ಹಾಗೂ ರಾಜೇಂದ್ರ ಮಾನೇ ಅವರನ್ನು ‘ಕಾಯಕ ರತ್ನ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು.






