Wadi | ಸ್ವಾತಂತ್ರ್ಯ ಹಬ್ಬ ಸಂಭ್ರಮದ ಜೊತೆಗೆ ತ್ಯಾಗ ಬಲಿದಾನ ಸ್ಮರಿಸುವಂತಾಗಲಿ : ಶಂಕರ ಡಾಂಗೆ

ವಾಡಿ: ಸ್ವಾತಂತ್ರ್ಯ ಸಂಭ್ರಮವು ಕೇವಲ ಹಬ್ಬದ ಆಚರಣೆಗೆ ಸೀಮಿತವಾಗದೆ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಲಕ್ಷಾಂತರ ವೀರ ಸೇನಾನಿಗಳನ್ನು ಸ್ಮರಿಸುವ ದಿನವಾಗಬೇಕು ಎಂದು ಅಕ್ಷರ ದಾಸೋಹ ತಾಲ್ಲೂಕು ನಿರ್ದೇಶಕ ಶಂಕರ ಡಾಂಗೆ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮೃತ ಜ್ಞಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿ, ದೇಶದ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ, ಇನ್ನೂ ಇರುವ ಕೊರತೆಗಳನ್ನು ಅರಿತುಕೊಳ್ಳಬೇಕು. ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ‘ಎಲ್ಲಕ್ಕಿಂತ ದೇಶ ಮೊದಲು’ ಎಂಬ ಸಂಕಲ್ಪದೊಂದಿಗೆ ದೇಶದ ಪ್ರಗತಿಗಾಗಿ ಶ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಸ್ವಾತಂತ್ರ್ಯದ ನಿಜವಾದ ಅರ್ಥ ಸಾಕಾರಗೊಳ್ಳುತ್ತದೆ ಎಂದರು.
ಚಿತ್ತಾಪುರ ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರಯ್ಯಸ್ವಾಮಿ ಮದ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ದೇವೇಂದ್ರ ಕರದಳ್ಳಿ, ಮುಖಂಡರಾದ ಸಾಲೋಮನ್ ರಾಜಣ್ಣ, ಚಂದ್ರಸೇನ ಮೇನಗಾರ, ಸಿಆರ್ಪಿ ಸುರ್ಯಕಾಂತ ದಿಗ್ಗಾವ. ವಿಜಯ ಸಿಂಗೆ, ದೇವಿಂದ್ರ ನಿಂಬರ್ಗಾ, ಮಜರ ಹುಸೇನ್, ಮುಕ್ರುಮ್ ಪಟೇಲ, ಪದ್ಮಾವತಿ ಕೋಮಟೆ, ಸುನಿತಾ ಸಾಲೋಮನ, ರಮೇಶ ಬಡಿಗೇರ, ಬಸವಂತ ಅಹಿರಕರ, ಈರಣ್ಣ, ಸುರ್ಯಕಾಂತ ರದ್ದೆವಾಡಿ, ದಸರಥ ಗಾಯಕವಾಡ, ಮಲ್ಲಿಕಾರ್ಜುನ, ವಿಶ್ವನಾಥ ಪೋದ್ದಾರ, ಬಸವರಾಜ ಹೋಸಮನಿ, ಶಿಕ್ಷಕರಾದ ಅಪ್ಪರಾವ ಬಿಲಗುಂದಿ, ಸುನಿಲ ಹಳಿಪೇಟ, ಲಕ್ಷ್ಮಿಕಾಂತ ಕೋಬಾಳ, ಸಂತೋಷ ಕೋಮಟೆ, ಸುನಿತಾ ಖಜೂರಿ, ಶಕುಂತಲಾ ಕೋಮಟೆ, ಅನಿತಾ ನಾಟೇಕರ, ಸುವರ್ಣ ದೊರಿ, ಪ್ರಿಯಾಂಕಾ ಸಿಂಗೆ, ರಕ್ಷಿತಾ ಕುಂಬಾರ, ಶೋಭಾ ಹೇರೂರ, ಪ್ರತಿಕ ಗಾಯಕವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು






