ವಾಡಿ | ಗುಣಮಟ್ಟದ ಶಿಕ್ಷಣ, ಉದ್ಯೋಗಕ್ಕೆ ಮರಾಠ ಸಮಾಜ ಸಂಘಟಿತವಾಗಬೇಕು: ಸೂರ್ಯಕಾಂತ ಕದಮ್
ಮರಾಠ ಸಮಾಜದ ನೂತನ ತಾಲೂಕು ಪದಾಧಿಕಾರಿಗಳ ಆಯ್ಕೆ, ಸನ್ಮಾನ ಸಮಾರಂಭ

ವಾಡಿ : ಮರಾಠ ಸಮಾಜದ ಯುವಕರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುವಂತಾಗಬೇಕು. ಸರ್ಕಾರದಿಂದ ಸ್ಥಾಪಿಸಲಾಗಿರುವ ನಿಗಮ ಮಂಡಳಿಗಳ ಸೌಲಭ್ಯಗಳು ಸಮುದಾಯದ ಪ್ರತಿಯೊಬ್ಬರಿಗೂ ತಲುಪುವಂತೆ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಕ್ಷತ್ರಿಯ ಮರಾಠ ಪರಿಷತ್ನ ಗೌರವ ಕಾನೂನು ಸಲಹೆಗಾರ ಸೂರ್ಯಕಾಂತ ಕದಮ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಮರಾಠ ಸಮಾಜದ ನೂತನ ತಾಲೂಕು ಪದಾಧಿಕಾರಿಗಳ ಆಯ್ಕೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯದ ಪರಿಕಲ್ಪನೆಯಂತೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು. ಜಾತಿ-ಭೇದ ಮರೆತು ಸಂಘಟಿತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ತಾಲೂಕಿನ ಪ್ರತಿಯೊಂದು ಹಳ್ಳಿ-ಹಳ್ಳಿಗೂ ತೆರಳಿ ಸಮಾಜದ ಜನರನ್ನು ಸಂಘಟಿಸಬೇಕು. ಪಕ್ಷಭೇದ ಮರೆತು ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಹಾಗೂ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕ್ಷತ್ರಿಯ ಮರಾಠ ಪರಿಷತ್ನ ವಾಡಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹರಿ ಗಲಾಂಡೆ ಅವರನ್ನು ತಾಲೂಕು ಅಧ್ಯಕ್ಷರಾಗಿ, ಪೃಥ್ವಿರಾಜ್ ಸೂರ್ಯವಂಶಿ ಅವರನ್ನು ಕಾರ್ಯದರ್ಶಿಯಾಗಿ, ಸಚಿನ್ ಆನಂದ ಢವಳೆ ಅವರನ್ನು ಖಜಾಂಚಿಯಾಗಿ ಹಾಗೂ ಕರ್ಣ ಆರ್. ಯಾಧವ ಅವರನ್ನು ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಮಾಣಿಕ್ ಪವಾರ್, ಪ್ರಧಾನ ಕಾರ್ಯದರ್ಶಿ ದಿನಕರ್ ಮೂಲಗೆ, ಜಿಲ್ಲಾ ಖಜಾಂಚಿ ಜ್ಯೋತಿಬಾ ಜಾಧವ್, ಸಂಘಟನಾ ಕಾರ್ಯದರ್ಶಿ ಅಭಿಮನ್ಯು ಫಳಕೆ, ಹಿರಿಯ ಸದಸ್ಯ ಭೋಜಣ್ಣ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಖಂಡರಾದ ಹರಿ ಗಲಾಂಡೆ, ಪೃಥ್ವಿರಾಜ್ ಸೂರ್ಯವಂಶಿ, ಆನಂದರಾವ ಡೌವಳೆ, ಸುರೇಶ ಕದಮ್, ಬಾಳು ಸಾಠೆ, ಶ್ಯಾಮ್ ನೌಗಿರೆ, ಮುಕುಂದ ಶೇಲಾರ, ವಿಜಯ ಹರಬಾರೆ, ಅಶೋಕ ಢವಳೆ, ಕೇದಾರ ಪವಾರ್, ಅಶೋಕ ಪವಾರ್, ದೀಪಕ್ ಗಾಯಕವಾಡ್, ಸುನೀಲ ಧುಮಾಳೆ, ಸಂತೋಷ ಕದಮ್, ದಿಲೀಪ್ ಬಾಬರ, ದತ್ತಾ ಖೈರೆ, ಪ್ರಮೋದ್ ಚೋಪಡೆ** ಸೇರಿದಂತೆ ಮರಾಠ ಸಮಾಜದ ಪ್ರಮುಖರು ಹಾಗೂ ಸದಸ್ಯರು ಭಾಗವಹಿಸಿದ್ದರು. ಹಿರಿಯ ಮುಖಂಡ ಅಶೋಕ ಸೂರ್ಯವಂಶಿ ನಿರೂಪಿಸಿ, ವಂದಿಸಿದರು.






