ಕಾಸರಗೋಡು : ಕೊಳವೆ ಬಾವಿ ಗುತ್ತಿಗೆದಾರನ ಕೊಲೆ
![ಕಾಸರಗೋಡು : ಕೊಳವೆ ಬಾವಿ ಗುತ್ತಿಗೆದಾರನ ಕೊಲೆ ಕಾಸರಗೋಡು : ಕೊಳವೆ ಬಾವಿ ಗುತ್ತಿಗೆದಾರನ ಕೊಲೆ](https://www.varthabharati.in/h-upload/2023/07/01/1160641-1688227868752.webp)
ಕಾಸರಗೋಡು : ಕೊಳವೆ ಬಾವಿ ಗುತ್ತಿಗೆದಾರರೋರ್ವರನ್ನು ಕೊಲೆಗೈದು ಶೌಚಾಲಯದ ಹೊಂಡಕ್ಕೆ ತಳ್ಳಿದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿಯಲ್ಲಿ ನಡೆದಿದೆ.
ಸೀತಾಂಗೋಳಿ ಚೌಕಾರ್ ಪಿಲಿಪಳ್ಳದ ಥೋಮಸ್ ಕ್ರಾಸ್ತ( 52) ಕೊಲೆಗೀಡಾದವರು.
ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿರುವುದರಿಂದ ಸಂಶಯಗೊಂಡು ಪರಿಸರವಾಸಿಗಳು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪರಿಸರವಾಸಿಗಳು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಬದಿಯಡ್ಕ ಠಾಣಾ ಪೊಲೀಸರು ತನಿಖೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಕೊಲೆ ಬಳಿಕ ಗೋಣಿ ಚೀಲದಲ್ಲಿ ಮೃತದೇಹವನ್ನಿರಿಸಿ ಶೌಚಾಲಯದ ಹೊಂಡದೊಳಗೆ ತಳ್ಳಿದ್ದು, ಮೃತದೇಹವನ್ನು ಮಹಜರು ನಡೆಸಲಾಗುವುದು ಎಂದು ಬದಿಯಡ್ಕ ಠಾಣಾ ಪೊಲೀಸರು ತಿಳಿಸಿದ್ದಾರೆ.
ಥೋಮಸ್ ನ ಮಾಲಕತ್ವದ ಕ್ವಾಟ್ರಸ್ನ ಸೆಪ್ಟಿಕ್ ಟ್ಯಾ೦ಕ್ ನಲ್ಲಿ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದುದರಿಂದ ಪರಿಸರವಾಸಿಗಳು ಹುಡುಕಾಟ ನಡೆಸಿದಾಗ ಶೌಚಾಲಯದ ಹೊಂಡದ ಸ್ಲಾಬ್ ನ ಒಂದು ಬದಿ ಅರ್ಧ ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು, ದುರ್ವಾಸನೆ ಬರುತ್ತಿತ್ತು. ಇದರಿಂದ ಸಂಶಯಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ .
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.