Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕೊಡಗು
  4. Kodagu | ಕುತೂಹಲ ಮೂಡಿಸಿರುವ ʼಮಾಸ್ತಿ...

Kodagu | ಕುತೂಹಲ ಮೂಡಿಸಿರುವ ʼಮಾಸ್ತಿ ವೀರಗಲ್ಲುʼ, ʼಕೂರ್ಮ ಕರಂಡಕʼ!

ವಾರ್ತಾಭಾರತಿವಾರ್ತಾಭಾರತಿ7 Jun 2026 11:59 PM IST
share
Kodagu | ಕುತೂಹಲ ಮೂಡಿಸಿರುವ ʼಮಾಸ್ತಿ ವೀರಗಲ್ಲುʼ, ʼಕೂರ್ಮ ಕರಂಡಕʼ!

ಮಡಿಕೇರಿ: ಕೊಡಗಿನ ವಿಶಿಷ್ಟ ಗತ ಇತಿಹಾಸ ಪರಂಪರೆ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಎರಡು ಮಹತ್ವದ ಪ್ರಾಚ್ಯ ವಸ್ತುಗಳು ಯವಕಪಾಡಿ ಮತ್ತು ಹಾರಂಗಿ ಹಿನ್ನೀರು ಪ್ರದೇಶಗಳಲ್ಲಿ ಪತ್ತೆಯಾಗಿ ಕುತೂಹಲ ಮೂಡಿಸಿವೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮದ ಶ್ರೀ ಭಗವತಿ ದೇಗುಲದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಗರ್ಭಗುಡಿಯಲ್ಲಿನ ಶ್ರೀ ಭಗವತಿ ದೇವರ ವಿಗ್ರಹವನ್ನು ಹೊರ ತೆಗೆಯುವ ಸಂದರ್ಭ ಅದರ ತಳ ಭಾಗದಲ್ಲಿ ʼಕೂರ್ಮ ಕರಂಡಕʼ ಪತ್ತೆಯಾಗಿದೆ.

ವಾರದ ಹಿಂದಷ್ಟೆ ದೇಗುಲದ ಜೀರ್ಣೋದ್ಧಾರ ಹಂತದಲ್ಲಿ ಕಂಡು ಬಂದ ಕೂರ್ಮ ಕರಂಡಕವನ್ನು ಇದೀಗ ನಗರದ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆ ಮಾಡಲಾಗಿದೆಯೆಂದು ಸರಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ಅವರು ತಿಳಿಸಿದರು.

ಕೂರ್ಮ ಕರಂಡಕ ವಿಗ್ರಹದಲ್ಲಿ ಒಂದು ಕರಂಡಕದ ಮೇಲೆ ಆಮೆಯ ಸುಂದರ ವಿಗ್ರಹವಿದ್ದು, ಅದರ ಮೇಲ್ಭಾಗ ಲಂಬವಾದ ಆಕೃತಿಯ ರಚನೆ ಇದೆ.

ಈ ವಿಗ್ರಹ ಸುಮಾರು 16 ಇಲ್ಲವೆ 17 ನೇ ಶತಮಾನದ್ದೆಂದು ಊಹಿಸಲಾಗಿದ್ದು, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಆ ದಿನಗಳಲ್ಲಿ ಕೊಡಗನ್ನು ಹಾಲೇರಿ ರಾಜವಂಶ ಆಳುತಿತ್ತೆಂದು ರೇಖಾ ಮಾಹಿತಿ ನೀಡಿದ್ದಾರೆ.


ಮಾಸ್ತಿ ವೀರಗಲ್ಲು

ಪ್ರಸಕ್ತ ಸಾಲಿನ ಬೇಸಿಗೆಯ ಅವಧಿಯ ಉರಿಬಿಸಿಲ ಹೊಡೆತಕ್ಕೆ ಹಾರಂಗಿಯ ಹಿನ್ನೀರು ಸಾಕಷ್ಟು ಬೇಗನೆ ತಳಸೇರಿದೆ. ಈ ಸಂದರ್ಭ ಪ್ರಾಚ್ಯ ವಸ್ತು ಇಲಾಖೆಯಿಂದ ನಡೆಸಿದ ಉತ್ಖನನದ ಸಂದರ್ಭ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡ "ಮಾಸ್ತಿ ವೀರಗಲ್ಲು" ಪತ್ತೆಯಾಗಿದೆ.

ಈ ಮಾಸ್ತಿ ವೀರಗಲ್ಲುವಿನಲ್ಲಿ ಬಿಲ್ಲು ಬಾಣವನ್ನು ಹೂಡಿದ ಯೋಧರು, ಯುದ್ಧದ ಚಿತ್ರಗಳು ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಈ ಮಾಸ್ತಿಗಲ್ಲು ಸುಮಾರು 11 ಇಲ್ಲವೆ 12ನೇ ಶತಮಾನದ ಚೆಂಗಾಳ್ವರ ಕಾಲದ್ದು. ಇಂತಹ ಮಾಸ್ತಿ ವೀರಗಲ್ಲು, ಸತಿ ಗಲ್ಲು ಮೊದಲಾದವುಗಳನ್ನು ಅದು ದೊರಕಿದ ಪ್ರದೇಶಗಳಲ್ಲೆ ವ್ಯವಸ್ಥಿತವಾಗಿ ಅಳವಡಿಸುವ ಕಾರ್ಯಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.


ವಿವಿಧೆಡೆ ಪ್ರಾಚ್ಯ ವಸ್ತುಗಳು

ಕೊಡಗು ಜಿಲ್ಲೆಯ ಐದು ತಾಲ್ಲೂಕು ವ್ಯಾಪ್ತಿಗಳಲ್ಲಿ 701 ದೇವಸ್ಥಾನಗಳಿದ್ದು, 1914ನೇ ಇಸವಿಯಲ್ಲಿ ಬ್ರಿಟಿಷ್ ಪ್ರಾಚ್ಯ ವಸ್ತು ತಜ್ಞರಾದ ಬಿ.ಎಲ್.ರೈಸ್ ಅವರು, ಕೊಡಗಿನ ಗ್ರಾಮಿಣ ಭಾಗಗಳಲ್ಲಿನ 106 ಶಾಸನಗಳನ್ನು ಗುರುತು ಮಾಡಿದ್ದರು. ಇವರು ಗುರುತು ಮಾಡಿದ ಶಾಸನಗಳಲ್ಲಿ ಪ್ರಸ್ತುತ 48 ಶಾಸನಗಳನ್ನಷ್ಟೆ ಪತ್ತೆ ಮಾಡಲು ಸಾಧ್ಯವಾಗಿದೆ. ರೈಸ್ ಅವರು ಗುರುತು ಮಾಡದ 78 ಇತರೆ ಶಾಸನ, ಪ್ರಾಚ್ಯ ವಸ್ತುಗಳನ್ನು ಪ್ರಾಚ್ಯ ವಸ್ತು ಇಲಾಖೆ ಗುರುತಿಸುವ ಮೂಲಕ ಕೊಡಗಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಿದೆ.

ಕೊಡಗಿನ ವಿಶಿಷ್ಟ "ಕೋಲೆಕಲ್ಲು"-ಜಿಲ್ಲಾ ವ್ಯಾಪ್ತಿಯ ವಿವಿಧೆಡೆಗಳಲ್ಲಿ 200 ವೀರಗಲ್ಲು, 77 ಸತಿಕಲ್ಲು, 284 ಕೋಲೆಕಲ್ಲುಗಳನ್ನು ಮತ್ತು 27 ಇತರೆ ಶಿಲ್ಪಗಳನ್ನು ಪತ್ತೆ ಮಾಡಿ ಸಂರಕ್ಷಿಸುವ ಕಾರ್ಯ ನಡೆದಿದೆ. ಇವುಗಳಲ್ಲಿ "ಕೋಲೆಕಲ್ಲು" ಕೊಡಗಿಗಷ್ಟೆ ಸೀಮಿತವಾದ ವಿಶಿಷ್ಟವಾದ ಪ್ರಾಚ್ಯ ವಸ್ತು. ಈ ಕಲ್ಲು ಕೊಡಗಿನ ಮನೆತನಗಳ ಮುಖ್ಯಸ್ಥರು ನಿಧನರಾದ ಸಂದರ್ಭ ನೆಟ್ಟ ಕಲ್ಲುಗಳಾಗಿದೆ.

Tags

Kodagu‌Masti Veergallu
share
ವಾರ್ತಾಭಾರತಿ
ವಾರ್ತಾಭಾರತಿ
Next Story
X