ಮಡಿಕೇರಿ | ಕಾರು-ಬೈಕ್ ನಡುವೆ ಢಿಕ್ಕಿ : ಯುವಕ ಮೃತ್ಯು

ಚಂದನ್
ಮಡಿಕೇರಿ : ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಯುವಕನೊರ್ವ ಮೃತಪಟ್ಟಿರುವ ಶನಿವಾರಸಂತೆ ಬಳಿ ನಡೆದಿದೆ.
ಮೃತರನ್ನು ಶನಿವಾರಸಂತೆ ಸಮೀಪದ ನಿಡ್ತ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೌಡೇನಹಳ್ಳಿ ಗ್ರಾಮದ ನಿವಾಸಿ ಚಂದನ್(25) ಎಂದು ಗುರುತಿಸಲಾಗಿದೆ.
ಚಂದನ್ ತನ್ನ ಸ್ನೇಹಿತನೊಂದಿಗೆ ಬೈಕ್ನಲ್ಲಿ ಶನಿವಾರಸಂತೆಯಿಂದ ಚೌಡೇನಹಳ್ಳಿಯ ತನ್ನ ಮನೆಯತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story