ಶನಿವಾರಸಂತೆ: ಗುಡುಗಳಲೆಯಲ್ಲಿ 1501ನೇ ಮೀಲಾದುನ್ನಬಿ ಆಚರಣೆ

ಶನಿವಾರಸಂತೆ: ಗುಡುಗಳಲೆ ಬದ್ರಿಯಾ ಶಾಫಿ ಜುಮಾ ಮಸೀದಿ ಹಾಗೂ ಅರೇಬಿಕ್ ಹೈಯರ್ ಸೆಕೆಂಡರಿ ಮದ್ರಸದಲ್ಲಿ ಪ್ರವಾದಿ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ) ರವರ 1501ನೇ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪ್ರವಾದಿ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ) ರವರ ಆದರ್ಶ ಜೀವನದ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವ ಹಾಗೂ ಸಹೋದರತ್ವ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರವಾದಿಯವರ ಜೀವನ ಸಂದೇಶ, ಆದರ್ಶಗಳು, ಶಾಂತಿ, ಪ್ರೀತಿ ಹಾಗೂ ಮಾನವೀಯತೆಯ ಕುರಿತು ಧಾರ್ಮಿಕ ವಿದ್ವಾಂಸರಿಂದ ಉಪನ್ಯಾಸಗಳು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಮದ್ಹ್ ಗೀತೆಗಳು, ಧಾರ್ಮಿಕ ಭಾಷಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬದ್ರಿಯಾ ಮಸ್ಜಿದ್ನ ಅಧ್ಯಕ್ಷರಾದ ಹಸೈನಾರ್ ಉಸ್ತಾದ್, ಖತೀಬರಾದ ಝಿಯಾದ್ ದಾರಿಮಿ, ಮದ್ರಸ ಅಧ್ಯಾಪಕರಾದ ಶಕೀರ್ ಬಾಖವಿ, ರಫೀಕ್ ದಾರಿಮಿ, ರಾಶಿದ್ ಫೈಝಿ, ಉಬೈದ್ ಫೈಝಿ, ರಂಶಾದ್ ಫೈಝಿ ಸೇರಿದಂತೆ ಮಸೀದಿ ಮತ್ತು ಮದ್ರಸ ಕಮಿಟಿಯ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.






