ಸಿಜೆಐಗೆ ಶೂ ಎಸೆದ ಘಟನೆ ಖಂಡಿಸಿ ಅ.17ರಂದು ಕೋಲಾರ ಜಿಲ್ಲಾದ್ಯಂತ ಸ್ವಯಂ ಪ್ರೇರಿತ ಬಂದ್ : ಜನಪರ ಸಂಘಟನೆಗಳ ಕರೆ

ಕೋಲಾರ, ಅ.11: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ನ್ಯಾಯ ಪೀಠಕ್ಕೆ ಶೂ ಎಸೆದ ಘಟನೆ ಖಂಡಿಸಿ ಕೋಲಾರ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ವತಿಯಿಂದ ಅ.17ರಂದು ಜಿಲ್ಲಾದ್ಯಂತ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ.
ಶನಿವಾರ ನಗರದ ನಚಿಕೇತ ನಿಲಯದ ಆವರಣದಲ್ಲಿನ ಬುದ್ಧ ವಿಹಾರದಲ್ಲಿ ಜಿಲ್ಲೆಯ ದಲಿತ, ರೈತ, ಪ್ರಗತಿಪರ, ಕನ್ನಡಪರ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಅತಿಥಿ ಉಪನ್ಯಾಸಕರ ಸಂಘ ಮತ್ತು ಮಹಿಳಾ ಸಂಘಟನೆಗಳು ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದರು.
ದೇಶದ ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯಲು, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ರಕ್ಷಣೆ ಮಾಡಿಕೊಳ್ಳಲು ಒಕ್ಕೊರಲಿನ ಸಂದೇಶ ಸಾರಲು ಕೋಲಾರ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಬಂದ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಟಿ.ವಿಜಯ ಕುಮಾರ್, ಪಂಡಿತ್ ಮುನಿವೆಂಕಟಪ್ಪ, ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಮುಖಂಡ ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಅಫ್ರೋಝ್ ಪಾಷಾ, ಅನ್ವರ್ ಪಾಷ, ಎ.ಪಿ.ಎಲ್.ರಂಗನಾಥ್, ಹಾರೋಹಳ್ಳಿ ರವಿ, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಸಂಗಸಂದ್ರ ವಿಜಯ್ ಕುಮಾರ್, ರೈತ ಮುಖಂಡರಾದ ಅಬ್ಬಿಣಿ ಶಿವಪ್ಪ, ಟಿ.ಎಂ.ವೆಂಕಟೇಶ್, ಕಾರ್ಮಿಕ ಮುಖಂಡರಾದ ಹೊನ್ನೇನಹಳ್ಳಿ ಯಲ್ಲಪ್ಪ, ವಿಜಯ್ ಕೃಷ್ಣ, ಚಂದ್ರಮೌಳಿ, ಅಶ್ವಥ್ ನಾರಾಯಣ ಅಂತ್ಯಜ, ವರದೇನಹಳ್ಳಿ ವೆಂಕಟೇಶ್, ಸಿ.ವಿ.ನಾಗರಾಜ್, ಮಾರ್ಜೇನಹಳ್ಳಿ ಬಾಬು, ಶೆಟ್ಟಿಗಾನಹಳ್ಳಿ ಅಂಬರೀಷ್, ದೊಡ್ನಹಳ್ಳಿ ಸುಬ್ರಮಣಿ, ಹೂಹಳ್ಳಿ ನಾಗರಾಜ್, ಹಿರೇಕರಪನಹಳ್ಳಿ ಯಲ್ಲಪ್ಪ, ಚಿಗುರು ಪ್ರಭಾವತಿ , ಈನೆಲ ಈಜಲ ವೆಂಕಟಾಚಲಪತಿ, ಬೊಜ್ಜು ರಾಜಪ್ಪ, ಶಂಕರಪ್ಪ, ಸಿ.ಎಂ.ಅಶೋಕ್, ಎಂ.ಸಿ.ಚಂದ್ರಯ್ಯ, ರಾಧಾಕೃಷ್ಣ, ಮಾಲೂರು ಸಂಪಂಗಿ, ಜಿಲ್ಲೆಯ ಎಲ್ಲ ತಾಲೂಕುಗಳ ಮುಖಂಡರು ಭಾಗವಹಿಸಿದ್ದರು.







