Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕೋಲಾರ
  4. ಕೋಲಾರ ಜಿಲ್ಲೆಯ ಹೈನುಗಾರಿಕೆಗೆ ವರದಾನವಾದ...

ಕೋಲಾರ ಜಿಲ್ಲೆಯ ಹೈನುಗಾರಿಕೆಗೆ ವರದಾನವಾದ ನರೇಗಾ

ಸಿ.ವಿ.ನಾಗರಾಜ್. ಕೋಲಾರಸಿ.ವಿ.ನಾಗರಾಜ್. ಕೋಲಾರ30 Sept 2024 12:57 PM IST
share
ಕೋಲಾರ ಜಿಲ್ಲೆಯ ಹೈನುಗಾರಿಕೆಗೆ ವರದಾನವಾದ ನರೇಗಾ

ಕೋಲಾರ,: ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಸಿಲ್ವಿಪ್ಯಾಶ್ಚರ್ (ಬಹುವಾರ್ಷಿಕ ಮೇವು) ಕಾಮಗಾರಿ ಈಗ ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದೆ. ಪಶುಗಳಿಗೆ ಬೇಕಾದ ಹಸಿರು ಮೇವು ಬೆಳೆಯಲು ನರೇಗಾದಡಿ ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ಹೈನುಗಾರಿಕೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ಸಿಲ್ವಿಪ್ಯಾಶ್ಚರ್ ಕಾಮಗಾರಿಯಡಿಯಲ್ಲಿ ಸೀಮೆಹುಲ್ಲು ಬೆಳೆಯಲು ಅವಕಾಶ ನೀಡಲಾಗಿದ್ದು, ರೈತರಿಗೆ ಹಸಿರು ಮೇವಿನ ಸಮಸ್ಯೆಗೆ ಪರಿಹಾರ ದೊರೆತಿದೆ.

ಕೋಲಾರ ಜಿಲ್ಲೆಯ ಗ್ರಾಮೀಣ ಜನರಿಗೆ ಹೈನುಗಾರಿಕೆ ಜೀವನಾಧಾರ. ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹಸು, ಕುರಿ, ಮೇಕೆ ಸಾಕಣೆಗೆ ಶೆಡ್ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಇದರೊಂದಿಗೆ ಈ ವರ್ಷದಿಂದ ಪಶುಗಳಿಗೆ ಬೇಕಾದ ಹಸಿರು ಮೇವು ಬೆಳೆಯಲು ನರೇಗಾದಡಿ ಆರ್ಥಿಕ ಸಹಾಯ ದೊರೆಯುತ್ತಿದೆ. ನರೇಗಾದಡಿಯಲ್ಲಿ ಸಿಲ್ವಿ ಪ್ಯಾಶ್ಚರ್(ಬಹುವಾರ್ಷಿಕ ಮೇವು) ಬೆಳೆಯಲು ಅರ್ಧ ಎಕರೆಗೆ ರೈತರಿಗೆ 10,700 ರೂ. ನೆರವು ನೀಡಲಾಗುತ್ತಿದೆ.

ಹಾಲಿನ ಉತ್ಪಾದನೆಯು ಹಸುಗಳಿಗೆ ನೀಡುವ ಗುಣಮಟ್ಟದ ಹಸಿರು ಮೇವು, ಹಾಗೂ ಸಮತೋಲನ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಹಸಿರು ಮೇವು ಉತ್ಪಾದನೆಗಾಗಿ ನರೇಗಾದಡಿಯಲ್ಲಿ ಬಹುವಾರ್ಷಿಕ ಮೇವು ಬೆಳೆಯಲು ಸಹಾಯ ನೀಡಲಾಗುತ್ತಿದೆ. ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ ಗ್ರಾಮ ಪಂಚಾಯತ್‌ನ ಚಾಕಲನಹಳ್ಳಿ ಗ್ರಾಮದ ರೈತ ದಿನೇಶ್ ರಾಜು, ಈಗ ನರೇಗಾಡಿಯಲ್ಲಿ ಸಿಲ್ವಿಪ್ಯಾಶ್ಚರ್ ಕಾಮಗಾರಿ ಕೈಗೊಂಡಿದ್ದು, ತಮ್ಮ ಮೇವಿನ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.

ಮೇವು ಸಮಸ್ಯೆ: ದಿನೇಶ್ ರಾಜು ಕೃಷಿ ಜೊತೆಗೆ ತಮ್ಮ ಮನೆಯಲ್ಲಿ 6 ಹಸು, 50 ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ದನ ಸಾಕಣೆ ಈ ಹಿಂದೆ ನರೇಗಾಡಿಯಲ್ಲಿ ದನದ ಶೆಡ್ ಸಹ ನಿರ್ಮಿಸಿಕೊಂಡಿದ್ದಾರೆ. ಹಸುಗಳ ಸಂಖ್ಯೆ ಹೆಚ್ಚಾದಂತೆ ಹಸಿರು ಮೇವಿನ ಸಮಸ್ಯೆ ಎದುರಾಯಿತು. ಹಸಿರು ಮೇವು ಕಡಿಮೆಯಾದರೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ಹೊರಗಡೆ ಮೇವು ಖರೀದಿಸಿದರೆ, ಅದು ದುಬಾರಿ. ಜೋಳದ ಮೇವು ಬೆಳೆದರೆ ಒಂದೇ ಕಟಾವಿಗೆ ಮುಗಿದು ಹೋಗುತ್ತದೆ. ಅಲ್ಲದೆ ಜೋಳಕ್ಕೆ ಹುಳದ ಕಾಟ ಹೆಚ್ಚು. ಹೀಗಾಗಿ ದನಕರುಗಳಿಗೆ ಹಸಿರು ಮೇವು ಒದಗಿಸುವುದು

ದಿನೇಶ್‌ಗೆ ದೊಡ್ಡ ಸಮಸ್ಯೆಯೇ ಆಗಿತ್ತು.

ಅಧಿಕ ಮೇವು ಇಳುವರಿ, ಹೆಚ್ಚು ಲಾಭ: ನೇಪಿಯರ್ ಹುಲ್ಲು ಇತರ ಸೀಮೆ ಹುಲ್ಲಿಗಿಂತೆ ಹೆಚ್ಚು ಮೃದುವಾಗಿದ್ದು, ಹೆಚ್ಚಿನ ನೀರಿನಾಂಶ, ಹಾಗೂ ಸಮೃದ್ಧ ಪೋಷಕಾಂಶಗಳಿಂದ ಕೂಡಿದೆ. ಇದು ಪಶುಗಳಿಗೆ ಉತ್ತಮ ಗುಣಮಟ್ಟದ ಆಹಾರವಾಗಿದೆ. ನೇಪಿಯರ್ ಹುಲ್ಲು ದನಕರುಗಳಿಗೆ

ಸಮೃದ್ಧ ಹಸಿರು ಮೇವು ದೊರೆಯುತ್ತಿದ್ದು, ಹಾಲಿನ ಉತ್ಪಾದನೆ

ಸಹ ಹೆಚ್ಚಾಗಿದೆ. ನೇಪಿಯರ್ ಹುಲ್ಲನ್ನು ಕುರಿ ಮೇಕೆಗಳಿಗೂ ಹಾಕುವುದರಿಂದ ಅವು ಸಹ ಉತ್ತಮ ಬೆಳವಣಿಗೆಯಾಗಲಿವೆ.

ನೇಪಿಯರ್ ಹುಲ್ಲು

ನೇಪಿಯರ್ ಹುಲ್ಲಿನ ಕಟ್ಟಿ ನಾಟಿ ಮಾಡಿದರೆ ಐದು-ಆರು ವರ್ಷದರೆಗೆ, ನೀರು ಹಾಗೂ ಕಡಿಮೆ ಗೊಬ್ಬರದಲ್ಲಿ ಉತ್ತಮ ಇಳುವರಿ ನೀಡುತ್ತದೆ. ಕೀಟ ಹಾಗೂ ರೋಗಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಅರ್ಧ ಎಕರೆಗೆ ಒಂದು ಕಟಾವಿಗೆ ಸರಾಸರಿ 20 ಟನ್ ಮೇವು ದೊರೆಯುತ್ತದೆ. ವಾರ್ಷಿಕವಾಗಿ 7-8 ಬಾರಿ ಕಟಾವಿಗೆ ಬರಲಿದೆ. ನೇಪಿಯರ್ ಹುಲ್ಲು 6-8 ಅಡಿಗಳ ಎತ್ತರದವರೆಗೆ ಬೆಳೆಯಲಿದ್ದು, ಇತರ ಹುಲ್ಲು

ಗಳಿಗಿಂತ ಹೆಚ್ಚು ಇಳುವರಿ ಬರಲಿದೆ.

ಈ ಹಿಂದೆ ದಕನರುಗಳಿಗೆ ಮೇವು ಸಂಗ್ರಹ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗುತ್ತಿತ್ತು. ಎಷ್ಟೋ ಸಾರಿ ದುಬಾರಿ ಮೇವು ಕೊಳ್ಳಲಾಗದೆ, ಒಣಮೇವು ನೀಡಿದ್ದರಿಂದ ಹಾಲಿನ ಉತ್ಪಾದನೆ ಸಹ ಕುಂಟಿತವಾಗಿತ್ತು. ಸಿಲ್ವಿಪ್ಯಾಶ್ಚರ್ ನಿಂದ ನಮ್ಮ ದನಕರುಗಳಿಗೆ ಆಹಾರ ಕೊರತೆ ನೀಗಿದೆ. ಸಮೃದ್ಧವಾಗಿ ಹಸಿರು ಮೇವಿನಿಂದ ದನಕರುಗಳು ಆರೋಗ್ಯವಾಗಿದ್ದು, ಹಾಲಿನ ಉತ್ಪಾದನೆ ಸಹ ಹೆಚ್ಚಾಗಿದೆ. ಈಗ ಮತ್ತಷ್ಟು ಹಸುಗಳನ್ನು ಸಾಕಣೆ ಮಾಡಬಹುದು.

-ದಿನೇಶ್ ರಾಜು, ರೈತ

share
ಸಿ.ವಿ.ನಾಗರಾಜ್. ಕೋಲಾರ
ಸಿ.ವಿ.ನಾಗರಾಜ್. ಕೋಲಾರ
Next Story
X