Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕೊಪ್ಪಳ
  4. ಗಂಗಾವತಿ | ಹದಿನೈದನೇ ಶತಮಾನದ ಎರಡು...

ಗಂಗಾವತಿ | ಹದಿನೈದನೇ ಶತಮಾನದ ಎರಡು ಶಾಸನಗಳು ಪತ್ತೆ

ವಾರ್ತಾಭಾರತಿವಾರ್ತಾಭಾರತಿ11 Sept 2025 7:16 PM IST
share
ಗಂಗಾವತಿ | ಹದಿನೈದನೇ ಶತಮಾನದ ಎರಡು ಶಾಸನಗಳು ಪತ್ತೆ

ಗಂಗಾವತಿ: ನಗರದ ಪಂಪಾನಗರ ಮತ್ತು ವಿರೂಪಾಪುರಗಳಲ್ಲಿ ಎರಡು ಶಾಸನಗಳು ಪತ್ತೆಯಾಗಿದ್ದು, ಈ ಶಾಸನಗಳು ಹದಿನೈದನೇ ಶತಮಾನಕ್ಕೆ ಸೇರಿದ್ದಾಗಿವೆ.

ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಅವರು ಈ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ.

ಮೊದಲ ಶಾಸನ ಪಂಪಾನಗರದ ಬೆಟ್ಟಕ್ಕೆ ಹೊಂದಿಕೊಂಡಿರುವ ಪಠಾಣರ ಖಬರಸ್ಥಾನದ ವ್ಯಾಪ್ತಿಯಲ್ಲಿರುವ ಹುಟ್ಟು ಬಂಡೆಯ ಮೇಲೆ ಮೂರು ಸಾಲುಗಳಲ್ಲಿ ಬರೆಯಲಾಗಿದೆ .ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವಲಿಂಗದ ಚಿತ್ರಗಳಿವೆ. ಶಾಸನದ ಪಾಠ ಶುದ್ಧವಾಗಿಲ್ಲ. ಶಾಸನ ಪಾಠವನ್ನು "ಶ್ರೀ ಗೊಂಗಡಯ್ಯನ ಮನೆ ಮಣುಪ ಕಾಳಗಿ ಕೊಂಡ ಕೊಂಡ ಪಾದಕ್ಕೆ ಅರುಹಿ ಕೊಂಡದು" ಎಂದು ಸಂಗ್ರಹಿಸಬಹುದು.

ಈ ಶಾಸನದಿಂದ ಅನತಿ ದೂರದಲ್ಲಿರುವ ಮತ್ತೊಂದು ಗುಂಡಿನ ಮೇಲೆ" ಶ್ರೀ ವಿದೂರಾನಂದರ ಪಾದವು" ಮತ್ತು " ಪಿನಿಬುಸಿ ಮಾಯಣ್ಣ"ಎಂಬ ಬರಹಗಳಿವೆ. ಈ ಗುಂಡಿನ ಮೇಲೆ ಕೊಂಡ ಕುಂದಾಚಾರ್ಯರ ಶಿಷ್ಯ ವಿಧೂರಾನಂದ ಪಾದಗಳ ಚಿತ್ರಗಳನ್ನು ಕೆತ್ತಲಾಗಿದೆ. ಈ ಶಾಸನದಿಂದ ನೇರವಾಗಿ ಬೆಟ್ಟದ ಮಧ್ಯಭಾಗದ ಒಂದು ಗವಿಯಲ್ಲಿ ಜೈನ ಶೀಥಲನಾಥ ತೀರ್ಥಂಕರರ, ಯಕ್ಷಿಯ ಮತ್ತು ಅಶ್ವ ಸವಾರಿ ಅರಸನ ಶಿಲ್ಪಗಳಿವೆ. ಈ ಶಿಲ್ಪ ಮತ್ತು ಶಾಸನಗಳನ್ನು ಅನುಲಕ್ಷಿಸಿ ಇವು ಜೈನ ಧರ್ಮಕ್ಕೆ ಸಂಬಂಧಿಸಿದ ವೆಂದು ಸ್ಪಷ್ಟವಾಗುತ್ತದೆ.

ಪ್ರಸ್ತುತ ಶಾಸನವು ಗೊಂಗಡಯ್ಯ ಎಂಬ ಭಕ್ತನ ಮನೆಗೆ ಕೊಂಡಕುಂದಾ ಎಂಬ ಜೈನ ಯತಿಗಳು ಪಾದ ವಿರಿಸಲು ( ಆಗಮಿಸಲು) ಅರುಹಿಕೊಂಡ ಸಂಗತಿಯನ್ನು ವಿವರಿಸುತ್ತದೆ. ಕೊಂಡ ಕುಂದಾಚಾರ್ಯ, ವಿಧೂರಾನಂದರು ಎಂಬ ಜೈನ ಯತಿಗಳು ಶಿಲ್ಪಗಳಿರುವ ಗವಿಯಲ್ಲಿ ಧ್ಯಾನಸ್ಥರಾಗಿರಬಹುದು. ಇಲ್ಲವೇ ಸಲ್ಲೇಖನ ವ್ರತವನ್ನ ಆಚರಿಸಿರಬಹುದಾದ ಸಾಧ್ಯತೆ ಇದೆ. ಶಾಸನದ ಅಕ್ಷರಗಳ ಶೈಲಿಯಿಂದ ಇದು ಹದಿನೈದನೇ ಶತಮಾನಕ್ಕೆ ಸೇರುತ್ತದೆ.

ಎರಡನೇ ಶಾಸನವು ವಿರುಪಾಪುರನಗರದ ಕೃಷ್ಣ ನಾಯಕ್ ಎಂಬವರ ಮನೆಯ ಹಿಂಬದಿಯಲ್ಲಿ ಹುಟ್ಟು ಬಂಡೆಯಲ್ಲಿ ನಾಲ್ಕು ಸಾಲುಗಳಲ್ಲಿ ಕೆತ್ತಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವಲಿಂಗದ ಕೆತ್ತನೆಗಳಿವೆ. ಶಾಸನದ ಅಕ್ಷರಗಳು ಅಲ್ಲಲ್ಲಿ ಸವೆದಿವೆ. ಹಾಗಾಗಿ ಪೂರ್ಣ ವಿಷಯವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇರುವ ವಿಷಯವನ್ನು ಗ್ರಹಿಸಿ ಶ್ರೀ ಪೌಢದೇವಪ್ಪ ನಾಯಕರು ವಿರೂಪಾಪುರದಲ್ಲಿ ಯಾವುದೋ ದೇವರಿಗೆ ಗದ್ದೆಯನ್ನು ದಾನವಾಗಿ ನೀಡಿದ ವಿಷಯವನ್ನು ತಿಳಿಸುತ್ತದೆ. ಈ ಶಾಸನವೂ ಕೂಡ ಹದಿನಾರನೇ ಶತಮಾನಕ್ಕೆ ಸಂಬಂಧಿಸಿದೆ.

ಗಂಗಾವತಿಯಲ್ಲಿ ಈಗಾಗಲೇ ಮಳೆ ಮಲ್ಲೇಶ್ವರ ಬೆಟ್ಟದ ಹಿಂಬದಿಯ ಒಂದು ಚಿಕ್ಕ ಗುಂಡಿನ ಮೇಲೆ 5 ಸಾಲುಗಳ ಶಾಸನವು ದೊರೆತಿದ್ದು, ಅದರ ಜೊತೆಗೆ ಇವೆರಡು ಹೊಸ ಸೇರ್ಪಡೆಯಾಗಿವೆ. ಒಟ್ಟಿನಲ್ಲಿ ಗಂಗಾವತಿಯ15 ಮತ್ತು16ನೇ ಶತಮಾನದ ಇತಿಹಾಸವನ್ನು ತಿಳಿದುಕೊಳ್ಳಲು ಈ ಶಾಸನಗಳು ಸಹಾಯಕವಾಗಿದ್ದು, ಇವುಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಲಾಗುವುದೆಂದು ಎಂದು ಡಾ. ಕೋಲ್ಕಾರ್ ತಿಳಿಸಿದ್ದಾರೆ.

ಶಾಸನಗಳ ಶೋಧನೆಯಲ್ಲಿ ದಿವಂಗತ ಸೋಮಪ್ಪ ಯಲಬುರ್ಗಿ, ಬಸವರಾಜ್ ಮ್ಯಾಗಳಮನಿ, ಲಕ್ಷ್ಮಣ್ ಗೌಡ, ಪೀರಮ್ಮ ಭೀಮಣ್ಣ ನಾಯ್ಕ್ ಸಹಕರಿಸಿದ್ದಾರೆಂದು ಅವರು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X