ಕನಕಗಿರಿ | ಕೆಆರ್ಎಸ್ ಪಕ್ಷದ ತಾಲೂಕು ಸಮಿತಿ ಪುನರ್ ರಚನೆ : ಅಧ್ಯಕ್ಷರಾಗಿ ರಾಜೇಶ ಚಿನ್ನೂರು ಆಯ್ಕೆ

ಕನಕಗಿರಿ : ತಾಲೂಕಿನ ಪರಿವೀಕ್ಷಣಾ ಮಂದಿರದಲ್ಲಿ ಶನಿವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಪ್ಪಳ ಜಿಲ್ಲಾ ಸಂಚಾಲಕರಾದ ಗಣೇಶ ಅಮೃತ ಅವರ ಆದೇಶದ ಮೇರೆಗೆ 3 ವರ್ಷಗಳ ಕಾಲಾವಧಿ, ಜಿಲ್ಲಾ ಸಮಿತಿಯ ವಿಶ್ವಾಸವಿರುವ ತನಕ ಕನಕಗಿರಿ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳನ್ನು ನೇಮಕಾತಿ ಮಾಡಲಾಯಿತು.
ಅಧ್ಯಕ್ಷರಾಗಿ ರಾಜೇಶ ಚಿನ್ನೂರು, ಉಪಾಧ್ಯಕ್ಷರಾಗಿ ಹನುಮಂತಪ್ಪ ವಾಲೆಕಾರ್, ಪ್ರಧಾನ ಕಾರ್ಯದರ್ಶಿ ದುರುಗಪ್ಪ ನಾಯಕ, ಕಾರ್ಯದರ್ಶಿ ಸಂಗನಗೌಡ, ಯಮನೂರು, ಬಾಬುಸಾಬ ಗುರಿಕಾರ, ಹುಸೇನ, ಸಂಘಟನಾ ಕಾರ್ಯದರ್ಶಿ ಮರಿಸ್ವಾಮ ಅವರನ್ನು ಆಯ್ಕೆಮಾಡಿದರು.
Next Story





