ಕೊಪ್ಪಳ | ಮತದಾರರ ಸಹಾಯ ಕೇಂದ್ರ ತೆರೆಯಲು ಆಗ್ರಹ

ಕೊಪ್ಪಳ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಜಿಲ್ಲೆಯ ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಹಾಗೂ ಸಾರ್ವಜನಿಕರಿಗೆ ಅಗತ್ಯ ನೆರವು ಮತ್ತು ತಹಸೀಲ್ದಾರ್ ಕಚೇರಿಯಲ್ಲಿ 'ಸಹಾಯ ಕೇಂದ್ರ' ಆರಂಭಿಸುವಂತೆ ನಾಗರಿಕರ ಹಕ್ಕು ರಕ್ಷಣಾ ಸಂಘ (APCR) ಕೊಪ್ಪಳ ಜಿಲ್ಲಾ ಘಟಕವು ಅಪಾರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಎಪಿಸಿಆರ್ ಜಿಲ್ಲಾ ಘಟಕವು ಪ್ರತಿ ತಾಲೂಕು ಮತ್ತು ನಗರದ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಉಚಿತ ಅರ್ಜಿ ನಮೂನೆ, ಮಾರ್ಗದರ್ಶನ ಹಾಗೂ 7 ದಿನಗಳೊಳಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಎಸ್ಐಆರ್ ಸಹಾಯ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು ಎಂದು ಉಚಿತ ಪ್ರಮಾಣ ಪತ್ರ ಹಾಗೂ ಸಹಾಯ ಕೇಂದ್ರ ಸ್ಥಾಪನೆ ಮತ್ತು ಅಸಂಘಟಿತ ಮತ್ತು ಬಡ ವರ್ಗದವರ ಹಕ್ಕುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಇದಲ್ಲದೆ ದಾಖಲೆಗಳ ಕೊರತೆಯಿಂದ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ಕ್ರಮ ವಹಿಸಬೇಕು,ದಾಖಲಾತಿ ಸರಳೀಕರಣ ಮತ್ತು ಸಿಂಗಲ್ ವಿಂಡೋ ವ್ಯವಸ್ಥೆ, ಇದರ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಮತ್ತು ಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸುವ ಅಥವಾ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರ ಹಕ್ಕು ರಕ್ಷಣಾ ಸಂಘ ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಅಶ್ಪಾಕ್ ಹುಸೇನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವೋಕೇಟ್ ಖಾಸಿಂ ಜಮಪುರ, ಕಾರ್ಯದರ್ಶಿ ಅಡ್ವೋಕೇಟ್ ಮೇರಾಜ್, ಆದಿಲ್ ಪಟೇಲ್, ಮುಹಮ್ಮದ್ ಅಲೀಮುದ್ದಿನ್ ಉಪಸ್ಥಿತರಿದ್ದರು.






