ಕುಕನೂರು | ಬೆಳಿಗ್ಗೆ 5 ಗಂಟೆಯ ವಿದ್ಯುತ್ ಪೂರೈಕೆಗೆ ವಿರೋಧ: ಉಪಕೇಂದ್ರಕ್ಕೆ ರೈತರ ಮುತ್ತಿಗೆ

ಕುಕನೂರು: ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದ ಎದುರು ಭೈರನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರ ಪಂಪ್ಸೆಟ್ಗಳಿಗೆ ಬೆಳಿಗ್ಗೆ 5 ಗಂಟೆಗೆ ವಿದ್ಯುತ್ ಪೂರೈಕೆ ನೀಡುತ್ತಿರುವ ಕ್ರಮದಿಂದ ತೀವ್ರ ಅನಾನುಕೂಲತೆ ಉಂಟಾಗಿದೆ ಎಂದು ಆರೋಪಿಸಿದರು. ಕರಡಿ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವ ಪ್ರದೇಶದಲ್ಲಿ ಮುಂಜಾನೆ ಹೊಲಗಳಿಗೆ ತೆರಳುವುದು ಅಪಾಯಕಾರಿಯಾಗಿದೆ. ರೈತರ ಜೀವ ಭದ್ರತೆಯನ್ನು ಗಮನದಲ್ಲಿಟ್ಟು ಬೆಳಿಗ್ಗೆ 9 ಗಂಟೆಯಿಂದ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೆ ಜೆಡಿಎಸ್ ಜಿಲ್ಲಾ ವಕ್ತಾರ ಜಿಲ್ಲಾ ವಕ್ತಾರ ಮಲ್ಲನಗೌಡ ಎಸ್. ಕೋನನಗೌಡ್ರ ನೇತೃತ್ವ ವಹಿಸಿದ್ದರು. ಈ ವೇಳೆ ರೈತರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಣ್ಣಾಹನುಮಂತ ಸಣ್ಣಳ್ಳಿ, ಶಿವಾನಂದಪ್ಪ ಚಿಂಚರ್, ಮಾರುತಿ ಹಿರೇಹಳ್ಳಿ, ಶಂಕ್ರಪ್ಪ ಚಿಂಚರ್, ಗವಿಸಿದ್ದಪ್ಪ ಜಿನ್ನಾಪುರ, ಬಸವರಾಜ ಕೊರಮದಾರ, ಹನುಮಂತಪ್ಪ ಮಾಮನಿ, ಮುನಿಯಪ್ಪ ದನದಮನಿ, ಶಿವನಗೌಡ ದನದಮನಿ, ಅಂಬ್ರಪ್ಪ ಮದ್ಲೂರ್, ಗವಿಸಿದ್ದಪ್ಪ ಕನಗಣ್ಣನವರ್, ಮಲ್ಲಪ್ಪ ಕಲ್ಗುಡಿ, ಮಲ್ಲಪ್ಪ ಗೌಡ್ರು, ಗವಿಸಿದ್ದಪ್ಪ ಚಿಂಚರ್, ಮರಿಯಪ್ಪ ಹರಿಜನ, ಈರಪ್ಪ ಮಂಗಳೂರು, ವಿರುಪಾಕ್ಷಿ ಹರಿಜನ, ಚೆನ್ನಪ್ಪ ಜಿನ್ನಾಪುರ, ಷಣ್ಮುಖಪ್ಪ ದನದಮನಿ, ಹನುಮಂತಪ್ಪ ಡಗ್ಗಿ, ದ್ಯಾಮಣ್ಣ ದನದಮನಿ, ಶಿವೂ ಸಣ್ಣಹಳ್ಳಿ, ಹನುಮಂತಪ್ಪ ಚಿಂಚರ್ ಹಾಗೂ ಶರಣಪ್ಪ ಮಾಲಿಗೌಡ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.






