ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೊಪ್ಪಳದಲ್ಲಿ ಪ್ರತಿಭಟನೆ
ಒಂದು ಸಮುದಾಯವನ್ನು ದೂಷಿಸುತ್ತಾ ಹೊದರೆ ಶಾಶ್ವತವಾಗಿ ಇರಲು ಸಾದ್ಯವೆಂಬ ದೃಷ್ಠಿಕೋನ ಬಿಜೆಪಿಯವರು ಇಟ್ಟಿಕೊಂಡಿದ್ದಾರೆ : ಸಂಸದ ರಾಜಶೇಖರ ಹಿಟ್ನಾಳ್

ಕೊಪ್ಪಳ : ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ಕೊಪ್ಪಳ ನಗರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ಸರ್ವ ಜನಾಂಗದ ಶಾಂತಿಯ ತೋಟ ಮತ್ತು ಎಲ್ಲಾ ಧರ್ಮದವರು ಸಮಾನರಾಗಿ ಬದುಕುವ ದೇಶ ನಮ್ಮ ಭಾರತ. ಅದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದಾಗನಿಂದ ಒಂದು ಸಮುದಾಯವನ್ನು ದೂಷಿಸುತ್ತಾ ಹೋದರೆ ನಾವು ಶಾಶ್ವತವಾಗಿ ಇರಲು ಸಾದ್ಯವೆಂಬ ದೃಷ್ಠಿಕೋನವನ್ನು ಪ್ರಧಾನಿ ಮೋದಿಯವರು ಸೇರಿ ಬಿಜೆಪಿಯವರು ಇಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ತಂದು ವಕ್ಫ್ ಅನ್ನು ಶಾಶ್ವತವಾಗಿ ಮುಚ್ಚುವ ಮರಣ ಶಾಸನವನ್ನು ಬಿಜೆಪಿ ಜಾರಿಗೆ ತಂದಿದೆ. ನಮ್ಮ ಇಂಡಿಯಾ ಒಕ್ಕೂಟದ ಎಲ್ಲಾ ನಾಯಕರು ಈ ವಕ್ಫ್ ಕಾಯ್ದೆ ಯನ್ನು ಪ್ರಶ್ನೆಮಾಡಿದ್ದಾರೆ ಎಂದು ಹೇಳಿದರು.
ಅಮಿತ್ ಶಾ ಅವರು ವಕ್ಫ್ ಆಸ್ತಿ ಹೆಚ್ಚಾಗಿದೆ ಇದಕ್ಕೆ ಕಾಂಗ್ರೇಸ್ ಸರ್ಕಾರ ಎಂದು ಹೇಳುತ್ತಾರೆ ದಾನಿಗಳು ಹೆಚ್ಚಾದರೆ ಅವರಿಗೆ ನೋವು ಅಗುತ್ತೆ, ಈ ವಕ್ಫ್ ಕಾಯ್ದೆಗೆ ತಿದ್ದು ಪಡಿ ಮಾಡಲು ಮುಖ್ಯ ಕಾರಣ ವಕ್ಫ್ ಆಸ್ತಿ ಹೆಚ್ಚಾಗಿದೆ ಮತ್ತು ಹೆಚ್ಚು ದಾನ ಮಾಡುತ್ತಿದ್ದಾರೆ ಇದನ್ನು ತಡೆಯಲು ಈ ರೀತಿ ಮಾಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಈ ಹೊರಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರಾದ ಮಾನ್ವಿ ಪಾಷಾ ಅವರು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ್ ಹಿಟ್ನಾಳ, ಕುಡ ಅಧ್ಯಕ್ಷ್ಯ ಶ್ರೀನಿವಾಸ ಗುಪ್ತ, ಮಾಜಿ ಸಂಸದ ಕರಡಿಸಂಗಣ್ಣ ಮತ್ತು ಕಾಟನ್ ಪಾಷಾ, ಮಾನ್ವಿ ಪಾಷಾ, ಮುಫ್ತಿ ನಜೀರ್ ಅಹ್ಮದ್, ಮುಹಮ್ಮದ್ ಅಲಿ, ವಕೀಲರಾದ ಆಸಿಫ್ ಅಲಿ, ಸಾಮಾಜಿಕ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.