Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೇಸರಿ ಹೂವಿನ ಕೃಷಿಯಲ್ಲಿ ಯಶಸ್ವಿಯಾದ...

ಕೇಸರಿ ಹೂವಿನ ಕೃಷಿಯಲ್ಲಿ ಯಶಸ್ವಿಯಾದ ಪ್ರಗತಿಪರ ರೈತ ಲೋಕೇಶ್

ವಾರ್ತಾಭಾರತಿವಾರ್ತಾಭಾರತಿ12 Feb 2024 3:18 PM IST
share
ಕೇಸರಿ ಹೂವಿನ ಕೃಷಿಯಲ್ಲಿ ಯಶಸ್ವಿಯಾದ ಪ್ರಗತಿಪರ ರೈತ ಲೋಕೇಶ್
ಕೇಸರಿ ಬೆಳೆ ಜೊತೆಗೆ ಲೋಕೇಶ್ ತಮ್ಮ ಪ್ರಯೋಗಾಲಯದಲ್ಲಿ ಅತ್ಯಂತ ದುಬಾರಿ ಬೆಲೆಯ ಬ್ರೆಜಿಲ್ ಬ್ಲೂ ಆಲೂಗಡ್ಡೆ ಕೂಡಾ ಬೆಳೆದಿದ್ದಾರೆ. ಬ್ರೆಜಿಲ್ ಬ್ಲೂ ಆಲೂಗಡ್ಡೆ ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 800 ರೂ. ಬೆಲೆ ಇದೆ. ಅದನ್ನು ಸದ್ಯ ಬಿತ್ತನೆ ಬೀಜ ಮಾಡುವ ಹಂತದಲ್ಲಿದ್ದು, ಬ್ರೆಜಿಲ್ ಆಲೂಗಡ್ಡೆ ಬೆಳೆಯುವಲ್ಲಿಯೂ ಲೋಕೇಶ್ ಯಶಸ್ವಿಯಾಗಿದ್ದಾರೆ.

ಕೋಲಾರ: ಕೆಂಪು ಚಿನ್ನದ ಬೆಲೆ ಕೇಳಿದರೇನೆ ಎಲ್ಲರೂ ಬೆಚ್ಚಿ ಬೀಳುತ್ತಾರೆ, ಏಕೆಂದರೆ ಅದನ್ನು ಎಲ್ಲ ಕಡೆಯೂ ಬೆಳೆಯಲು ಆಗುವುದಿಲ್ಲ.ಅದಕ್ಕೆ ಕೆಂಪು ಚಿನ್ನಕ್ಕೆ ಮಿತಿಮೀರಿದ ಬೇಡಿಕೆ ಇದೆ. ಇದನ್ನು ಬೆಳೆಯುವವರು ಕೋಟ್ಯಾಧಿಪತಿಗಳಾಗುತ್ತಾರೆ. ಇದೆ ಕಾರಣಕ್ಕಾಗಿಯೇ ಅದನ್ನು ಕೆಂಪು ಚಿನ್ನ ಎಂದೇ ಕರೆಯುತ್ತಾರೆ. ಅಷ್ಟಕ್ಕೂ ಯಾವುದು ಆ ಬೆಳೆ ಅಂತೀರಾ ಅದುವೇ ಕೇಸರಿ ಹೂವು.

ಕೇಸರಿ ಅಂದಾಕ್ಷಣ ಅದು ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತಾರೆ ಅನ್ನೋ ಮಾತಿದೆ. ಅದಕ್ಕೆ ಮುಖ್ಯ ಕಾರಣ ಕೇಸರಿ ಬೆಳೆಯಲು ಸೂಕ್ತ ವಾತಾವರಣ ಇರೋದು ಕಾಶ್ಮೀರದಲ್ಲಿ ಮಾತ್ರ. ಅದೇ ರೀತಿ ಇರಾನ್‌ನಲ್ಲಿ ಸಹ ಕೇಸರಿ ಬೆಳೆಯಲು ವಾತಾವರಣ ಸೂಕ್ತವಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕಾಶ್ಮೀರ ಮತ್ತು ಇರಾನ್ ಕೇಸರಿ ಮಾತ್ರವೇ ಲಭ್ಯವಾಗುತ್ತಿದೆ. ಆದರೆ ಅಸಾಧ್ಯ ಎನ್ನುವಂತೆ ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಪ್ರಗತಿಪರ ಹಾಗೂ ಸಾವಯವ ಕೃಷಿಕ ಹಾಗೂ ಕೃಷಿ ವಿಜ್ಞಾನಿ ಲೋಕೇಶ್ ಎಂಬವರು ಬಯಲು ಸೀಮೆ ಕೋಲಾರದಲ್ಲಿ ಕೇಸರಿ ಬೆಳೆ ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ.

ಲೋಕೇಶ್ ಅವರು ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕೇಸರಿ ಬೆಳೆಯಲು ಬೇಕಾಗುವ ವಾತಾವರಣವನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ಕೇಸರಿ ಬೆಳೆದು ಯಶಸ್ವಿಯಾಗಿದ್ದಾರೆ. ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕಾಶ್ಮೀರದ ರೀತಿಯಲ್ಲಿರುವ ಹವಾನಿಯಂತ್ರಿತ ಕೊಠಡಿ ಸೃಷ್ಟಿಮಾಡಿಕೊಂಡು ನಂತರ ಕಾಶ್ಮೀರದಿಂದ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು ಕೇಸರಿ ಬೆಳೆ ಬೆಳೆಯಲು ನಿರ್ಧರಿಸಿ ಪ್ರಾಯೋಗಿಕವಾಗಿ ಇದನ್ನು ಬೆಳೆದಿದ್ದಾರೆ. ಸುಮಾರು ಹತ್ತು ಸಾವಿರ ರೂ.ಗೆ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು ಅದನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಇಂಡೋರ್‌ಫಾರ್ಮಿಂಗ್ ಮಾಡಿದ್ದಾರೆ. ಈ ವೇಳೆ ಅವರಿಗೆ ಮೊದಲ ಬಿತ್ತನೆಯಲ್ಲೇ ಸುಮಾರು 20ಗ್ರಾಂ ಕೇಸರಿ ಸಿಕ್ಕಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಕೇಸರಿಗೆ 1,000-1,500 ರೂ. ಬೆಲೆ ಇದೆ. ಹಾಗಾಗಿ ಲೋಕೇಶ್ ಅವರಿಗೆ ಹತ್ತು ಸಾವಿರಕ್ಕೆ ಹತ್ತು ಸಾವಿರ ಲಾಭ ಸಿಕ್ಕಿದೆ. ಅಲ್ಲದೆ ಕೇಸರಿ ಗಡ್ಡೆಗಳು ಒಮ್ಮ ಬಿತ್ತನೆಮಾಡಿದರೆ ಅದು ಜೀವನ ಪರ್ಯಂತ ಹೂ ಬಿಡುತ್ತದೆ. ಅಲ್ಲದೆ ಗಡ್ಡೆಗಳು ಸಹ ಹೆಚ್ಚಾಗುತ್ತದೆ ಹಾಗಾಗಿ ಅವರಿಗೆ ಪ್ರತೀ ವರ್ಷ ನಿರೀಕ್ಷೆಗೂ ಮೀರಿದ ಲಾಭ ಸಿಗುತ್ತದೆ ಎಂಬುವುದು ಲೋಕೇಶ್ ಅವರ ಮಾತಾಗಿದೆ.

ಕಾರ್ಡಿಸೆಪ್ಸ್ ಅನ್ನೋ ಮಶ್ರೂಮ್(ಅಣಬೆ)ಯನ್ನು ಲೋಕೇಶ್ ಬೆಳೆದು ಯಶಸ್ವಿಯಾಗಿದ್ದಾರೆ. ವಿದೇಶಗಳಲ್ಲಿ ಕಾರ್ಡಿಸೆಪ್ಸ್ ಮಶ್ರೂಮ್ ಒಂದು ಕೆಜಿಗೆ 3.5 ಲಕ್ಷ ರೂ.ಇದೆ ಇದನ್ನು ನ್ಯಾಚುರಲ್ ವಯಾಗ್ರ ಎಂದು ಕರೆಯುತ್ತಾರೆ. ಈ ಮಶ್ರೂಮ್‌ಅನ್ನು ಹೆಚ್ಚಾಗಿ ಬಾಡಿ ಬಿಲ್ಡರ್‌ಗಳು ಹಾಗೂ ಔಷಗಳ ತಯಾರಿಕೆಗೆ ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿ ಇದೂ ಕೂಡಾ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದು ಇದನ್ನು ಲೋಕೇಶ್ ಅವರು ತಮ್ಮ ಪ್ರಯೋಗಾಲಯದಲ್ಲಿ ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಕೃಷಿಯಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಮಾಡುವ ಮೂಲಕ ಹೆಸರು ಮಾಡಿದ್ದ ಕೋಲಾರ ಕೃಷಿಕರು ಸದ್ಯ ಅತ್ಯಂತ ಬೆಲೆ ಬಾಳುವ ಹಾಗೂ ಅಸಾಧ್ಯ ಎನ್ನುವ ಕೇಸರಿ, ಮಶ್ರೂಮ್‌ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಹೊಸದೊಂದು ಪ್ರಯತ್ನಕ್ಕೆ ದಾರಿ ತೋರುವ ಕೆಲಸ ಮಾಡಿದ್ದಾರೆ. ಸದ್ಯ ಇದು ನಿಜಕ್ಕೂ ದೊಡ್ಡ ಮಟ್ಟದಲ್ಲಿ ಬೆಳೆಯಲು ಅನುಕೂಲವಾದರೆ ಹೊಸ ಕ್ರಾಂತಿಕಾರಿ ಕೃಷಿಗೆ ನಾಂದಿಯಾಗೋದರಲ್ಲಿ ಅನುಮಾನವಿಲ್ಲ.

ಮಾರುಕಟ್ಟೆಯಲ್ಲಿ ಕಾಶ್ಮೀರ ಕೇಸರಿ ಹಾಗೂ ಇರಾನ್ ಕೇಸರಿ ಮಾತ್ರ ಸಿಗುತ್ತದೆ. ಒಂದು ಕೆಜಿ ಕೇಸರಿಗೆ ಐದರಿಂದ-ಹತ್ತು ಲಕ್ಷ ರೂ.ವರೆಗೆ ಬೆಲೆ ಇದೆ. ಕೇಸರಿಗೆ ಸದ್ಯ ಪ್ರತೀ ವರ್ಷ ೧೦೦ ಟನ್‌ಗಳಷ್ಟು ಬೇಡಿಕೆ ಇದ್ದು, ಸದ್ಯ ೩.೮ ಟನ್‌ಗಳಷ್ಟು ಮಾತ್ರ ಕೇಸರಿ ಉತ್ಪಾದನೆಯಾಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೇಸರಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಕೇಸರಿ ಅತ್ಯಂತ ಲಾಭದಾಯಕ ಬೆಳೆ.

ಲೋಕೇಶ್, ಕೃಷಿ ವಿಜ್ಞಾನಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X