Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮರವಂತೆ ಬೀಚ್‌ನಲ್ಲಿ ಅಪಾಯಕ್ಕೆ ಆಹ್ವಾನ...

ಮರವಂತೆ ಬೀಚ್‌ನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪ್ರವಾಸಿಗರ "ಫೋಟೊ ಪೈಪೋಟಿ"

ಯೋಗೀಶ್ ಕುಂಭಾಸಿಯೋಗೀಶ್ ಕುಂಭಾಸಿ11 Jun 2026 12:51 PM IST
share
ಮರವಂತೆ ಬೀಚ್‌ನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪ್ರವಾಸಿಗರ ಫೋಟೊ ಪೈಪೋಟಿ
ಮಳೆಗಾಲದಲ್ಲಿ ಬೇಕಿದೆ ಭಾರೀ ಎಚ್ಚರಿಕೆ ►ಪೊಲೀಸ್, ಸಿಎಸ್ಪಿ ಸಿಬ್ಬಂದಿಯ ಮಾತಿಗೂ ಡೋಂಟ್ ಕೇರ್!

ಕುಂದಾಪುರ : ಪ್ರಾಕೃತಿಕ ಸೌಂದರ್ಯ, ಅದ್ಭುತ, ವಿಹಂಗಮ ನೋಟಕ್ಕಾಗಿ ವಿಶ್ವವಿಖ್ಯಾತಿ ಪಡೆದಿರುವ ತ್ರಾಸಿ-ಮರವಂತೆ ಕಡಲ ಕಿನಾರೆಯಲ್ಲಿ ಮಳೆಗಾಲದ ಸಂದರ್ಭ ರಾಜ್ಯ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರ ಜೀವ ಭದ್ರತೆಗೆ ಕ್ರಮವಹಿಸುವುದೇ ಪೊಲೀಸರು, ಜೀವರಕ್ಷಕರು ಹಾಗೂ ಸ್ಥಳೀಯರಿಗೆ ಹರಸಾಹಸವಾಗಿದೆ.

ಒಂದೆಡೆ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಗೃಹರಕ್ಷಕರು ಸಹಿತ ಹಲವಾರು ಸಿಬ್ಬಂದಿಗಳು ಪ್ರವಾಸಿಗರ ಪ್ರಾಣ ರಕ್ಷಣೆಗೆ ಟೊಂಕ ಕಟ್ಟಿ ನಿಂತರೂ ಕೂಡ ಫೋಟೊ, ಸೆಲ್ಫಿ ಕ್ಲಿಕ್ಕಿಸುವ ಆತುರದಲ್ಲಿ ಸಮುದ್ರದಲೆಗಳ ನಡುವೆ, ಬಂಡೆಕಲ್ಲುಗಳ ಮೇಲೆ ಒಂದಷ್ಟು ಜನರ ಆಟಾಟೋಪ ಹೆಚ್ಚಿದೆ.

ಯಾರ ಮಾತಿಗೂ ಸೊಪ್ಪು ಹಾಕದ ಪ್ರವಾಸಿಗರು: ಉಡುಪಿ ಜಿಲ್ಲೆಯ ತ್ರಾಸಿ-ಮರವಂತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕವಾಗಿ ಸಾಗುವ ಈ ಪ್ರದೇಶವು ಅಂದಾಜು 2.5-3 ಕಿ.ಮೀ. ದೂರವಿದ್ದು ಒಂದಷ್ಟು ದೂರ ನದಿ-ಸಮುದ್ರ ಏಕಕಾಲಕ್ಕೆ ಕಾಣುವ ಪ್ರದೇಶವಾಗಿದೆ. ಈ ಭಾಗದ ನಡುವೆ ಹಾದು ಹೋಗುವಾಗ ಪ್ರವಾಸಿಗರು ವಾಹನದಿಂದ ಇಳಿದು ಇಲ್ಲಿನ ವಿಹಂಗಮ ನೋಟವನ್ನು ಆಸ್ವಾದಿಸುವ ಬದಲು, ನೇರ ಸಮುದ್ರದ ನೀರಿಗಿಳಿಯುವುದು, ತಡೆಗೋಡೆ ಸಲುವಾಗಿ ಹಾಕಲಾದ ಬಂಡೆಕಲ್ಲುಗಳ ಮೂಲಕ ಕಡಲಿನ ತೆರೆ ರಭಸದಿಂದ ಬಂದಪ್ಪಳಿಸುವ ಪ್ರದೇಶಕ್ಕೆ ತೆರಳಿ ಫೋಟೊ, ಸೆಲ್ಫಿ ಕ್ಲಿಕ್ಕಿಸುವ ಹರಸಾಹಸ ಮಾಡುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಬಹಳಷ್ಟು ದುರಂತಗಳು ಸಂಭವಿಸಿವೆ. ಎಚ್ಚರ ತಪ್ಪಿದರೆ ಮುಂದೆಯೂ ಇದು ಪುನರಾವರ್ತನೆಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗದಂತೆ ತಡೆಯಲು ಇಲ್ಲಿನ ಸ್ಥಳೀಯರು, ಗಸ್ತು ಸಿಬ್ಬಂದಿ, ಮೀನುಗಾರರು ಪ್ರಯತ್ನಿಸುತ್ತಿದ್ದರು ಕೆಲವರು ಯಾರಿಗೂ ಕ್ಯಾರೇ ಎನ್ನದೆ ಪ್ರಕ್ಷುಬ್ದ ಸಮುದ್ರದಲ್ಲಿ ನೀರಿನೊಂದಿಗೆ ಸರಸವಾಡುವ ಅಪಾಯಕ್ಕೆ ಕೈಹಾಕುತ್ತಾರೆ.

ಇಲಾಖೆಗಳಿಂದ ಕ್ರಮ: ಪೊಲೀಸ್ ಇಲಾಖೆ, ಸಿಎಸ್ಪಿ(ಕರಾವಳಿ ಕಾವಲು ಪಡೆ), ಕರಾವಳಿ ನಿಯಂತ್ರಣ ದಳ (ಕೆಎನ್‌ಡಿ), ಹೋಂ ಗಾರ್ಡ್ಸ್, ಪ್ರವಾಸಿ ಮಿತ್ರ ಸಿಬ್ಬಂದಿ ನಿತ್ಯವೂ ಎರಡು ಪಾಳಿಯಲ್ಲಿ 12 ಮಂದಿಯಂತೆ ಮೂರು ಕಡೆ ಪ್ರವಾಸಿಗರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ. ತ್ರಾಸಿ ಬೀಚ್, ಮರವಂತೆ ಶ್ರೀವರಹಸ್ವಾಮಿ ದೇವಸ್ಥಾನದ ಎದುರು ವಾಚ್‌ಟವರ್ ನಿರ್ಮಿಸಿದ್ದು, ಮೈಕ್ ಹಾಗೂ ವಿಸಿಲ್ ಮೂಲಕ ಪ್ರವಾಸಿಗರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಪಿಎಸ್ಸೈ ಪವನ್ ನಾಯಕ್, ಕರಾವಳಿ ಕಾವಲು ಪಡೆಯ ಪಿಎಸ್ಸೈ ಸುಬ್ರಮಣ್ಯ ತಂಡ ನಿತ್ಯವೂ ಇಲ್ಲಿ ಗಸ್ತು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ.

ದುಸ್ಥಿತಿಯಲ್ಲಿ ವಾಚ್ ಟವರ್ ಮೆಟ್ಟಿಲು

ತ್ರಾಸಿ ಹಾಗೂ ಮರವಂತೆಯಲ್ಲಿ ನಿರ್ಮಿಸಿರುವ ವಾಚ್‌ಟವರ್‌ನ ಕಬ್ಬಿಣದ ಮೆಟ್ಟಿಲುಗಳು ಸಮುದ್ರದಿಂದ ಬೀಸುವ ಉಪ್ಪುಗಾಳಿಗೆ ತುಕ್ಕು ಹಿಡಿದು ತೀರಾ ದುಸ್ಥಿತಿಗೆ ತಲುಪಿದ್ದು, ಗಸ್ತು ಸಿಬ್ಬಂದಿ ಟವರ್ ಹತ್ತಿ ಇಳಿಯಲು ಹರಸಾಹಸ ಪಡಬೇಕಾಗಿದೆ. ಸಿಬ್ಬಂದಿಯೇ ಮರದ ಹಲಗೆ ಬಳಸಿ ಮೆಟ್ಟಿಲು ನಿರ್ಮಿಸಿಕೊಂಡಿದ್ದಾರೆ. ತ್ರಾಸಿ ಹಾಗೂ ಮರವಂತೆಯಲ್ಲಿ ನಿರ್ಮಿಸಿರುವ ವಾಚ್‌ಟವರ್‌ನ ಕಬ್ಬಿಣದ ಮೆಟ್ಟಿಲುಗಳು ಸಮುದ್ರದಿಂದ ಬೀಸುವ ಉಪ್ಪುಗಾಳಿಗೆ ತುಕ್ಕು ಹಿಡಿದು ತೀರಾ ದುಸ್ಥಿತಿಗೆ ತಲುಪಿದ್ದು, ಗಸ್ತು ಸಿಬ್ಬಂದಿ ಟವರ್ ಹತ್ತಿ ಇಳಿಯಲು ಹರಸಾಹಸ ಪಡಬೇಕಾಗಿದೆ. ಸಿಬ್ಬಂದಿಯೇ ಮರದ ಹಲಗೆ ಬಳಸಿ ಮೆಟ್ಟಿಲು ನಿರ್ಮಿಸಿಕೊಂಡಿದ್ದಾರೆ.

ಮಳೆಗಾಲದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯಬಾರದು. ಕಡಲಿಗೆ ಹಾಕಿದ ಕಲ್ಲುಗಳ ಮೇಲೆ ನಿಂತು ಫೋಟೊ ಕ್ಲಿಕ್ಕಿಸಲು ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ದೂರದಿಂದಲೇ ಸಮುದ್ರ ತೀರವನ್ನು ನೋಡುವುದು ಉತ್ತಮ. ಪ್ರವಾಸಿಗರ ಸುರಕ್ಷತೆ ನಿಟ್ಟಿನಲ್ಲಿ ಪೊಲೀಸ್, ಸಿಎಸ್ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಚ್ ಟವರ್ ಸಮಸ್ಯೆ, ಲೈಫ್ ಗಾರ್ಡ್ ವಿಚಾರದಲ್ಲಿ ದೂರುಗಳು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಗಮನಕ್ಕೆ ತರಲಾಗುವುದು.

-ಹರಿರಾಮ್ ಶಂಕರ್,

ಉಡುಪಿ ಎಸ್ಪಿ ಮತ್ತು ಸಿಎಸ್ಪಿ ಪ್ರಭಾರ ಎಸ್ಪಿ

ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಇಕ್ಕೆಲದಲ್ಲಿ ಸಮುದ್ರ-ನದಿ ವಿಹಂಗಮ ನೋಟ ಸವಿಯಲು ಆಗಮಿಸುವ ಪ್ರವಾಸಿಗರು ಬೃಹತ್ ಅಲೆಗಳ ಬಗ್ಗೆ ಗಮನ ಹರಿಸಬೇಕು. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು, ಸ್ಥಳಿಯಾಡಳಿತ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡರೂ ಕೂಡ ಕೆಲವರು ದುಸ್ಸಾಹಸಕ್ಕೆ ಮುಂದಾಗುತ್ತಾರೆ. ಯಾವುದೇ ಪ್ರವಾಸಿಗರು ಸ್ಥಳೀಯರ ಮಾತು, ಬುದ್ಧಿವಾದ ಕೇಳಿದರೆ ಸಂಭಾವ್ಯ ಅವಘಡ ತಪ್ಪುತ್ತದೆ.

-ಇಬ್ರಾಹೀಂ ಗಂಗೊಳ್ಳಿ, ಸಾಮಾಜಿಕ ಕಾರ್ಯಕರ್ತ

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಹಿತದೃಷ್ಟಿಯಿಂದ ಈ ಮರವಂತೆ ಬೀಚ್‌ನಲ್ಲಿ ಅಗತ್ಯ ಕ್ರಮ ವಹಿಸಬೇಕು. ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ಸ್ಥಿತಿ ತಿಳಿದಿರುವುದಿಲ್ಲ. ಜನರು ನೀರು, ಕಲ್ಲುಗಳ ಮೇಲೆ ಹೋಗದಂತೆ ನಿರ್ಬಂಧಿಸಲು ಅಗತ್ಯ ಸ್ಥಳಗಳಲ್ಲಿ ಬಲೆ ಅಳವಡಿಕೆ, ಸೂಚನಾ ಫಲಕಗಳನ್ನು ಹಾಕಬೇಕು.

-ಗೋಪಾಲಕೃಷ್ಣ ನಾಡ, ಸ್ಥಳೀಯರು

Tags

Maravanthe Beach
share
ಯೋಗೀಶ್ ಕುಂಭಾಸಿ
ಯೋಗೀಶ್ ಕುಂಭಾಸಿ
Next Story
X